ತರುವೆ ಗ್ರಾಮದ ರೈತ ಟಿ.ಸಿ.ರಮೇಶ್ ಅವರು ಮೂಡಿಗೆರೆ ಸಮೀಪದ ಬಿಳುಗುಳದಲ್ಲಿರುವ ಕೃಷಿ ಇಲಾಖೆಯಿಂದ ತುಂಗಾ ತಳಿಯ ಭತ್ತವನ್ನು ಕಳೆದ ವರ್ಷದ ಜುಲೈ ಮೊದಲ ವಾರದಲ್ಲಿ ತಂದಿದ್ದು, ಗದ್ದೆಯಲ್ಲಿ ನಾಟಿ ಮಾಡಿದ್ದರು. ಆದರೆ, ಬೆಳೆ ಜೊಳ್ಳಾಗಿ ಫಸಲು ಬಂದಿದ್ದು ನಷ್ಟ ಉಂಟಾಗಿದೆ ಎಂದು ಆರೋಪಿಸಿದ್ದರು. ಈ ಹಿನ್ನಲೆಯಲ್ಲಿ ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಗಿರೀಶ್, ಕೃಷಿ ಮತ್ತು ತೋಟಗಾರಿಕಾ ಕೇಂದ್ರದ ವಿಜ್ಞಾನಿ ಗಣಪತಿ, ಕೃಷಿ ಅಧಿಕಾರಿ ಎಂ.ಆರ್.ವೆಂಕಟೇಶ್ ಭೇಟಿ ನೀಡಿ ಪರಿಶೀಲಿಸಿದರು.