ಚಿಕ್ಕಮಗಳೂರು: ಹಾಪ್ಕಾಮ್ಸ್ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕೆ.ಎಚ್.ಕುಮಾರಸ್ವಾಮಿ, ಉಪಾಧ್ಯಕ್ಷರಾಗಿ ಎನ್.ಪಿ.ರವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತೋಟಗಾರಿಕೆ ಇಲಾಖೆ ಕಚೇರಿ ಸಭಾಂಗಣದಲ್ಲಿ ಈಚೆಗೆ ಚುನಾವಣೆ ನಡೆದಿತ್ತು. ಹಾಮ್ಕಾಮ್ಸ್ ಜಿಲ್ಲಾ ಘಟಕದ ನಿರ್ದೇಶಕರು ಅವಿರೋಧ ವಾಗಿ ಆಯ್ಕೆ ಮಾಡಿದರು. ಚುನಾವ ಣಾಧಿಕಾರಿಯಾಗಿ ಪೃಥ್ವಿಜಿತ್ ಕಾರ್ಯ ನಿರ್ವಹಿಸಿದರು.
ನೂತನ ಅಧ್ಯಕ್ಷ ಕೆ.ಎಚ್ ಕುಮಾರಸ್ವಾಮಿ ಮಾತನಾಡಿ, ‘ಹಾಪ್ ಕಾಮ್ಸ್ಗಳನ್ನು ಜನ ಸ್ನೇಹಿಯಾಗಿಸಲು ಶ್ರಮಿಸಲಾಗುವುದು’ ಎಂದರು.