ಭಾರೋಡ್ಕರಿಗಳಾಗಿ ಬಸವಾಪಟ್ಟಣದ ಮೋಹನ ರಾವ್, ಭದ್ರಾವತಿಯ ಅಂಬಾಜಿರಾವ್ ಸೇವೆ ಸಲ್ಲಿಸಿದರು. ಭಾವಸಾರ ಕ್ಷತ್ರಿಯ ಮಂಡಳಿ ಪಾಂಡುರಂಗರಾವ್ ಜಿಂಗಾಡೆ, ಬಿ.ಆರ್.ಪಾಂಡುರಂಗರಾವ್, ಪುಂಡಲೀಕರಾವ್ ಖಾಂಡ್ಕೆ, ವಿನಾಯಕ ಬಾಂಗ್ರೆ, ರವಿಕುಮಾರ ಜಿಂಗಾಡೆ, ಧರಣೇಶ್ ಮಹಳತ್ಕರ್, ಕುಮಾರರಾವ್, ಮಾಲತೇಶ್ ಬಾಂಗ್ರೆ, ಬಿ.ಪಿ.ಪ್ರಭಾಕರರಾವ್ ಪಾಲ್ಗೊಂಡರು. ಶುಕ್ರವಾರ ಸತ್ಯನಾರಾಯಣ ಸ್ವಾಮಿ ವ್ರತ, ಗೋಪಾಲಕಾಲಾ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದೊಂದಿಗೆ ದಿಂಡಿ ಆಚರಣೆಗೆ ತೆರೆ ಬೀಳಲಿದೆ.