ಚಿಕ್ಕಮಗಳೂರು: ಕೋವಿಡ್ ಬಿಕ್ಕಟ್ಟಿನಿಂದಾಗಿ ಈ ಬಾರಿ ದೀಪಾವಳಿ ದೀಪೋತ್ಸವಕ್ಕೆ ಬೆಟ್ಟಕ್ಕೆ ತೆರೆಳದಂತೆ ಹೊರಗಿನವರಿಗೆ ನಿರ್ಬಂಧ ವಿಧಿಸಲಾಗಿದೆ.
ತಾಲ್ಲೂಕಿನ ಬಿಂಡಿಗಾ ಮಲ್ಲೇನಹಳ್ಳಿಯ 100 ಗ್ರಾಮಸ್ಥರಿಗೆ ಮಾತ್ರ ಬೆಟ್ಟಕ್ಕೆ ತೆರಳಲು ಜಿಲ್ಲಾಡಳಿತ ಅನುಮತಿ ನೀಡಿದೆ. ಬೆಟ್ಟದಲ್ಲಿ ಅವರು ಶನಿವಾರ ಕೈಂಕರ್ಯಗಳನ್ನು ನೆರವೇರಿಸುವರು ಎಂದು ಶ್ರೀದೇವೀರಮ್ಮ ದೇಗುಲ ಅಭಿವೃದ್ಧಿ ಟ್ರಸ್ಟ್ನ ಸುನೀಲ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಬೆಟ್ಟದ ಸಂಪರ್ಕ ಮಾರ್ಗಗಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ನಾಲ್ಕು ಚೆಕ್ ಪೋಸ್ಟ್ ವ್ಯವಸ್ಥೆ ಮಾಡಿ, ನಿಗಾ ಇಟ್ಟಿದ್ದೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಹಾಕೆ ತಿಳಿಸಿದರು.
ತಾಲ್ಲೂಕಿನ ಬಿಂಡಿಗಾ ಮಲ್ಲೇನಹಳ್ಳಿಯಲ್ಲಿ ಇದೇ 13ರಿಂದ 17ರವರೆಗೆ ದೇವೀರಮ್ಮ ಜಾತ್ರಾ ಮಹೋತ್ಸವ ಸರಳವಾಗಿ ಜರುಗಲಿದೆ ಎಂದು ಟ್ರಸ್ಟ್ನವರು ತಿಳಿಸಿದ್ದಾರೆ.