<p><strong>ಚಿಕ್ಕಮಗಳೂರು:</strong> ನಗರದಲ್ಲಿ ಶುಕ್ರವಾರ ಜರುಗಿದ ಕರುಮಾರಿಯಮ್ಮ ದೇವಿ ಕರಗ ಮಹೋತ್ಸವ, ಸಿಡಿ ಉತ್ಸವದಲ್ಲಿ ಕೆಲ ಭಕ್ತರು ಬೆನ್ನಿಗೆ ಕಬ್ಬಿಣದ ಬಳೆ ಸಿಕ್ಕಿಸಿ, ಹಗ್ಗ ಕಟ್ಟಿಕೊಂಡು ದೇವಿ ಪ್ರತಿಷ್ಠಾಪಿಸಿದ್ದ ವಾಹನವನ್ನು ಎಳೆದೊಯ್ದರು.</p>.<p>ಮಹೋತ್ಸವದ ಅಂಗವಾಗಿ ದೇವಿ ಮೆರವಣಿಗೆ ಜರುಗಿತು. ಐವರು ಭಕ್ತರು ಬೆನ್ನಿಗೆ ಸಿಕ್ಕಿಸಿಕೊಂಡಿದ್ದ ಕಬ್ಬಿಣದ ಬಳೆಗಳಿಗೆ ಹಗ್ಗಗಳನ್ನು ಕಟ್ಟಿಕೊಂಡು ಟ್ರ್ಯಾಕ್ಟರ್ ಎಳೆದು ಸಾಗಿದರು.</p>.<p>ಲಾರಿಯೊಂದರ ಮುಂಭಾಗಕ್ಕೆ ಸಿಕ್ಕಿಸಿದ್ದ ಕಟ್ಟಿಗೆಗೆ ಹಗ್ಗ ಕಟ್ಟಿಕೊಂಡು ಭಕ್ತರೊಬ್ಬರು ಅಡ್ಡಡ್ಡ ನೇತಾಡಿಕೊಂಡು ಸಾಗಿದರು. ನೂರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.</p>.<p>‘ವಾಹನ ಎಳೆದು, ದೇವಿಗೆ ಪೂಜೆ ಸಲ್ಲಿಸಿ ಹರಕೆ ತೀರಿಸುತ್ತಾರೆ. ಬೇಡ ಎಂದು ಹೇಳಿದರೆ ಕೇಳಲ್ಲ’ ಎಂದು ದೇಗುಲ ಸಮಿತಿ ಅಧ್ಯಕ್ಷ ರಘು ತಿಳಿಸಿದರು.</p>.<p>‘ಬೆನ್ನಿಗೆ ಕಬ್ಬಿಣದ ಬಳೆ ಸಿಕ್ಕಿಸಿಕೊಂಡು ಹಗ್ಗ ಕಟ್ಟಿಕೊಂಡು ವಾಹನ ಎಳೆದಿರುವುದು ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲನೆ ಮಾಡಲಾಗುವುದು’ ಎಂದು ತಹಶೀಲ್ದಾರ್ ವಿನಾಯಕ ಸಾಗರ್ ‘ಪ್ರಜಾವಾಣಿ’ಗೆ ತಿಳಿಸಿದರು.<br><br></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು:</strong> ನಗರದಲ್ಲಿ ಶುಕ್ರವಾರ ಜರುಗಿದ ಕರುಮಾರಿಯಮ್ಮ ದೇವಿ ಕರಗ ಮಹೋತ್ಸವ, ಸಿಡಿ ಉತ್ಸವದಲ್ಲಿ ಕೆಲ ಭಕ್ತರು ಬೆನ್ನಿಗೆ ಕಬ್ಬಿಣದ ಬಳೆ ಸಿಕ್ಕಿಸಿ, ಹಗ್ಗ ಕಟ್ಟಿಕೊಂಡು ದೇವಿ ಪ್ರತಿಷ್ಠಾಪಿಸಿದ್ದ ವಾಹನವನ್ನು ಎಳೆದೊಯ್ದರು.</p>.<p>ಮಹೋತ್ಸವದ ಅಂಗವಾಗಿ ದೇವಿ ಮೆರವಣಿಗೆ ಜರುಗಿತು. ಐವರು ಭಕ್ತರು ಬೆನ್ನಿಗೆ ಸಿಕ್ಕಿಸಿಕೊಂಡಿದ್ದ ಕಬ್ಬಿಣದ ಬಳೆಗಳಿಗೆ ಹಗ್ಗಗಳನ್ನು ಕಟ್ಟಿಕೊಂಡು ಟ್ರ್ಯಾಕ್ಟರ್ ಎಳೆದು ಸಾಗಿದರು.</p>.<p>ಲಾರಿಯೊಂದರ ಮುಂಭಾಗಕ್ಕೆ ಸಿಕ್ಕಿಸಿದ್ದ ಕಟ್ಟಿಗೆಗೆ ಹಗ್ಗ ಕಟ್ಟಿಕೊಂಡು ಭಕ್ತರೊಬ್ಬರು ಅಡ್ಡಡ್ಡ ನೇತಾಡಿಕೊಂಡು ಸಾಗಿದರು. ನೂರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.</p>.<p>‘ವಾಹನ ಎಳೆದು, ದೇವಿಗೆ ಪೂಜೆ ಸಲ್ಲಿಸಿ ಹರಕೆ ತೀರಿಸುತ್ತಾರೆ. ಬೇಡ ಎಂದು ಹೇಳಿದರೆ ಕೇಳಲ್ಲ’ ಎಂದು ದೇಗುಲ ಸಮಿತಿ ಅಧ್ಯಕ್ಷ ರಘು ತಿಳಿಸಿದರು.</p>.<p>‘ಬೆನ್ನಿಗೆ ಕಬ್ಬಿಣದ ಬಳೆ ಸಿಕ್ಕಿಸಿಕೊಂಡು ಹಗ್ಗ ಕಟ್ಟಿಕೊಂಡು ವಾಹನ ಎಳೆದಿರುವುದು ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲನೆ ಮಾಡಲಾಗುವುದು’ ಎಂದು ತಹಶೀಲ್ದಾರ್ ವಿನಾಯಕ ಸಾಗರ್ ‘ಪ್ರಜಾವಾಣಿ’ಗೆ ತಿಳಿಸಿದರು.<br><br></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>