ಚಿಕ್ಕಮಗಳೂರು: ನಗರದ ಹೊರವಲ ಯದ ನಲ್ಲೂರು, ಯರೇಹಳ್ಳಿ ಭಾಗದಲ್ಲಿ ಮೂರು ಆನೆಗಳು ಬೀಡುಬಿಟ್ಟಿದ್ದು, ಸುತ್ತಮುತ್ತಲಿನ ಜನರಲ್ಲಿ ಆತಂಕ ಮೂಡಿಸಿದೆ. ನಲ್ಲೂರು, ಯರೇಹಳ್ಳಿ ಪ್ರದೇಶದ ಗದ್ದೆ ಭಾಗದಲ್ಲಿ ಆನೆಗಳು ಇವೆ. ಕಬ್ಬು, ಭತ್ತದ ಗದ್ದೆಗಳಲ್ಲಿ ಓಡಾಡಿವೆ. ಗದ್ದೆಗಳಲ್ಲಿ ಹೆಜ್ಜೆ ಗುರುತುಗಳು ಇವೆ. ಕಬ್ಬು, ಭತ್ತ ಹಾಳಾಗಿದೆ.