ಸಚಿವ ಅಶೋಕ್ ಜನ್ಮದಿನ ಆಚರಣೆ:ಬುಧವಾರ ಕಂದಾಯ ಸಚಿವ ಆರ್.ಅಶೋಕ ಅವರ ಜನ್ಮದಿನ. ಅಂದು ನಗರಕ್ಕೆ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಕಟ್ಟಡದ ಕಾಮಗಾರಿ ಪರಿಶೀಲನೆಗೆ ಬಂದಿದ್ದ ಅವರು, ಗಿರಿಶ್ರೇಣಿ ಭಾಗದ ಪ್ರಿಮ್ರೋಸ್ ವಿಲ್ಲಾಸ್ನಲ್ಲಿ ವಾಸ್ತವ್ಯ ಹೂಡಿ, ಜನ್ಮದಿನ ಆಚರಿಸಿದ್ದಾರೆ. ಅದರಲ್ಲಿ ಮುನಿರಾಜು, ಸತೀಶ ರೆಡ್ಡಿ, ಸಚಿವ ಸಿ.ಟಿ. ರವಿ ಪಾಲ್ಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ.