<p><strong>ಚಿಕ್ಕಮಗಳೂರು: </strong>ಇದೇ 8ರಿಂದ ಮುಜರಾಯಿ ದೇಗುಲಗಳಲ್ಲಿ ಸಾರ್ವಜನಿಕರಿಗೆ ದರ್ಶನ, ಮಸೀದಿಗಳು ಮತ್ತು ಚರ್ಚ್ಗಳಲ್ಲಿ ಪ್ರಾರ್ಥನೆ, ಹೋಟೆಲ್ಗಳಲ್ಲಿ ಆಹಾರ, ಪಾನೀಯ ಸೇವನೆಗೆ, ಲಾಡ್ಜ್ಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಈ ನಿಟ್ಟಿನಲ್ಲಿ ಕಾಫಿನಾಡಿನ ದೇಗುಲ, ಹೋಟೆಲ್, ಲಾಡ್ಜ್ ಇತರೆಡೆಗಳಲ್ಲಿ ಭಾನುವಾರ ಸಿದ್ಧತೆಗಳು ನಡೆದವು.</p>.<p>ಕೋವಿಡ್–19 ಹರಡದಂತೆ ತಡೆ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ಪಾಲಿಸಲು ಸೂಚನೆ ನೀಡಲಾಗಿದೆ. ಲಾಡ್ಜ್ ಕಟ್ಟಡ, ಆವರಣ, ದೇಗುಲ ಆವರಣ ಇತರೆಡೆಗಳಲ್ಲಿ ಸಚ್ಛತಾ ಕಾರ್ಯಗಳು ಭಾನುವಾರ ನಡೆದವು.</p>.<p>ಬಾಬಾಬುಡನ್ ಗಿರಿಯಲ್ಲಿನ ಶ್ರೀಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ, ಕಳಸದ ಕಳಸೇಶ್ವರ ದೇಗುಲ, ಕಿಗ್ಗಾ ಶುಷ್ಯಶೃಂಗ ದೇಗುಲ ಸಹಿತ ಮುಜರಾಯಿ ವ್ಯಾಪ್ತಿಯ ದೇಗುಲಗಳಲ್ಲಿ ಸೋಮವಾರದಿಂದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.</p>.<p>ಭಕ್ತರ ಉಷ್ಣಾಂಶ ತಪಾಸಣೆ ಮಾಡಬೇಕು. ಕೈಗಳಿಗೆ ಸ್ಯಾನಿಟೈಸರ್ ಹಾಕಬೇಕು. ಅಂತರ ಕಾಪಾಡಬೇಕು. ಮಾಸ್ಕ್ ಧರಿಸಿಬೇಕು. ವಿಗ್ರಹ, ಗೋಡೆ, ಕಂಬ, ಪಲ್ಲಕ್ಕಿ, ಗ್ರಂಥ ಇತ್ಯಾದಿ ಮುಟ್ಟುವಂತಿಲ್ಲ ಇತ್ಯಾದಿ ಮಾರ್ಗಸೂಚಿ ಪಾಲನೆಗೆ ಸೂಚಿಸಲಾಗಿದೆ.</p>.<p>‘ಇಲಾಖೆಯಿಂದ ಸೂಚಿಸಿರುವ ಮಾರ್ಗಸೂಚಿ ಪಾಲಿಸುವಂತೆ ತಿಳಿಸಲಾಗಿದೆ. ದರ್ಶನಕ್ಕೆ ಮಾತ್ರ ಅವಕಾಶ ಇದೆ. ಬೇರೆ ಕೈಂಕರ್ಯಗಳು ಇರಲ್ಲ’ ಎಂದು ಮುಜರಾಯಿ ಇಲಾಖೆಯ ಶ್ರೀನಿವಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ದೇಗುಲ, ಹೋಟೆಲ್, ಲಾಡ್ಜ್ ಎಲ್ಲ ಕಡೆ ಅಂತರ ಕಾಪಾಡುವ ನಿಟ್ಟಿನಲ್ಲಿ ಅಂಕಗಳನ್ನು ಬರೆಯಲಾಗಿದೆ. ಆವರಣಗಳಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ.</p>.<p>‘ಲಾಡ್ಜ್ ಕಟ್ಟಡವನ್ನು ಸ್ವಚ್ಛ ಮಾಡಿಸಿದ್ದೇವೆ. ಒಂದು ರೂಮಿಗೆ ಒಬ್ಬರಿಗೆ ಮಾತ್ರ ತಂಗಲು ಅವಕಾಶ. ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ಮಾರ್ಗಸೂಚಿಗಳ ಪಾಲನೆಗೆ ನಿಗಾ ವಹಿಸಿದ್ದೇವೆ’ ಎಂದು ಸೌಂದರ್ಯ ಲಾಡ್ಜ್ನ ಬಿ.ಸಿ.ರಾವ್ ತಿಳಿಸಿದರು.</p>.<p>‘ಹೋಟೆಲ್ಗಳಲ್ಲಿ ಒಂದು ಟೇಬಲ್ನಲ್ಲಿ ಕೂರಲು ಇಬ್ಬರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ಶುಚಿ ಕಾಪಾಡಲು ಒತ್ತು ನೀಡಲಾಗುವುದು. ಕೆಲಸ ಮಾಡುವವರಿಗೆ ಕೈಗವುಸು, ತಲೆಗೆ ಕ್ಯಾಪ್ ನೀಡುವಂತೆ ತಿಳಿಸಿದ್ದೇವೆ’ ಎಂದು ಹೋಟೆಲ್ ಮಾಲೀಕರ ಸಂಘದ ಕಾರ್ಯದರ್ಶಿ ರಾಜಣ್ಣ ತಿಳಿಸಿದರು</p>.<p>‘ಮಸೀದಿಗಳಲ್ಲಿ ನಮಾಜ್ ನಿಟ್ಟಿನಲ್ಲಿ ಸೂಚಿಸಿರುವ ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತೇವೆ. ವ್ಯವಸ್ಥೆ ಕಲ್ಪಿಸಿದ್ದೇವೆ’ ಎಂದು ಅಂಜುಮನ್ ಮಸೀದಿಯ ಗುರು ಔರಂಗಜೇಬ್ಅಲಂಗೀರ್ ರಶಾದಿ ತಿಳಿಸಿದರು.</p>.<p>‘ಹಿರೇಮಗಳೂರಿನ ಭಾರ್ಗವಪುರಿ ರಾಮಚಂದ್ರಸ್ವಾಮಿ ದೇಗುಲದಲ್ಲಿ ದರ್ಶನಕ್ಕೆ ಅವಕಾಶ ಇರುತ್ತದೆ. ಭಕ್ತರು ಅಂತರ ಕಾಪಾಡಿಕೊಂಡು ದರ್ಶನ ಪಡೆಯಬಹುದು’ ಎಂದು ದೇಗುಲದ ಅರ್ಚಕರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು: </strong>ಇದೇ 8ರಿಂದ ಮುಜರಾಯಿ ದೇಗುಲಗಳಲ್ಲಿ ಸಾರ್ವಜನಿಕರಿಗೆ ದರ್ಶನ, ಮಸೀದಿಗಳು ಮತ್ತು ಚರ್ಚ್ಗಳಲ್ಲಿ ಪ್ರಾರ್ಥನೆ, ಹೋಟೆಲ್ಗಳಲ್ಲಿ ಆಹಾರ, ಪಾನೀಯ ಸೇವನೆಗೆ, ಲಾಡ್ಜ್ಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಈ ನಿಟ್ಟಿನಲ್ಲಿ ಕಾಫಿನಾಡಿನ ದೇಗುಲ, ಹೋಟೆಲ್, ಲಾಡ್ಜ್ ಇತರೆಡೆಗಳಲ್ಲಿ ಭಾನುವಾರ ಸಿದ್ಧತೆಗಳು ನಡೆದವು.</p>.<p>ಕೋವಿಡ್–19 ಹರಡದಂತೆ ತಡೆ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ಪಾಲಿಸಲು ಸೂಚನೆ ನೀಡಲಾಗಿದೆ. ಲಾಡ್ಜ್ ಕಟ್ಟಡ, ಆವರಣ, ದೇಗುಲ ಆವರಣ ಇತರೆಡೆಗಳಲ್ಲಿ ಸಚ್ಛತಾ ಕಾರ್ಯಗಳು ಭಾನುವಾರ ನಡೆದವು.</p>.<p>ಬಾಬಾಬುಡನ್ ಗಿರಿಯಲ್ಲಿನ ಶ್ರೀಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ, ಕಳಸದ ಕಳಸೇಶ್ವರ ದೇಗುಲ, ಕಿಗ್ಗಾ ಶುಷ್ಯಶೃಂಗ ದೇಗುಲ ಸಹಿತ ಮುಜರಾಯಿ ವ್ಯಾಪ್ತಿಯ ದೇಗುಲಗಳಲ್ಲಿ ಸೋಮವಾರದಿಂದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.</p>.<p>ಭಕ್ತರ ಉಷ್ಣಾಂಶ ತಪಾಸಣೆ ಮಾಡಬೇಕು. ಕೈಗಳಿಗೆ ಸ್ಯಾನಿಟೈಸರ್ ಹಾಕಬೇಕು. ಅಂತರ ಕಾಪಾಡಬೇಕು. ಮಾಸ್ಕ್ ಧರಿಸಿಬೇಕು. ವಿಗ್ರಹ, ಗೋಡೆ, ಕಂಬ, ಪಲ್ಲಕ್ಕಿ, ಗ್ರಂಥ ಇತ್ಯಾದಿ ಮುಟ್ಟುವಂತಿಲ್ಲ ಇತ್ಯಾದಿ ಮಾರ್ಗಸೂಚಿ ಪಾಲನೆಗೆ ಸೂಚಿಸಲಾಗಿದೆ.</p>.<p>‘ಇಲಾಖೆಯಿಂದ ಸೂಚಿಸಿರುವ ಮಾರ್ಗಸೂಚಿ ಪಾಲಿಸುವಂತೆ ತಿಳಿಸಲಾಗಿದೆ. ದರ್ಶನಕ್ಕೆ ಮಾತ್ರ ಅವಕಾಶ ಇದೆ. ಬೇರೆ ಕೈಂಕರ್ಯಗಳು ಇರಲ್ಲ’ ಎಂದು ಮುಜರಾಯಿ ಇಲಾಖೆಯ ಶ್ರೀನಿವಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ದೇಗುಲ, ಹೋಟೆಲ್, ಲಾಡ್ಜ್ ಎಲ್ಲ ಕಡೆ ಅಂತರ ಕಾಪಾಡುವ ನಿಟ್ಟಿನಲ್ಲಿ ಅಂಕಗಳನ್ನು ಬರೆಯಲಾಗಿದೆ. ಆವರಣಗಳಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ.</p>.<p>‘ಲಾಡ್ಜ್ ಕಟ್ಟಡವನ್ನು ಸ್ವಚ್ಛ ಮಾಡಿಸಿದ್ದೇವೆ. ಒಂದು ರೂಮಿಗೆ ಒಬ್ಬರಿಗೆ ಮಾತ್ರ ತಂಗಲು ಅವಕಾಶ. ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ಮಾರ್ಗಸೂಚಿಗಳ ಪಾಲನೆಗೆ ನಿಗಾ ವಹಿಸಿದ್ದೇವೆ’ ಎಂದು ಸೌಂದರ್ಯ ಲಾಡ್ಜ್ನ ಬಿ.ಸಿ.ರಾವ್ ತಿಳಿಸಿದರು.</p>.<p>‘ಹೋಟೆಲ್ಗಳಲ್ಲಿ ಒಂದು ಟೇಬಲ್ನಲ್ಲಿ ಕೂರಲು ಇಬ್ಬರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ಶುಚಿ ಕಾಪಾಡಲು ಒತ್ತು ನೀಡಲಾಗುವುದು. ಕೆಲಸ ಮಾಡುವವರಿಗೆ ಕೈಗವುಸು, ತಲೆಗೆ ಕ್ಯಾಪ್ ನೀಡುವಂತೆ ತಿಳಿಸಿದ್ದೇವೆ’ ಎಂದು ಹೋಟೆಲ್ ಮಾಲೀಕರ ಸಂಘದ ಕಾರ್ಯದರ್ಶಿ ರಾಜಣ್ಣ ತಿಳಿಸಿದರು</p>.<p>‘ಮಸೀದಿಗಳಲ್ಲಿ ನಮಾಜ್ ನಿಟ್ಟಿನಲ್ಲಿ ಸೂಚಿಸಿರುವ ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತೇವೆ. ವ್ಯವಸ್ಥೆ ಕಲ್ಪಿಸಿದ್ದೇವೆ’ ಎಂದು ಅಂಜುಮನ್ ಮಸೀದಿಯ ಗುರು ಔರಂಗಜೇಬ್ಅಲಂಗೀರ್ ರಶಾದಿ ತಿಳಿಸಿದರು.</p>.<p>‘ಹಿರೇಮಗಳೂರಿನ ಭಾರ್ಗವಪುರಿ ರಾಮಚಂದ್ರಸ್ವಾಮಿ ದೇಗುಲದಲ್ಲಿ ದರ್ಶನಕ್ಕೆ ಅವಕಾಶ ಇರುತ್ತದೆ. ಭಕ್ತರು ಅಂತರ ಕಾಪಾಡಿಕೊಂಡು ದರ್ಶನ ಪಡೆಯಬಹುದು’ ಎಂದು ದೇಗುಲದ ಅರ್ಚಕರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>