<p><strong>ಬೀರೂರು (ಕಡೂರು):</strong> ಕಡೂರು ತಾಲ್ಲೂಕಿನ ರೈತರಿಗೆ ಜೀವಸೆಲೆಯಾಗಿರುವ ಮದಗದ ಕೆರೆ ತುಂಬಿ ಕೋಡಿ ಬಿದ್ದಿರುವುದು ರೈತಾಪಿ ವರ್ಗವಲ್ಲದೇ ಜನಸಾಮಾನ್ಯರಿಗೂ ನೆಮ್ಮದಿ ಮೂಡಿಸಿದೆ ಎಂದು ಪುರಸಭೆ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಮೋಹನ್ ತಿಳಿಸಿದರು.</p>.<p>ಬೀರೂರು ಹೋಬಳಿಯ ಮದಗದ ಕೆರೆಗೆ ಪುರಸಭೆ ವತಿಯಿಂದ ಬಾಗಿನ ಸಮರ್ಪಿಸಿ ಮಾತನಾಡಿದರು.</p>.<p>ಹಲವಾರು ಬಾರಿ ತಾಲ್ಲೂಕಿಗೆ ಮಳೆಯಾಗದೆ ಬರ ಆವರಿಸಿದರೂ ಮದಗದ ಕೆರೆ ಮಾತ್ರ ಪ್ರತಿ ವರ್ಷ ತುಂಬಿ ಹರಿದು ರೈತರಲ್ಲಿ ಹೊಸ ಚೈತನ್ಯವನ್ನು ಮೂಡಿಸುತ್ತಿದೆ. ಈ ಕೆರೆ ತುಂಬಿ ರೈತರಿಗೆ ಹರ್ಷ ನೀಡುವುದಷ್ಟೆ ಅಲ್ಲದೇ ತಾಲೂಕಿನ 32ಕ್ಕೂ ಹೆಚ್ಚು ಕೆರೆಗಳಿಗೆ ನೀರು ನೀಡುವ ಮೂಲಕ ಜೀವನಾಡಿಯಾಗಿದೆ ಎಂದರು.</p>.<p>ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್ ಮಾತನಾಡಿ, ಕಡೂರು, ಬೀರೂರು ಭಾಗವು ಅಡಿಕೆ ಬೆಳೆಗೆ ಹೆಸರುವಾಸಿಯಾಗಿದ್ದು, ಕೃಷಿಕರು ಈ ಕೆರೆಯನ್ನು ಆರಾಧಿಸುತ್ತಾರೆ. ಈ ಕೆರೆಯ ಮೂಲಕ ಸರಣಿ ಕೆರೆಗಳು ತುಂಬಿದರೆ ತಾಲ್ಲೂಕಿನ ಅರ್ಧಕ್ಕೂ ಹೆಚ್ಚು ಭಾಗದಲ್ಲಿ ಅಂತರ್ಜಲವು ವೃದ್ಧಿಸುತ್ತದೆ. ಆದ್ದರಿಂದ ನಮ್ಮ ಜನರಿಗೆ ಮದಗದ ಕೆರೆ ಜೀವನಾಡಿಯಾಗಿದೆ ಎಂದರು.</p>.<p>ಕಾರ್ಯಕ್ರಮದಲ್ಲಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಣ್, ಸದಸ್ಯರಾದ ಎಂ.ಪಿ.ಸುದರ್ಶನ್, ಶಾರದಾ ರುದ್ರಪ್ಪ, ಜ್ಯೋತಿ, ರವಿಕಾಂತ್ ರಾಥೋಡ್, ಬಿ.ಆರ್.ಮೋಹನ್ ಕುಮಾರ್ ಮುಖಂಡರಾದ ರುದ್ರಪ್ಪ, ವೆಂಕಟೇಶ್, ಕೃಷ್ಣಮೂರ್ತಿ, ಬಸವರಾಜ್, ಶಿವಮೂರ್ತಿ ಹಾಗೂ ಎಂಜಿನಿಯರ್ಗಳಾದ ನೂರುದ್ದೀನ್, ವೀಣಾ, ಆರೋಗ್ಯ ನಿರೀಕ್ಷಕ ಲಕ್ಷ್ಮಣ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀರೂರು (ಕಡೂರು):</strong> ಕಡೂರು ತಾಲ್ಲೂಕಿನ ರೈತರಿಗೆ ಜೀವಸೆಲೆಯಾಗಿರುವ ಮದಗದ ಕೆರೆ ತುಂಬಿ ಕೋಡಿ ಬಿದ್ದಿರುವುದು ರೈತಾಪಿ ವರ್ಗವಲ್ಲದೇ ಜನಸಾಮಾನ್ಯರಿಗೂ ನೆಮ್ಮದಿ ಮೂಡಿಸಿದೆ ಎಂದು ಪುರಸಭೆ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಮೋಹನ್ ತಿಳಿಸಿದರು.</p>.<p>ಬೀರೂರು ಹೋಬಳಿಯ ಮದಗದ ಕೆರೆಗೆ ಪುರಸಭೆ ವತಿಯಿಂದ ಬಾಗಿನ ಸಮರ್ಪಿಸಿ ಮಾತನಾಡಿದರು.</p>.<p>ಹಲವಾರು ಬಾರಿ ತಾಲ್ಲೂಕಿಗೆ ಮಳೆಯಾಗದೆ ಬರ ಆವರಿಸಿದರೂ ಮದಗದ ಕೆರೆ ಮಾತ್ರ ಪ್ರತಿ ವರ್ಷ ತುಂಬಿ ಹರಿದು ರೈತರಲ್ಲಿ ಹೊಸ ಚೈತನ್ಯವನ್ನು ಮೂಡಿಸುತ್ತಿದೆ. ಈ ಕೆರೆ ತುಂಬಿ ರೈತರಿಗೆ ಹರ್ಷ ನೀಡುವುದಷ್ಟೆ ಅಲ್ಲದೇ ತಾಲೂಕಿನ 32ಕ್ಕೂ ಹೆಚ್ಚು ಕೆರೆಗಳಿಗೆ ನೀರು ನೀಡುವ ಮೂಲಕ ಜೀವನಾಡಿಯಾಗಿದೆ ಎಂದರು.</p>.<p>ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್ ಮಾತನಾಡಿ, ಕಡೂರು, ಬೀರೂರು ಭಾಗವು ಅಡಿಕೆ ಬೆಳೆಗೆ ಹೆಸರುವಾಸಿಯಾಗಿದ್ದು, ಕೃಷಿಕರು ಈ ಕೆರೆಯನ್ನು ಆರಾಧಿಸುತ್ತಾರೆ. ಈ ಕೆರೆಯ ಮೂಲಕ ಸರಣಿ ಕೆರೆಗಳು ತುಂಬಿದರೆ ತಾಲ್ಲೂಕಿನ ಅರ್ಧಕ್ಕೂ ಹೆಚ್ಚು ಭಾಗದಲ್ಲಿ ಅಂತರ್ಜಲವು ವೃದ್ಧಿಸುತ್ತದೆ. ಆದ್ದರಿಂದ ನಮ್ಮ ಜನರಿಗೆ ಮದಗದ ಕೆರೆ ಜೀವನಾಡಿಯಾಗಿದೆ ಎಂದರು.</p>.<p>ಕಾರ್ಯಕ್ರಮದಲ್ಲಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಣ್, ಸದಸ್ಯರಾದ ಎಂ.ಪಿ.ಸುದರ್ಶನ್, ಶಾರದಾ ರುದ್ರಪ್ಪ, ಜ್ಯೋತಿ, ರವಿಕಾಂತ್ ರಾಥೋಡ್, ಬಿ.ಆರ್.ಮೋಹನ್ ಕುಮಾರ್ ಮುಖಂಡರಾದ ರುದ್ರಪ್ಪ, ವೆಂಕಟೇಶ್, ಕೃಷ್ಣಮೂರ್ತಿ, ಬಸವರಾಜ್, ಶಿವಮೂರ್ತಿ ಹಾಗೂ ಎಂಜಿನಿಯರ್ಗಳಾದ ನೂರುದ್ದೀನ್, ವೀಣಾ, ಆರೋಗ್ಯ ನಿರೀಕ್ಷಕ ಲಕ್ಷ್ಮಣ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>