<p><strong>ಆಲ್ದೂರು</strong>: ಸಮೀಪದ ಕೂದುವಳ್ಳಿ ಲೂರ್ದು ಮಾತೆ ಚರ್ಚ್ ವ್ಯಾಪ್ತಿಯ ಆಲ್ದೂರು ಪುರದಲ್ಲಿನ ಕ್ರೈಸ್ತ ಸ್ಮಶಾನ ಭೂಮಿಯಲ್ಲಿ ಸಮಾಧಿ ಹಬ್ಬ ಆಚರಣೆ ಮಾಡಲಾಯಿತು.</p>.<p>ಸಮಾಧಿಗಳಿಗೆ ತೀರ್ಥಪ್ರೊಕ್ಷಣೆ ಮಾಡಿ ಆಶೀರ್ವದಿಸಿದ ಧರ್ಮ ಕೇಂದ್ರ ಗುರು ಡೆನ್ಜಿಲ್ ಲೋಬೊ ಮಾತನಾಡಿ, ಸತ್ತವರು ದೈಹಿಕವಾಗಿ ನಮ್ಮೊಂದಿಗೆ ಇರದಿದ್ದರೂ ದೇವರ ಸಾನಿಧ್ಯದಲ್ಲಿ ಜೀವಿಸುತ್ತಾರೆ. ಅವರ ಆತ್ಮ ಶಾಂತಿಗಾಗಿ ಪ್ರತಿದಿನವೂ ಪ್ರಾರ್ಥಿಸಬೇಕು ಎಂದು ಹೇಳಿದರು.</p>.<p>ಮಲ್ಲಂದೂರು ಸಂತ ಲಾರೆನ್ಸ್ ಚರ್ಚ್ನಲ್ಲಿ ಸಕಲ ಅಮೃತ ವಿಶ್ವಾಸಿಗಳ ಸ್ಮರಣ ದಿನ ಆಚರಿಸಲಾಯಿತು.</p>.<p>ಧರ್ಮ ಕೇಂದ್ರ ಗುರು ಅನಿಲ್ ಪಾಯ್ಸ್ ಬಲಿ ಪೂಜೆ ನೆರವೇರಿಸಿ, ಸ್ಮಶಾನ ಭೂಮಿಯ ಕ್ರೈಸ್ತರ ಸಮಾಧಿಗಳಿಗೆ ಆಶೀರ್ವದಿಸಿ ಪ್ರಾರ್ಥನೆ ಸಲ್ಲಿಸಿದರು.</p>.<p>ಬಸ್ಕಲ್ ಸಂತ ಜೋಸೆಫರ ಚರ್ಚ್ನಲ್ಲಿ ಧರ್ಮ ಕೇಂದ್ರ ಗುರು ಜೇಮ್ಸ್ ಚಾರ್ಲಿ ಬಲಿ ಪೂಜೆ ಅರ್ಪಿಸಿದರು. ಮೃತರು ಲೌಕಿಕ ಜಗತ್ತಿನಿಂದ ದೈಹಿಕವಾಗಿ ನಮ್ಮನ್ನು ಅಗಲಿದರೂ ದೇವರೊಂದಿಗೆ ಸನಿಹದಲ್ಲಿ ಸದಾ ಜೀವಂತವಾಗಿರುತ್ತಾರೆ ಅವರ ಶಾಂತಿಗಾಗಿ ಪ್ರತಿದಿನವೂ ಪ್ರಾರ್ಥನೆಯಲ್ಲಿ ಸ್ಮರಿಸಬೇಕು ಎಂದು ಸಂದೇಶ ನೀಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಲ್ದೂರು</strong>: ಸಮೀಪದ ಕೂದುವಳ್ಳಿ ಲೂರ್ದು ಮಾತೆ ಚರ್ಚ್ ವ್ಯಾಪ್ತಿಯ ಆಲ್ದೂರು ಪುರದಲ್ಲಿನ ಕ್ರೈಸ್ತ ಸ್ಮಶಾನ ಭೂಮಿಯಲ್ಲಿ ಸಮಾಧಿ ಹಬ್ಬ ಆಚರಣೆ ಮಾಡಲಾಯಿತು.</p>.<p>ಸಮಾಧಿಗಳಿಗೆ ತೀರ್ಥಪ್ರೊಕ್ಷಣೆ ಮಾಡಿ ಆಶೀರ್ವದಿಸಿದ ಧರ್ಮ ಕೇಂದ್ರ ಗುರು ಡೆನ್ಜಿಲ್ ಲೋಬೊ ಮಾತನಾಡಿ, ಸತ್ತವರು ದೈಹಿಕವಾಗಿ ನಮ್ಮೊಂದಿಗೆ ಇರದಿದ್ದರೂ ದೇವರ ಸಾನಿಧ್ಯದಲ್ಲಿ ಜೀವಿಸುತ್ತಾರೆ. ಅವರ ಆತ್ಮ ಶಾಂತಿಗಾಗಿ ಪ್ರತಿದಿನವೂ ಪ್ರಾರ್ಥಿಸಬೇಕು ಎಂದು ಹೇಳಿದರು.</p>.<p>ಮಲ್ಲಂದೂರು ಸಂತ ಲಾರೆನ್ಸ್ ಚರ್ಚ್ನಲ್ಲಿ ಸಕಲ ಅಮೃತ ವಿಶ್ವಾಸಿಗಳ ಸ್ಮರಣ ದಿನ ಆಚರಿಸಲಾಯಿತು.</p>.<p>ಧರ್ಮ ಕೇಂದ್ರ ಗುರು ಅನಿಲ್ ಪಾಯ್ಸ್ ಬಲಿ ಪೂಜೆ ನೆರವೇರಿಸಿ, ಸ್ಮಶಾನ ಭೂಮಿಯ ಕ್ರೈಸ್ತರ ಸಮಾಧಿಗಳಿಗೆ ಆಶೀರ್ವದಿಸಿ ಪ್ರಾರ್ಥನೆ ಸಲ್ಲಿಸಿದರು.</p>.<p>ಬಸ್ಕಲ್ ಸಂತ ಜೋಸೆಫರ ಚರ್ಚ್ನಲ್ಲಿ ಧರ್ಮ ಕೇಂದ್ರ ಗುರು ಜೇಮ್ಸ್ ಚಾರ್ಲಿ ಬಲಿ ಪೂಜೆ ಅರ್ಪಿಸಿದರು. ಮೃತರು ಲೌಕಿಕ ಜಗತ್ತಿನಿಂದ ದೈಹಿಕವಾಗಿ ನಮ್ಮನ್ನು ಅಗಲಿದರೂ ದೇವರೊಂದಿಗೆ ಸನಿಹದಲ್ಲಿ ಸದಾ ಜೀವಂತವಾಗಿರುತ್ತಾರೆ ಅವರ ಶಾಂತಿಗಾಗಿ ಪ್ರತಿದಿನವೂ ಪ್ರಾರ್ಥನೆಯಲ್ಲಿ ಸ್ಮರಿಸಬೇಕು ಎಂದು ಸಂದೇಶ ನೀಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>