<p><strong>ಕಡೂರು:</strong> ಪಟ್ಟಣದ ಛತ್ರದ ಬೀದಿಯಲ್ಲಿನ ಕೆಂಚಾಂಬ ದೇವಾಲಯದ ಬಳಿಯಲ್ಲಿ ಶ್ರೀದುರ್ಗಾ ಸೇವಾ ಸಮಿತಿ ವತಿಯಿಂದ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ದುರ್ಗಾದೇವಿಯನ್ನು ಪ್ರತಿಷ್ಠಾಪಿಸಿ ಸೆ.22ರಿಂದ ಅ.2ರವರೆಗೆ ‘ಕಡೂರು ದಸರಾ’ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ಸಮಿತಿ ಅಧ್ಯಕ್ಷ ಕೆ.ಪಿ.ವೆಂಕಟೇಶ್ ತಿಳಿಸಿದರು.</p>.<p>ಪಟ್ಟಣದ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ಆವರಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.</p>.<p>ಪ್ರತಿದಿನ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಈ ಆಚರಣೆಯು ಸಮಿತಿಯ ಮೂರನೇ ವರ್ಷದ ಪ್ರತಿಷ್ಠಾಪನಾ ಮಹೋತ್ಸವವಾಗಿದೆ. ಸೆ.22ರಂದು ಗಣಹೋಮ, ಗೋ ಪೂಜೆ, ದೇವೀಪೂಜೆ, ಕಲಶ ಪ್ರತಿಷ್ಠಾಪನೆ ನಡೆಯಲಿದೆ. ಸೆ.23ರಂದು ಪುಷ್ಪಾರ್ಚನೆ, 26ರಂದು ಮಹಿಳೆಯರಿಂದ ಸಹಸ್ರ ಕುಂಕುಮಾರ್ಚನೆ, 28ರಂದು ದೀಪೋತ್ಸವ, 30ರಂದು ಚಂಡಿಕಾಹೋಮ ನಡೆಯಲಿದೆ.</p>.<p>ಕುಂಕುಮಾರ್ಚನೆಯಂದು ಮಹಿಳೆಯರಿಗೆ ಸಮಿತಿ ವತಿಯಿಂದ ಬಾಗಿನ ನೀಡಲಾಗುವುದು. ದೇವಿಯ ಸೇವಾಕಾರ್ಯದಲ್ಲಿ ಪ್ರತಿಯೊಬ್ಬರು ಕೈಜೋಡಿಸಿ ಯಶಸ್ವಿಗೊಳಿಸಿಕೊಡುವಂತೆ ಮನವಿ ಮಾಡಿದರು.</p>.<p>ಭದ್ರಸ್ವಾಮಿ, ಕೆ.ಪಿ.ಶ್ರೀನಿವಾಸ್, ಕೆ.ಸಿ.ವಿಕಾಸ್ಚಂದ್ರು, ಚೇತನ್, ಹಳೇಪೇಟೆ ರಂಗನಾಥ್, ರಘು, ಪುರಸಭೆ ಸದಸ್ಯ ಯತಿರಾಜ್, ಸೋಮೇಶ್ ಶಿವಮೊಗ್ಗೆ, ಎಚ್.ಆರ್.ದೇವರಾಜ್, ನಾಗೇಂದ್ರಅಗ್ನಿ, ತರುಣ್, ಮಂಜುನಾಥ್, ಶ್ರೇಯಸ್, ನರಸಿಂಹ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಡೂರು:</strong> ಪಟ್ಟಣದ ಛತ್ರದ ಬೀದಿಯಲ್ಲಿನ ಕೆಂಚಾಂಬ ದೇವಾಲಯದ ಬಳಿಯಲ್ಲಿ ಶ್ರೀದುರ್ಗಾ ಸೇವಾ ಸಮಿತಿ ವತಿಯಿಂದ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ದುರ್ಗಾದೇವಿಯನ್ನು ಪ್ರತಿಷ್ಠಾಪಿಸಿ ಸೆ.22ರಿಂದ ಅ.2ರವರೆಗೆ ‘ಕಡೂರು ದಸರಾ’ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ಸಮಿತಿ ಅಧ್ಯಕ್ಷ ಕೆ.ಪಿ.ವೆಂಕಟೇಶ್ ತಿಳಿಸಿದರು.</p>.<p>ಪಟ್ಟಣದ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ಆವರಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.</p>.<p>ಪ್ರತಿದಿನ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಈ ಆಚರಣೆಯು ಸಮಿತಿಯ ಮೂರನೇ ವರ್ಷದ ಪ್ರತಿಷ್ಠಾಪನಾ ಮಹೋತ್ಸವವಾಗಿದೆ. ಸೆ.22ರಂದು ಗಣಹೋಮ, ಗೋ ಪೂಜೆ, ದೇವೀಪೂಜೆ, ಕಲಶ ಪ್ರತಿಷ್ಠಾಪನೆ ನಡೆಯಲಿದೆ. ಸೆ.23ರಂದು ಪುಷ್ಪಾರ್ಚನೆ, 26ರಂದು ಮಹಿಳೆಯರಿಂದ ಸಹಸ್ರ ಕುಂಕುಮಾರ್ಚನೆ, 28ರಂದು ದೀಪೋತ್ಸವ, 30ರಂದು ಚಂಡಿಕಾಹೋಮ ನಡೆಯಲಿದೆ.</p>.<p>ಕುಂಕುಮಾರ್ಚನೆಯಂದು ಮಹಿಳೆಯರಿಗೆ ಸಮಿತಿ ವತಿಯಿಂದ ಬಾಗಿನ ನೀಡಲಾಗುವುದು. ದೇವಿಯ ಸೇವಾಕಾರ್ಯದಲ್ಲಿ ಪ್ರತಿಯೊಬ್ಬರು ಕೈಜೋಡಿಸಿ ಯಶಸ್ವಿಗೊಳಿಸಿಕೊಡುವಂತೆ ಮನವಿ ಮಾಡಿದರು.</p>.<p>ಭದ್ರಸ್ವಾಮಿ, ಕೆ.ಪಿ.ಶ್ರೀನಿವಾಸ್, ಕೆ.ಸಿ.ವಿಕಾಸ್ಚಂದ್ರು, ಚೇತನ್, ಹಳೇಪೇಟೆ ರಂಗನಾಥ್, ರಘು, ಪುರಸಭೆ ಸದಸ್ಯ ಯತಿರಾಜ್, ಸೋಮೇಶ್ ಶಿವಮೊಗ್ಗೆ, ಎಚ್.ಆರ್.ದೇವರಾಜ್, ನಾಗೇಂದ್ರಅಗ್ನಿ, ತರುಣ್, ಮಂಜುನಾಥ್, ಶ್ರೇಯಸ್, ನರಸಿಂಹ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>