<p><strong>ಮೂಡಿಗೆರೆ:</strong> ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಸಿಪಿಐ ಮೈತ್ರಿಯ ಬೆಂಬಲಿತ ಅಭ್ಯರ್ಥಿಗಳಿಗೆ ಗೆಲುವು ಸಿಕ್ಕಿದೆ.</p>.<p>ಎಂಟು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಏಕ ವ್ಯಕ್ತಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್, ಜೆಡಿಎಸ್, ಸಿಪಿಐ ಮೈತ್ರಿಯ ಏಳುಮಂದಿ ಗೆಲುವು ಸಾಧಿಸುವ ಮೂಲಕ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳ ಕೈ ಮೇಲಾಗಿದೆ.</p>.<p>ಸುಸೂತ್ರ ಮತದಾನ: ಸಂಸ್ಥೆಯ ಆಡಳಿತ ಮಂಡಳಿಗೆ ಮಂಗಳವಾರ ಮತದಾನವು ಸುಸೂತ್ರವಾಗಿ ನಡೆಯಿತು.</p>.<p>ರೈತ ಭವನದಲ್ಲಿ ನಡೆದ ಮತದಾನಕ್ಕೆ ತಾಲ್ಲೂಕಿನ ವಿವಿಧ ಭಾಗಗಳಿಂದ ಬಂದ ಮತದಾರರು ಸರದಿಯಲ್ಲಿ ನಿಂತು ಮತ ಚಲಾಯಿಸಿದರು. ವಿವಿಧ ಕ್ಷೇತ್ರಗಳಿಂದ ಒಟ್ಟು ಎಂಟು ಸ್ಥಾನಗಳಿಗೆ ಮತದಾನ ನಡೆದಿದ್ದು, ರೈತಭವನದ ಸಭಾಂಗಣದಲ್ಲಿ ನಾಲ್ಕು ಹಾಗೂ ಭೋಜನಾ ಶಾಲೆಯಲ್ಲಿ ನಾಲ್ಕು ಬೂತ್ ಗಳನ್ನು ತೆರೆಯಲಾಗಿತ್ತು.</p>.<p>ಬಿಜೆಪಿಯು ಏಕಾಂಗಿಯಾಗಿ ತನ್ನ ಬೆಂಬಲಿತ ಎಂಟು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಕಾಂಗ್ರೆಸ್, ಜೆಡಿಎಸ್, ಸಿಪಿಐ ಮೈತ್ರಿಕೂಟದ ಬೆಂಬಲಿತ ಎಂಟು ಮಂದಿಯನ್ನು ಕಣಕ್ಕಿಳಿಸಿ ಭಾರಿ ಪೈಪೋಟಿಯ ನಡುವೆ ಚುನಾವಣೆ ಎದುರಿಸಿದರು.</p>.<p>ಬೆಳಿಗ್ಗೆ 8 ಗಂಟೆಗೆ ಮತದಾನ ಪ್ರಕ್ರಿಯೆ ಪ್ರಾರಂಭವಾದ ಕೂಡಲೇ ವಿವಿಧ ರಾಜಕೀಯ ಪಕ್ಷಗಳ ಮುಖಂ ಡರು ಚುನಾವಣೆ ನಡೆಯುತ್ತಿದ್ದ ರೈತ ಭವನದ ಆವರಣದಲ್ಲಿ ಶಾಮಿಯಾನ ಹಾಕಿ ಮತದಾರರನ್ನು ಸೆಳೆಯುತ್ತಿದ್ದ ದೃಶ್ಯ ಕಂಡುಬಂದಿತು. ಸಂಜೆಯವರೆಗೂ ರಾಜಕೀಯ ಪಕ್ಷಗಳ ಮುಖಂಡರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.</p>.<p>ಹಿಂದಿನ ಆಡಳಿತ ಮಂಡಳಿ ಯಿಂದ ಅನರ್ಹಗೊಂಡಿದ್ದ ಷೇರುದಾರ ರೊಬ್ಬರು ನ್ಯಾಯಾಲಯದ ಆದೇಶ ಪಡೆದು ಮತ ಚಲಾವಣೆಗೆ ಬಂದಾಗ ಗುರುತಿನ ಚೀಟಿ ಇಲ್ಲದೇ ಪರದಾಟ ನಡೆಸಬೇಕಾಯಿತು. ಬಳಿಕ ಸ್ಥಳದಲ್ಲೇ ಫೋಟೊ ತೆಗೆದು ಗುರುತಿನ ಚೀಟಿ ಮಾಡಿಕೊಡುವ ವ್ಯವಸ್ಥೆ ಕಲ್ಪಿಸಿ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು.</p>.<p class="Subhead">ವಾಹನ ಸಂಚಾರಕ್ಕೆ ಅಡ್ಡಿ: ಮತ ಚಲಾಯಿಸಲು ತಾಲ್ಲೂಕಿನ ವಿವೀಧ ಭಾಗಗಳಿಂದ ಬಂದಿದ್ದ ಮತದಾರರು ಹಾಗೂ ವಿವಿಧ ರಾಜಕೀಯ ಪಕ್ಷಗಳ ಬೆಂಬಲಿಗರಿಂದಾಗಿ ಬೆಳಿಗ್ಗೆಯಿಂದಲೇ ರೈತ ಭವನದ ಆವರಣ ಹಾಗೂ ಎದುರಿನ ರಸ್ತೆಯ ಎರಡೂ ಬದಿಯಲ್ಲಿ ವಾಹನಗಳ ದಟ್ಟಟಣೆ ಹೆಚ್ಚಳವಾಗಿತ್ತು. ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸಿದ್ದರಿಂದ ಹ್ಯಾಂಡ್ಪೋಸ್ಟ್ನಿಂದ ಗಂಗನ ಮಕ್ಕಿವರೆಗೆ 2 ಕಿ. ಮೀ ದೂರದವರೆಗೂ ರಾಷ್ಟ್ರೀಯ ಹೆದ್ದಾರಿ 173 ರಲ್ಲಿ ಇಡೀ ದಿನ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೂಡಿಗೆರೆ:</strong> ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಸಿಪಿಐ ಮೈತ್ರಿಯ ಬೆಂಬಲಿತ ಅಭ್ಯರ್ಥಿಗಳಿಗೆ ಗೆಲುವು ಸಿಕ್ಕಿದೆ.</p>.<p>ಎಂಟು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಏಕ ವ್ಯಕ್ತಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್, ಜೆಡಿಎಸ್, ಸಿಪಿಐ ಮೈತ್ರಿಯ ಏಳುಮಂದಿ ಗೆಲುವು ಸಾಧಿಸುವ ಮೂಲಕ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳ ಕೈ ಮೇಲಾಗಿದೆ.</p>.<p>ಸುಸೂತ್ರ ಮತದಾನ: ಸಂಸ್ಥೆಯ ಆಡಳಿತ ಮಂಡಳಿಗೆ ಮಂಗಳವಾರ ಮತದಾನವು ಸುಸೂತ್ರವಾಗಿ ನಡೆಯಿತು.</p>.<p>ರೈತ ಭವನದಲ್ಲಿ ನಡೆದ ಮತದಾನಕ್ಕೆ ತಾಲ್ಲೂಕಿನ ವಿವಿಧ ಭಾಗಗಳಿಂದ ಬಂದ ಮತದಾರರು ಸರದಿಯಲ್ಲಿ ನಿಂತು ಮತ ಚಲಾಯಿಸಿದರು. ವಿವಿಧ ಕ್ಷೇತ್ರಗಳಿಂದ ಒಟ್ಟು ಎಂಟು ಸ್ಥಾನಗಳಿಗೆ ಮತದಾನ ನಡೆದಿದ್ದು, ರೈತಭವನದ ಸಭಾಂಗಣದಲ್ಲಿ ನಾಲ್ಕು ಹಾಗೂ ಭೋಜನಾ ಶಾಲೆಯಲ್ಲಿ ನಾಲ್ಕು ಬೂತ್ ಗಳನ್ನು ತೆರೆಯಲಾಗಿತ್ತು.</p>.<p>ಬಿಜೆಪಿಯು ಏಕಾಂಗಿಯಾಗಿ ತನ್ನ ಬೆಂಬಲಿತ ಎಂಟು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಕಾಂಗ್ರೆಸ್, ಜೆಡಿಎಸ್, ಸಿಪಿಐ ಮೈತ್ರಿಕೂಟದ ಬೆಂಬಲಿತ ಎಂಟು ಮಂದಿಯನ್ನು ಕಣಕ್ಕಿಳಿಸಿ ಭಾರಿ ಪೈಪೋಟಿಯ ನಡುವೆ ಚುನಾವಣೆ ಎದುರಿಸಿದರು.</p>.<p>ಬೆಳಿಗ್ಗೆ 8 ಗಂಟೆಗೆ ಮತದಾನ ಪ್ರಕ್ರಿಯೆ ಪ್ರಾರಂಭವಾದ ಕೂಡಲೇ ವಿವಿಧ ರಾಜಕೀಯ ಪಕ್ಷಗಳ ಮುಖಂ ಡರು ಚುನಾವಣೆ ನಡೆಯುತ್ತಿದ್ದ ರೈತ ಭವನದ ಆವರಣದಲ್ಲಿ ಶಾಮಿಯಾನ ಹಾಕಿ ಮತದಾರರನ್ನು ಸೆಳೆಯುತ್ತಿದ್ದ ದೃಶ್ಯ ಕಂಡುಬಂದಿತು. ಸಂಜೆಯವರೆಗೂ ರಾಜಕೀಯ ಪಕ್ಷಗಳ ಮುಖಂಡರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.</p>.<p>ಹಿಂದಿನ ಆಡಳಿತ ಮಂಡಳಿ ಯಿಂದ ಅನರ್ಹಗೊಂಡಿದ್ದ ಷೇರುದಾರ ರೊಬ್ಬರು ನ್ಯಾಯಾಲಯದ ಆದೇಶ ಪಡೆದು ಮತ ಚಲಾವಣೆಗೆ ಬಂದಾಗ ಗುರುತಿನ ಚೀಟಿ ಇಲ್ಲದೇ ಪರದಾಟ ನಡೆಸಬೇಕಾಯಿತು. ಬಳಿಕ ಸ್ಥಳದಲ್ಲೇ ಫೋಟೊ ತೆಗೆದು ಗುರುತಿನ ಚೀಟಿ ಮಾಡಿಕೊಡುವ ವ್ಯವಸ್ಥೆ ಕಲ್ಪಿಸಿ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು.</p>.<p class="Subhead">ವಾಹನ ಸಂಚಾರಕ್ಕೆ ಅಡ್ಡಿ: ಮತ ಚಲಾಯಿಸಲು ತಾಲ್ಲೂಕಿನ ವಿವೀಧ ಭಾಗಗಳಿಂದ ಬಂದಿದ್ದ ಮತದಾರರು ಹಾಗೂ ವಿವಿಧ ರಾಜಕೀಯ ಪಕ್ಷಗಳ ಬೆಂಬಲಿಗರಿಂದಾಗಿ ಬೆಳಿಗ್ಗೆಯಿಂದಲೇ ರೈತ ಭವನದ ಆವರಣ ಹಾಗೂ ಎದುರಿನ ರಸ್ತೆಯ ಎರಡೂ ಬದಿಯಲ್ಲಿ ವಾಹನಗಳ ದಟ್ಟಟಣೆ ಹೆಚ್ಚಳವಾಗಿತ್ತು. ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸಿದ್ದರಿಂದ ಹ್ಯಾಂಡ್ಪೋಸ್ಟ್ನಿಂದ ಗಂಗನ ಮಕ್ಕಿವರೆಗೆ 2 ಕಿ. ಮೀ ದೂರದವರೆಗೂ ರಾಷ್ಟ್ರೀಯ ಹೆದ್ದಾರಿ 173 ರಲ್ಲಿ ಇಡೀ ದಿನ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>