‘ನನಗೆ ಯಾವುದೇ ಜಮೀನು ಇಲ್ಲ. ಆದರೂ, ಕಡೂರಿನ ಕರ್ಣಾಟಕ ಬ್ಯಾಂಕ್ ಶಾಖೆಯಲ್ಲಿನ ನನ್ನ ಎಸ್.ಬಿ.ಖಾತೆಗೆ (ಖಾತೆ ಸಂಖ್ಯೆ 4422500100330901) ಬರ ಪರಿಹಾರದ ಹಣ ಜಮೆಯಾಗಿದೆ. 2016ಜುಲೈ 18ರಂದು ₹ 4367 ಹಾಗೂ ಆಗಸ್ಟ್ 2ರಂದು ₹ 950 ಜಮೆಯಾಗಿದೆ. ಕಡೂರು ತಾಲ್ಲೂಕಿನ ಬೀರೂರು ಹೋಬಳಿಯ ಚಿಕ್ಕಂಗಳ ವೃತ್ತದ ಗ್ರಾಮಲೆಕ್ಕಿಗ ಬಿ.ಚಂದ್ರಶೇಖರ ಆಚಾರ್, ರಾಜಸ್ವ ನಿರೀಕ್ಷಕ ಕೆ.ಎಂ.ಪ್ರಸನ್ನ, ಮಧ್ಯವರ್ತಿ ವಾಸುದೇವ ಆಚಾರ್ ಶಾಮೀಲಾಗಿ ಹಣ ಲಪಟಾಯಿಸಲು ಈ ಪಿತೂರಿ ಮಾಡಿದ್ದಾರೆ. ತಹಶೀಲ್ದಾರ್, ತೋಟಗಾರಿಕೆ ಇಲಾಖೆ ಸಹಾಯ ನಿರ್ದೇಸಕ ಸಹಿತ ಆರು ಮಂದಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದಲ್ಲಿ (ಎಸಿಬಿ) ದೂರು ದಾಖಲಿಸಿದ್ದೇವೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.