ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ದೂರಲು ಮೋದಿ ಬೇಕು, ಒಳ್ಳೆಯದ್ದಕ್ಕೆ ಬೇಡ: ಸಿ.ಟಿ.ರವಿ

Last Updated 17 ಜುಲೈ 2021, 13:31 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಕಾಂಗ್ರೆಸ್‌ನವರಿಗೆ ದೂರುವುದಕ್ಕೆ ಮೋದಿ ಬೇಕು, ಒಳ್ಳೆಯದಕ್ಕಾದ್ರೆ ಬೇಡ. ಕಾಂಗ್ರೆಸ್‌ನದು ಗೋಸುಂಬೆ ರಾಜಕಾರಣ’ ಎಂದು ಶಾಸಕ ಸಿ.ಟಿ.ರವಿ ಕಟಕಿಯಾಡಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕೋವಿಡ್‌ ಪ್ರತಿರೋಧಕ ಲಸಿಕೆಯನ್ನು ಎಲ್ಲರಿಗೂ ಉಚಿತವಾಗಿ ನೀಡುವುದಾಗಿ ಪ್ರಧಾನಿ ಹೇಳಿದಾಗ, ಕಾಂಗ್ರೆಸ್‌ನವರು ‘ಥ್ಯಾಂಕ್ಯು ಸುಪ್ರೀಂ ಕೋರ್ಟ್‌’ ಎಂದು ಹೇಳಿದ್ದರು’ ಎಂದರು.

‘ಲಸಿಕೆ ಬಗ್ಗೆ ಕಾಂಗ್ರೆಸ್‌ನವರು ಅಪಪ್ರಚಾರ ಮಾಡಿದ್ದರು. ಲಸಿಕೆ ಹಾಕಿಸಿಕೊಂಡರೆ ಮಕ್ಕಳಾಗಲ್ಲ ಎಂದು ಹೇಳಿದ್ದರು.

ಡಿ.ಕೆ.ಶಿವಕುಮಾರ್‌ ಅವರ ಟ್ವೀಟ್‌ ತೋರಿಸ್ಲಾ? ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ಹೇಳ್ಲಾ?’ ಎಂದು ತಿವಿದರು.

ಇದನ್ನೂ ಓದಿ... ಸಿಎಂ ವಿಶೇಷ ವಿಮಾನದಲ್ಲಿ ದೆಹಲಿಗೆ ಕೊಂಡೊಯ್ದಿದ್ದು ಏನು: ಎಚ್‌ಡಿಕೆ ಪ್ರಶ್ನೆ

‘ಕಾಂಗ್ರೆಸ್‌ಗೆ ಅಧಿಕಾರವೇ ಇಲ್ಲ, ಆದರೂ ಮುಖ್ಯಮಂತ್ರಿ ಸ್ಥಾನದ ಕನಸು ಕಾಣುತ್ತಿರುವುದಕ್ಕೆ ಏನು ಹೇಳಲಿ? ಇನ್ನಷ್ಟು ಜನರು ಕಾಂಗ್ರೆಸ್‌ ತೊರೆದು ವಲಸೆ ಹೋಗದಿರಲಿ ಎಂದು ಈ ‘ಇನ್ನರ್‌ ಪಾಲಿಟಿಕ್ಸ್‌’ (ಒಳರಾಜಕೀಯ) ಮಾಡುತ್ತಿರಬಹುದು’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT