ಕೆರೆಸಂತೆ ಐತಿಹಾಸಿಕವಾಗಿ ಮಹತ್ವದ ಸ್ಥಳ. ಇತಿಹಾಸದಲ್ಲಿ ವೈಭವದಿಂದ ಮೆರೆದ ಹೇಮಾವತಿ ಪಟ್ಟಣವೇ ಇಂದಿನ ಕೆರೆಸಂತೆ. ಇದರ ನಿರ್ಮಾತೃ ಹೊಯ್ಸಳ ವಿಷ್ಣುವರ್ಧನ. ಶೈವ ಮತ್ತು ವೈಷ್ಣವರ ಸೌಹಾರ್ದದ ತಾಣವಿದು. ಇಲ್ಲಿ ಹಲವಾರು ದೇಗುಲಗಳಿವೆ. ಇಲ್ಲಿರುವ ಗುಡ್ಡದ ಒಂದು ಪಾರ್ಶ್ವದಲ್ಲಿ ಹಲವಾರು ಕಂಬಗಳು, ಮುರಿದ ವಿಗ್ರಹಗಳು ಕಂಡುಬರುತ್ತಿದ್ದವು. ಮುಳ್ಳುಕಂಟಿಗಳಿಂದ ತುಂಬಿ ಹೋಗಿದ್ದ, ಅಲ್ಲದೆ, ಈ ಜಾಗದಲ್ಲಿ ಚಿರತೆಗಳೂ ಓಡಾಡುತ್ತಿದ್ದರಿಂದ ಅತ್ತ ಜನರು ಸುಳಿಯುತ್ತಿರಲಿಲ್ಲ.