<p><strong>ಕಳಸ: </strong>ಇಲ್ಲಿನ ಗ್ರಾಮ ದೇವರಾದ ಕಳಸೇಶ್ವರನ ರಥೋತ್ಸವ ಮಂಗಳವಾರ ಸಂಭ್ರಮದಿಂದ ನೆರವೇರಿತು.</p>.<p>ಕೊರೊನಾ ಸಂಕಟದ ನಂತರ ತಾಲ್ಲೂಕಿನಲ್ಲಿ ಮೊದಲ ಪೂರ್ಣ ಪ್ರಮಾಣದ ರಥೋತ್ಸವ ನಡೆಯುವ ಬಗ್ಗೆ ಕೊನೆ ಕ್ಷಣದಲ್ಲಿ ತೀರ್ಮಾನ ಆದ ಕಾರಣ ಆಹ್ವಾನ ಪತ್ರಿಕೆ ಮುದ್ರಿಸಿರಲಿಲ್ಲ. ಆದರೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.</p>.<p>ಕಳೆದ ವಾರ ದೇವಸ್ಥಾನದಲ್ಲಿ ಧ್ವಜಾರೋಹಣ, ಗಣಪತಿ ಪೂಜೆ, ಅಂಕುರಾರ್ಪಣೆ ಮತ್ತಿತರ ವಿಧಿಗಳು ಆರಂಭವಾಗಿತ್ತು. ಹಸಿರುವಾಣಿ ಸಮ ರ್ಪಣೆಯೂ ಸೋಮವಾರ ನಡೆದಿತ್ತು. ವಿದ್ಯುತ್ದೀಪಗಳಿಂದ ಅಲಂಕೃತವಾಗಿದ್ದ ದೇವಸ್ಥಾನದಲ್ಲಿ ಸೋಮವಾರದಿಂದಲೇ ಹಬ್ಬದ ಸಡಗರ ಏರ್ಪಟ್ಟಿತ್ತು.</p>.<p>ವಿಶೇಷ ಅಲಂಕೃತ ಕಳಸೇಶ್ವರನಿಗೆ ಮಂಗಳವಾರ ಬೆಳಿಗ್ಗೆ ವಿಶೇಷ ಪೂಜೆ, ಅಭಿಷೇಕ ನೆರವೇರಿಸಿದ ನಂತರ ದೇವಸ್ಥಾನದ ಆವರಣದಲ್ಲಿ ದೇವರ ಉತ್ಸವ ಮೂರ್ತಿಯ ಪ್ರದಕ್ಷಿಣೆ ನಡೆಯಿತು.</p>.<p>ಪತಾಕೆಗಳು, ತೋರಣ, ಧ್ವಜಗಳ ಮುನ್ನುಡಿಯಲ್ಲಿ ಲಯಬದ್ಧವಾದ ವಾದ್ಯದ ಹಿಮ್ಮೇಳದಲ್ಲಿ ಉತ್ಸವ ನಡೆಯಿತು. ಭಕ್ತರು ಉತ್ಸವ ಮೂರ್ತಿ ಜೊತೆಗೆ ಪ್ರದಕ್ಷಿಣೆ ಮಾಡಿ ತಮ್ಮ ಶ್ರದ್ಧೆ ತೋರಿದರು.</p>.<p>ಆನಂತರ ರಥಬೀದಿಯಲ್ಲಿ ಸಜ್ಜಾಗಿದ್ದ ರಥಕ್ಕೆ ದೇವರ ಆರೋಹಣ ವಿಧಿಯು ನಡೆಯಿತು.</p>.<p>ಭಕ್ತರು ತಾವು ಬೆಳೆದ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಮುಂತಾದ ಬೆಳೆಗಳನ್ನು ರಥದೆಡೆಗೆ ಎಸೆದು ಕಳಸೇಶ್ವರನ ಮೇಲಿನ ಭಕ್ತಿ ತೋರಿದರು. ಸಂಜೆ ರಥವನ್ನು ರಥಬೀದಿಯಲ್ಲಿ ಮಂಜಿನಕಟ್ಟೆವರೆಗೂ ಎಳೆದು ಮರಳಿ ದೇವಸ್ಥಾನದವರೆಗೆ ತರಲಾಯಿತು.</p>.<p>ಕಳೆದ ವರ್ಷಗಳಿಗೆ ಹೋಲಿಸಿದರೆ ಭಕ್ತರ ಸಂಖ್ಯೆ ತುಸು ಕಡಿಮೆ ಇತ್ತು. ಜಾತ್ರೆಯ ಅಂಗಡಿಗಳಲ್ಲಿ ವ್ಯಾಪಾರ ಕೂಡ ಮಂಕಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಳಸ: </strong>ಇಲ್ಲಿನ ಗ್ರಾಮ ದೇವರಾದ ಕಳಸೇಶ್ವರನ ರಥೋತ್ಸವ ಮಂಗಳವಾರ ಸಂಭ್ರಮದಿಂದ ನೆರವೇರಿತು.</p>.<p>ಕೊರೊನಾ ಸಂಕಟದ ನಂತರ ತಾಲ್ಲೂಕಿನಲ್ಲಿ ಮೊದಲ ಪೂರ್ಣ ಪ್ರಮಾಣದ ರಥೋತ್ಸವ ನಡೆಯುವ ಬಗ್ಗೆ ಕೊನೆ ಕ್ಷಣದಲ್ಲಿ ತೀರ್ಮಾನ ಆದ ಕಾರಣ ಆಹ್ವಾನ ಪತ್ರಿಕೆ ಮುದ್ರಿಸಿರಲಿಲ್ಲ. ಆದರೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.</p>.<p>ಕಳೆದ ವಾರ ದೇವಸ್ಥಾನದಲ್ಲಿ ಧ್ವಜಾರೋಹಣ, ಗಣಪತಿ ಪೂಜೆ, ಅಂಕುರಾರ್ಪಣೆ ಮತ್ತಿತರ ವಿಧಿಗಳು ಆರಂಭವಾಗಿತ್ತು. ಹಸಿರುವಾಣಿ ಸಮ ರ್ಪಣೆಯೂ ಸೋಮವಾರ ನಡೆದಿತ್ತು. ವಿದ್ಯುತ್ದೀಪಗಳಿಂದ ಅಲಂಕೃತವಾಗಿದ್ದ ದೇವಸ್ಥಾನದಲ್ಲಿ ಸೋಮವಾರದಿಂದಲೇ ಹಬ್ಬದ ಸಡಗರ ಏರ್ಪಟ್ಟಿತ್ತು.</p>.<p>ವಿಶೇಷ ಅಲಂಕೃತ ಕಳಸೇಶ್ವರನಿಗೆ ಮಂಗಳವಾರ ಬೆಳಿಗ್ಗೆ ವಿಶೇಷ ಪೂಜೆ, ಅಭಿಷೇಕ ನೆರವೇರಿಸಿದ ನಂತರ ದೇವಸ್ಥಾನದ ಆವರಣದಲ್ಲಿ ದೇವರ ಉತ್ಸವ ಮೂರ್ತಿಯ ಪ್ರದಕ್ಷಿಣೆ ನಡೆಯಿತು.</p>.<p>ಪತಾಕೆಗಳು, ತೋರಣ, ಧ್ವಜಗಳ ಮುನ್ನುಡಿಯಲ್ಲಿ ಲಯಬದ್ಧವಾದ ವಾದ್ಯದ ಹಿಮ್ಮೇಳದಲ್ಲಿ ಉತ್ಸವ ನಡೆಯಿತು. ಭಕ್ತರು ಉತ್ಸವ ಮೂರ್ತಿ ಜೊತೆಗೆ ಪ್ರದಕ್ಷಿಣೆ ಮಾಡಿ ತಮ್ಮ ಶ್ರದ್ಧೆ ತೋರಿದರು.</p>.<p>ಆನಂತರ ರಥಬೀದಿಯಲ್ಲಿ ಸಜ್ಜಾಗಿದ್ದ ರಥಕ್ಕೆ ದೇವರ ಆರೋಹಣ ವಿಧಿಯು ನಡೆಯಿತು.</p>.<p>ಭಕ್ತರು ತಾವು ಬೆಳೆದ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಮುಂತಾದ ಬೆಳೆಗಳನ್ನು ರಥದೆಡೆಗೆ ಎಸೆದು ಕಳಸೇಶ್ವರನ ಮೇಲಿನ ಭಕ್ತಿ ತೋರಿದರು. ಸಂಜೆ ರಥವನ್ನು ರಥಬೀದಿಯಲ್ಲಿ ಮಂಜಿನಕಟ್ಟೆವರೆಗೂ ಎಳೆದು ಮರಳಿ ದೇವಸ್ಥಾನದವರೆಗೆ ತರಲಾಯಿತು.</p>.<p>ಕಳೆದ ವರ್ಷಗಳಿಗೆ ಹೋಲಿಸಿದರೆ ಭಕ್ತರ ಸಂಖ್ಯೆ ತುಸು ಕಡಿಮೆ ಇತ್ತು. ಜಾತ್ರೆಯ ಅಂಗಡಿಗಳಲ್ಲಿ ವ್ಯಾಪಾರ ಕೂಡ ಮಂಕಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>