ಈ ಕೇಂದ್ರದಿಂದ ರೈತರ 29 ‘ವಾಟ್ಸ್ಆ್ಯಪ್’ ಗುಂಪು ಮಾಡಲಾಗಿದೆ. ‘ಕಿಸಾನ್ ಸುವಿಧಾ’ ಭಾರತೀಯ ಕೃಷಿ ಸಂಶೋಧನಾ ಪರಿಷತ್ನ (ಐಸಿಎಆರ್) ‘ಮೇಘ್ ದೂತ್’ ಆ್ಯಪ್ಗಳ ಬಳಕೆ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ‘ಜೂಮ್’, ‘ಗೂಗಲ್ ಮೀಟ್’ ಮೂಲಕ 25ಕ್ಕೂ ಹೆಚ್ಚು ತರಬೇತಿಗಳನ್ನು ಆಯೋಜಿಸಿದ್ದಾರೆ. ಬೆಳೆ ಕಟಾವು, ಯಂತ್ರೋಪಕರಣ ಬಳಕೆ, ನರ್ಸರಿ ನಿರ್ವಹಣೆ ಇತ್ಯಾದಿಗೆ ಸಂಬಂಧಿಸಿದಂತೆ ವಿಡಿಯೊ ಸಿದ್ಧಪಡಿಸಿದ್ದಾರೆ. ಬಯಲುಸೀಮೆ ಮತ್ತು ಮಲೆನಾಡು ಎರಡೂ ಭಾಗದ ಬೆಳೆಗಳ ಕಡೆಗೆ ಗಮನ ಹರಿಸಿದ್ದಾರೆ. ಭತ್ತ, ಕಾಳುಮೆಣಸು, ಅಣಬೆ, ಬಾಳೆ, ಅಡಿಕೆ, ಏಲಕ್ಕಿ, ಶೇಂಗಾ, ಮೆಕ್ಕೆಜೋಳ, ಈರುಳ್ಳಿ ಮುಂತಾದ ಬೆಳೆಗಳಿಗೆ ಸಂಬಂಧಿಸಿದಂತೆ ಅಪ್ಡೇಟ್ ಮಾಹಿತಿ ನೀಡುವ ಕಾಯಕ ನಿರ್ವಹಣೆ ಮಾಡುತ್ತಿದ್ದಾರೆ.