<p>ಜಯಪುರ (ಬಾಳೆಹೊನ್ನೂರು): ಮೂರು ಗ್ರಾಮ ಪಂಚಾಯಿತಿಗಳ ಗಡಿಯಲ್ಲಿರುವ ಜಲದುರ್ಗ ಸೈಟ್ ಯಾವ ಪಂಚಾಯಿತಿಗೆ ಸೇರಿದೆ ಎಂಬ ಬಗ್ಗೆ ಅಧಿಕಾರಿಗಳಲ್ಲಿ ಮಾಹಿತಿ ಇಲ್ಲದ ಕಾರಣ ಇಲ್ಲಿನ ಜನರು ಮೂಲಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈ ವಿಚಾರದಲ್ಲಿ ಸ್ಪಷ್ಟತೆಯನ್ನು ನೀಡದಿದ್ದರೆ ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.</p>.<p>ಗುಡ್ಡೇತೋಟ, ಜಯಪುರ ಹಾಗೂ ಹೇರೂರು ಗ್ರಾಮ ಪಂಚಾಯಿತಿ ನಡುವಿನಲ್ಲಿರುವ ಜಲದುರ್ಗ ಸೈಟ್, ಬಾಳೆಹೊನ್ನೂರು- ಜಯಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿದೆ. ಇಲ್ಲಿ ಸುಮಾರು 26 ಮನೆಗಳಿವೆ. ಅವ್ಯವಸ್ಥೆ, ಸೌಲಭ್ಯದ ಕೊರತೆಯಿಂದ ಇಲ್ಲಿ ವಾಸಿಸಲಾಗದೆ ಹಲವರು ಹೊರಹೋಗಿದ್ದು, ಪ್ರಸ್ತುತ 13 ಕುಟುಂಬಗಳು ಇಲ್ಲಿವೆ. ಎಲ್ಲರೂ ಕೂಲಿ ಕಾರ್ಮಿಕರಾಗಿದ್ದು ಮಣ್ಣಿನ ಗೋಡೆ, ತಗಡಿನ ಶೀಟ್ ಮನೆಗಳಲ್ಲೇ 9 ವರ್ಷದಿಂದ ವಾಸ ಮಾಡುತ್ತಿದ್ದಾರೆ.</p>.<p>ಇಲ್ಲಿನ 56 ಮಂದಿ ಮತದಾರರು ಪ್ರತಿ ಬಾರಿ ಜಯಪುರದಲ್ಲೇ ಮತದಾನ ಮಾಡುತ್ತಾರೆ. ಇಲ್ಲಿನ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲೂ ಅಧಿಕಾರಿಗಳು ಹಿಂದೇಟು ಹಾಕಿದ್ದರು. ಕೊನೆಗೆ ಶಾಸಕರ ಸೂಚನೆ ಮೇರೆಗೆ ಸಂಪರ್ಕ ನೀಡಿದ್ದಾರೆ. ಇದಕ್ಕಾಗಿ ಮೆಸ್ಕಾಂ ಅಧಿಕಾರಿಗಳು ಪ್ರತಿ ಮನೆಯಿಂದ ₹8 ಸಾವಿರ ಪಡೆದಿದ್ದಾರೆ ಎನ್ನುತ್ತಾರೆ ಸ್ಥಳೀಯರಾದ ನಾಗಪ್ಪ.</p>.<p>ಬೇಸಿಗೆಯಲ್ಲಿ ನೀರಿನ ಕೊರತೆ ಎದುರಾಗುತ್ತಿದೆ. ನಾವು ಯಾರನ್ನು ಕೇಳಬೇಕು ಎಂದು ಅಳಲು ತೋಡಿಕೊಂಡಿದ್ದು ಶಾಂತಾ.</p>.<p>‘ನಮಗೆ ತಕ್ಷಣ ಹಕ್ಕುಪತ್ರ ನೀಡಬೇಕು. ಜೊತೆಗೆ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ಈ ಬಾರಿ ನಾವು ಮತದಾನದಿಂದ ದೂರ ಉಳಿಯುತ್ತೇವೆ’ ಎನ್ನುತ್ತಾರೆ ಬಾಲು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜಯಪುರ (ಬಾಳೆಹೊನ್ನೂರು): ಮೂರು ಗ್ರಾಮ ಪಂಚಾಯಿತಿಗಳ ಗಡಿಯಲ್ಲಿರುವ ಜಲದುರ್ಗ ಸೈಟ್ ಯಾವ ಪಂಚಾಯಿತಿಗೆ ಸೇರಿದೆ ಎಂಬ ಬಗ್ಗೆ ಅಧಿಕಾರಿಗಳಲ್ಲಿ ಮಾಹಿತಿ ಇಲ್ಲದ ಕಾರಣ ಇಲ್ಲಿನ ಜನರು ಮೂಲಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈ ವಿಚಾರದಲ್ಲಿ ಸ್ಪಷ್ಟತೆಯನ್ನು ನೀಡದಿದ್ದರೆ ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.</p>.<p>ಗುಡ್ಡೇತೋಟ, ಜಯಪುರ ಹಾಗೂ ಹೇರೂರು ಗ್ರಾಮ ಪಂಚಾಯಿತಿ ನಡುವಿನಲ್ಲಿರುವ ಜಲದುರ್ಗ ಸೈಟ್, ಬಾಳೆಹೊನ್ನೂರು- ಜಯಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿದೆ. ಇಲ್ಲಿ ಸುಮಾರು 26 ಮನೆಗಳಿವೆ. ಅವ್ಯವಸ್ಥೆ, ಸೌಲಭ್ಯದ ಕೊರತೆಯಿಂದ ಇಲ್ಲಿ ವಾಸಿಸಲಾಗದೆ ಹಲವರು ಹೊರಹೋಗಿದ್ದು, ಪ್ರಸ್ತುತ 13 ಕುಟುಂಬಗಳು ಇಲ್ಲಿವೆ. ಎಲ್ಲರೂ ಕೂಲಿ ಕಾರ್ಮಿಕರಾಗಿದ್ದು ಮಣ್ಣಿನ ಗೋಡೆ, ತಗಡಿನ ಶೀಟ್ ಮನೆಗಳಲ್ಲೇ 9 ವರ್ಷದಿಂದ ವಾಸ ಮಾಡುತ್ತಿದ್ದಾರೆ.</p>.<p>ಇಲ್ಲಿನ 56 ಮಂದಿ ಮತದಾರರು ಪ್ರತಿ ಬಾರಿ ಜಯಪುರದಲ್ಲೇ ಮತದಾನ ಮಾಡುತ್ತಾರೆ. ಇಲ್ಲಿನ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲೂ ಅಧಿಕಾರಿಗಳು ಹಿಂದೇಟು ಹಾಕಿದ್ದರು. ಕೊನೆಗೆ ಶಾಸಕರ ಸೂಚನೆ ಮೇರೆಗೆ ಸಂಪರ್ಕ ನೀಡಿದ್ದಾರೆ. ಇದಕ್ಕಾಗಿ ಮೆಸ್ಕಾಂ ಅಧಿಕಾರಿಗಳು ಪ್ರತಿ ಮನೆಯಿಂದ ₹8 ಸಾವಿರ ಪಡೆದಿದ್ದಾರೆ ಎನ್ನುತ್ತಾರೆ ಸ್ಥಳೀಯರಾದ ನಾಗಪ್ಪ.</p>.<p>ಬೇಸಿಗೆಯಲ್ಲಿ ನೀರಿನ ಕೊರತೆ ಎದುರಾಗುತ್ತಿದೆ. ನಾವು ಯಾರನ್ನು ಕೇಳಬೇಕು ಎಂದು ಅಳಲು ತೋಡಿಕೊಂಡಿದ್ದು ಶಾಂತಾ.</p>.<p>‘ನಮಗೆ ತಕ್ಷಣ ಹಕ್ಕುಪತ್ರ ನೀಡಬೇಕು. ಜೊತೆಗೆ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ಈ ಬಾರಿ ನಾವು ಮತದಾನದಿಂದ ದೂರ ಉಳಿಯುತ್ತೇವೆ’ ಎನ್ನುತ್ತಾರೆ ಬಾಲು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>