ಕೊಳೆಯುತ್ತಿವೆ ತೋಟಗಾರಿಕೆ ಬೆಳೆಗಳು: ಮತ್ತೊಂದೆಡೆ ತೋಟಗಾರಿಕೆ ಬೆಳೆಗಳಿಗೆ ಹೆಚ್ಚಿನ ಹಾನಿಯಾಗಿದೆ. ತೋಟಗಾರಿಕಾ ಇಲಾಖೆಯ ಪ್ರಾಥಮಿಕ ವರದಿಯಲ್ಲಿ ಟೊಮೊಟೊ (85 ಹೆಕ್ಟೇರ್,)ಮೆಣಸು (75 ಹೆಕ್ಟೇರ್), ಬದನೆ (10 ಹೆಕ್ಟೇರ್), ಶುಂಠಿ (10 ಹೆಕ್ಟೇರ್), ಬೀನ್ಸ್ (6 ಹೆಕ್ಟೇರ್), ಆಲೂಗೆಡ್ಡೆ (5 ಹೆಕ್ಟೇರ್), ಈರುಳ್ಳಿ (20 ಹೆಕ್ಟೇರ್) ಪ್ರದೇಶಗಳಲ್ಲಿ ಹಾನಿಗೊಂಡ ಪರಿಣಾಮ ತರಕಾರಿ ಬೆಲೆ ಕೂಡ ಗಗನಮುಖಿಯಾಗಿದೆ.