<p><strong>ನರಸಿಂಹರಾಜಪುರ</strong>: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ‘ಹರ್ ಘರ್ ತಿರಂಗಾ’ ಕಾರ್ಯಕ್ರಮದಡಿ ಜಿಲ್ಲಾಡಳಿತ ನೀಡಿದ ರಾಷ್ಟ್ರಧ್ವಜದ ಬಟ್ಟೆಯ ಗುಣಮಟ್ಟ ಕಳಪೆಯಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ ಆರೋಪಿಸಿದರು.</p>.<p>ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘2 ಸಾವಿರ ಧ್ವಜಗಳನ್ನು ಬೀರೂರಿನ ಲಕ್ಷ್ಮೀ ಸ್ವಸಹಾಯ ಸಂಘದಿಂದ ಖರೀದಿಸಲು ಜಿಲ್ಲಾಡಳಿತ ಆದೇಶ ಮಾಡಿತ್ತು. ಒಂದು ರಾಷ್ಟ್ರಧ್ವಜಕ್ಕೆ ₹38 ದರ ನಿಗದಿಪಡಿಸಿತ್ತು. ಆಗಸ್ಟ್ 3ರಂದು ಜಿಲ್ಲಾಡಳಿತ ಹೊಸ ಆದೇಶ ಹೊರಡಿಸಿ, 2 ಸಾವಿರ ಧ್ವಜಗಳಲ್ಲಿ 1 ಸಾವಿರ ಧ್ವಜಗಳನ್ನು ₹22ರಂತೆ ಖರೀದಿಸುವಂತೆ ಸೂಚಿಸಿತು.ಅದರಂತೆ ಲಕ್ಷ್ಮೀಸ್ವಹಾಯ ಸಂಘದಿಂದ ಹಾಗೂ ಜಿಲ್ಲಾಡಳಿತದಿಂದ ತಲಾ 1 ಸಾವಿರ ರಾಷ್ಟ್ರಧ್ವಜ ಖರೀದಿಸಲಾಗಿದೆ. ಅದನ್ನು ಬುಧವಾರ ಸರಬರಾಜು ಮಾಡಿದ್ದಾರೆ’ ಎಂದರು.</p>.<p>ಜಿಲ್ಲಾಡಳಿತ ಸರಬರಾಜು ಮಾಡಿರುವ ರಾಷ್ಟ್ರಧ್ವಜ ಪಾಲಿಸ್ಟರ್ ಹಾಗೂ ಸಿಲ್ಕ್ ಬಟ್ಟೆಯಿಂದ ಕೊಡಿದೆ. ಅಳತೆ ಸಮರ್ಪಕವಾಗಿಲ್ಲ. ಕೆಲವು ಧ್ವಜಗಳಲ್ಲಿ ಅಶೋಕ ಚಕ್ರ ವಾರೆ ಆಗಿದೆ. ಕೆಲವು ಧ್ವಜಗಳು ಹರಿದು ಹೋಗಿವೆ ಎಂದು ಅವರು ದೂರಿದರು.</p>.<p>ಕೆಲವು ಧ್ವಜಗಳಲ್ಲಿ ಹಸಿರು ಬಣ್ಣದ ಬದಲು ನೀಲಿ ಬಣ್ಣದ ಬಟ್ಟೆ ಹಾಕಲಾಗಿದೆ. ನೀರಿನಲ್ಲಿ ಸ್ವಲ್ಪ ಒದ್ದೆಯಾದರೂ ಬಣ್ಣ ಬಿಡುತ್ತಿದೆ. 500ಕ್ಕೂ ಹೆಚ್ಚು ಕಳಪೆ ಧ್ವಜ ಪೂರೈಸಿದ್ದಾರೆ. ಲೋಪದೋಷಗಳನ್ನು ಪಟ್ಟಣ ಪಂಚಾಯಿತಿ ಸಿಬ್ಬಂದಿ ಸರಿಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.</p>.<p>ಪಟ್ಟಣದ ವ್ಯಾಪ್ತಿ 75 ಹಣ್ಣಿನ ಗಿಡ ನೆಡಲಾಗುವುದು. ಶಾಲಾ, ಕಾಲೇಜು ಮಕ್ಕಳಿಗೆ ಪ್ರಬಂಧ ಸ್ಪರ್ಧೆ, 30 ಜನ ಯೋಧರಿಗೆ ಗೌರವ ಸಮರ್ಪಣೆ , ಐತಿಹಾಸಿಕ ವೀರಮ್ಮಾಜಿ ಕೆರೆ ಅಂಗಳದಲ್ಲಿ ಸ್ವಚ್ಛತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರಮುಖ ವೃತ್ತಗಳಿಗೆ ವಿದ್ಯುತ್ ದೀಪದ ಅಲಂಕಾರ ಮಾಡಲಾಗುವುದು ಎಂದರು.</p>.<p>ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಸದಸ್ಯರಾದ ಸುರಯ್ಯಾ ಬಾನು, ಮುಕುಂದ, ಶೋಜಾ, ಸೈಯದ್ ವಸೀಂ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನರಸಿಂಹರಾಜಪುರ</strong>: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ‘ಹರ್ ಘರ್ ತಿರಂಗಾ’ ಕಾರ್ಯಕ್ರಮದಡಿ ಜಿಲ್ಲಾಡಳಿತ ನೀಡಿದ ರಾಷ್ಟ್ರಧ್ವಜದ ಬಟ್ಟೆಯ ಗುಣಮಟ್ಟ ಕಳಪೆಯಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ ಆರೋಪಿಸಿದರು.</p>.<p>ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘2 ಸಾವಿರ ಧ್ವಜಗಳನ್ನು ಬೀರೂರಿನ ಲಕ್ಷ್ಮೀ ಸ್ವಸಹಾಯ ಸಂಘದಿಂದ ಖರೀದಿಸಲು ಜಿಲ್ಲಾಡಳಿತ ಆದೇಶ ಮಾಡಿತ್ತು. ಒಂದು ರಾಷ್ಟ್ರಧ್ವಜಕ್ಕೆ ₹38 ದರ ನಿಗದಿಪಡಿಸಿತ್ತು. ಆಗಸ್ಟ್ 3ರಂದು ಜಿಲ್ಲಾಡಳಿತ ಹೊಸ ಆದೇಶ ಹೊರಡಿಸಿ, 2 ಸಾವಿರ ಧ್ವಜಗಳಲ್ಲಿ 1 ಸಾವಿರ ಧ್ವಜಗಳನ್ನು ₹22ರಂತೆ ಖರೀದಿಸುವಂತೆ ಸೂಚಿಸಿತು.ಅದರಂತೆ ಲಕ್ಷ್ಮೀಸ್ವಹಾಯ ಸಂಘದಿಂದ ಹಾಗೂ ಜಿಲ್ಲಾಡಳಿತದಿಂದ ತಲಾ 1 ಸಾವಿರ ರಾಷ್ಟ್ರಧ್ವಜ ಖರೀದಿಸಲಾಗಿದೆ. ಅದನ್ನು ಬುಧವಾರ ಸರಬರಾಜು ಮಾಡಿದ್ದಾರೆ’ ಎಂದರು.</p>.<p>ಜಿಲ್ಲಾಡಳಿತ ಸರಬರಾಜು ಮಾಡಿರುವ ರಾಷ್ಟ್ರಧ್ವಜ ಪಾಲಿಸ್ಟರ್ ಹಾಗೂ ಸಿಲ್ಕ್ ಬಟ್ಟೆಯಿಂದ ಕೊಡಿದೆ. ಅಳತೆ ಸಮರ್ಪಕವಾಗಿಲ್ಲ. ಕೆಲವು ಧ್ವಜಗಳಲ್ಲಿ ಅಶೋಕ ಚಕ್ರ ವಾರೆ ಆಗಿದೆ. ಕೆಲವು ಧ್ವಜಗಳು ಹರಿದು ಹೋಗಿವೆ ಎಂದು ಅವರು ದೂರಿದರು.</p>.<p>ಕೆಲವು ಧ್ವಜಗಳಲ್ಲಿ ಹಸಿರು ಬಣ್ಣದ ಬದಲು ನೀಲಿ ಬಣ್ಣದ ಬಟ್ಟೆ ಹಾಕಲಾಗಿದೆ. ನೀರಿನಲ್ಲಿ ಸ್ವಲ್ಪ ಒದ್ದೆಯಾದರೂ ಬಣ್ಣ ಬಿಡುತ್ತಿದೆ. 500ಕ್ಕೂ ಹೆಚ್ಚು ಕಳಪೆ ಧ್ವಜ ಪೂರೈಸಿದ್ದಾರೆ. ಲೋಪದೋಷಗಳನ್ನು ಪಟ್ಟಣ ಪಂಚಾಯಿತಿ ಸಿಬ್ಬಂದಿ ಸರಿಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.</p>.<p>ಪಟ್ಟಣದ ವ್ಯಾಪ್ತಿ 75 ಹಣ್ಣಿನ ಗಿಡ ನೆಡಲಾಗುವುದು. ಶಾಲಾ, ಕಾಲೇಜು ಮಕ್ಕಳಿಗೆ ಪ್ರಬಂಧ ಸ್ಪರ್ಧೆ, 30 ಜನ ಯೋಧರಿಗೆ ಗೌರವ ಸಮರ್ಪಣೆ , ಐತಿಹಾಸಿಕ ವೀರಮ್ಮಾಜಿ ಕೆರೆ ಅಂಗಳದಲ್ಲಿ ಸ್ವಚ್ಛತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರಮುಖ ವೃತ್ತಗಳಿಗೆ ವಿದ್ಯುತ್ ದೀಪದ ಅಲಂಕಾರ ಮಾಡಲಾಗುವುದು ಎಂದರು.</p>.<p>ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಸದಸ್ಯರಾದ ಸುರಯ್ಯಾ ಬಾನು, ಮುಕುಂದ, ಶೋಜಾ, ಸೈಯದ್ ವಸೀಂ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>