<p><strong>ಶೃಂಗೇರಿ: </strong>ಇಲ್ಲಿನ ಶೃಂಗೇರಿ ಮಠದಿಂದ ನಡೆಯುತ್ತಿರುವ ಬೆಂಗಳೂರಿನ ಶ್ರೀರಂಗ ದೊರೈ ಆಸ್ಪತ್ರೆಗೆ ಸಲಕರಣೆ ಖರೀದಿಸಲು ಕರ್ಣಾಟಕ ಬ್ಯಾಂಕ್ ₹29.5 ಲಕ್ಷ ಕೊಡುಗೆ ನೀಡಿದೆ.</p>.<p>ಶೃಂಗೇರಿ ಶಾರದಾ ಪೀಠಕ್ಕೆ ಭಾನುವಾರ ಭೇಟಿ ನೀಡಿದ ಬ್ಯಾಂಕ್ ಅಧ್ಯಕ್ಷ ಪ್ರದೀಪ್ ಕುಮಾರ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಎಂ.ಎಸ್ ಮಹಾಬಲೇಶ್ವರ ಭಟ್ ಅವರು ಭಾರತೀತೀರ್ಥ ಸ್ವಾಮೀಜಿ ಮತ್ತು ವಿಧುಶೇಖರಭಾರತೀ ಸ್ವಾಮೀಜಿ ದರ್ಶನ ಪಡೆದು ಕೊಡುಗೆ ನೀಡಿದರು.</p>.<p>ಮಹಾಬಲೇಶ್ವರ ಭಟ್ ಮಾತನಾಡಿ, ‘ಕಳೆದ ವರ್ಷ ಬ್ಯಾಂಕ್ ದಾಖಲೆಯ ಲಾಭ ಗಳಿಸಿದೆ. 8,500 ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. 2024ರ ಫೆಬ್ರುವರಿಯಲ್ಲಿ ಬ್ಯಾಂಕ್ ಶತಮಾನೋತ್ಸವ ಆಚರಿಸಲಿದೆ. ಆ ಸಂದರ್ಭದಲ್ಲಿ ಬ್ಯಾಂಕ್ ಸಾಕಷ್ಟು ವ್ಯವಹಾರ ಹಾಗೂ ಲಾಭದ ಗುರಿಯನ್ನು ಹೊಂದಿದೆ’ ಎಂದರು.</p>.<p>‘ಸ್ಥಳೀಯ ಶಾರದಾ ಬ್ಯಾಂಕ್ ವಿಲೀನ ಮಾಡಿಕೊಂಡು ಬೆಳೆದಿರುವ ಕರ್ಣಾಟಕ ಬ್ಯಾಂಕ್ ಇನ್ನಷ್ಟು ಅಭಿವೃದ್ಧಿ ಸಾಧಿಸಲಿ. ಜನಸಾಮಾನ್ಯರಿಗೆ ಉತ್ತಮ ಸೇವೆ ಸಿಗಲಿ’ ಎಂದು ವಿಧುಶೇಖರಭಾರತೀ ಸ್ವಾಮೀಜಿಗಳು ಹಾರೈಸಿದರು.</p>.<p>ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಹಯವದನ ಉಪಧ್ಯಾಯ, ಸ್ಥಳೀಯ ಶಾಖಾ ವ್ಯವಸ್ಥಾಪಕ ಶರತ್ ಕುಮಾರ್, ನೈನಾರಾಣಿ, ಸುಭಾಷ್ ಅಶ್ವತ್ಪುರ, ನಿರಂಜನ್, ಆದಿಶೇಷ, ಗಣೇಶ್, ಶಿವಪ್ರಸಾದ್, ಸತೀಶ್ ಹಾಗೂ ಸಿಬ್ಬಂದಿ ಪ್ರತೀಕ, ಬಾಲಗಂಗಾಧರ್, ರವಿಶಂಕರ್, ರಾಘವೇಂದ್ರ, ನವೀನ್ಕುಮಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶೃಂಗೇರಿ: </strong>ಇಲ್ಲಿನ ಶೃಂಗೇರಿ ಮಠದಿಂದ ನಡೆಯುತ್ತಿರುವ ಬೆಂಗಳೂರಿನ ಶ್ರೀರಂಗ ದೊರೈ ಆಸ್ಪತ್ರೆಗೆ ಸಲಕರಣೆ ಖರೀದಿಸಲು ಕರ್ಣಾಟಕ ಬ್ಯಾಂಕ್ ₹29.5 ಲಕ್ಷ ಕೊಡುಗೆ ನೀಡಿದೆ.</p>.<p>ಶೃಂಗೇರಿ ಶಾರದಾ ಪೀಠಕ್ಕೆ ಭಾನುವಾರ ಭೇಟಿ ನೀಡಿದ ಬ್ಯಾಂಕ್ ಅಧ್ಯಕ್ಷ ಪ್ರದೀಪ್ ಕುಮಾರ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಎಂ.ಎಸ್ ಮಹಾಬಲೇಶ್ವರ ಭಟ್ ಅವರು ಭಾರತೀತೀರ್ಥ ಸ್ವಾಮೀಜಿ ಮತ್ತು ವಿಧುಶೇಖರಭಾರತೀ ಸ್ವಾಮೀಜಿ ದರ್ಶನ ಪಡೆದು ಕೊಡುಗೆ ನೀಡಿದರು.</p>.<p>ಮಹಾಬಲೇಶ್ವರ ಭಟ್ ಮಾತನಾಡಿ, ‘ಕಳೆದ ವರ್ಷ ಬ್ಯಾಂಕ್ ದಾಖಲೆಯ ಲಾಭ ಗಳಿಸಿದೆ. 8,500 ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. 2024ರ ಫೆಬ್ರುವರಿಯಲ್ಲಿ ಬ್ಯಾಂಕ್ ಶತಮಾನೋತ್ಸವ ಆಚರಿಸಲಿದೆ. ಆ ಸಂದರ್ಭದಲ್ಲಿ ಬ್ಯಾಂಕ್ ಸಾಕಷ್ಟು ವ್ಯವಹಾರ ಹಾಗೂ ಲಾಭದ ಗುರಿಯನ್ನು ಹೊಂದಿದೆ’ ಎಂದರು.</p>.<p>‘ಸ್ಥಳೀಯ ಶಾರದಾ ಬ್ಯಾಂಕ್ ವಿಲೀನ ಮಾಡಿಕೊಂಡು ಬೆಳೆದಿರುವ ಕರ್ಣಾಟಕ ಬ್ಯಾಂಕ್ ಇನ್ನಷ್ಟು ಅಭಿವೃದ್ಧಿ ಸಾಧಿಸಲಿ. ಜನಸಾಮಾನ್ಯರಿಗೆ ಉತ್ತಮ ಸೇವೆ ಸಿಗಲಿ’ ಎಂದು ವಿಧುಶೇಖರಭಾರತೀ ಸ್ವಾಮೀಜಿಗಳು ಹಾರೈಸಿದರು.</p>.<p>ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಹಯವದನ ಉಪಧ್ಯಾಯ, ಸ್ಥಳೀಯ ಶಾಖಾ ವ್ಯವಸ್ಥಾಪಕ ಶರತ್ ಕುಮಾರ್, ನೈನಾರಾಣಿ, ಸುಭಾಷ್ ಅಶ್ವತ್ಪುರ, ನಿರಂಜನ್, ಆದಿಶೇಷ, ಗಣೇಶ್, ಶಿವಪ್ರಸಾದ್, ಸತೀಶ್ ಹಾಗೂ ಸಿಬ್ಬಂದಿ ಪ್ರತೀಕ, ಬಾಲಗಂಗಾಧರ್, ರವಿಶಂಕರ್, ರಾಘವೇಂದ್ರ, ನವೀನ್ಕುಮಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>