ಚಿಕ್ಕಮಗಳೂರು: ಕಾಶ್ಮೀರದ ಗಡಿಯ ತೀತ್ವಾಲ್ನಲ್ಲಿ ನಿರ್ಮಿಸುತ್ತಿರುವ ಶಾರದಾ ದೇಗುಲದಲ್ಲಿ ಪ್ರತಿಷ್ಠಾಪನೆಗೆ ಪಂಚಲೋಹ ವಿಗ್ರಹವನ್ನು ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ಹಸ್ತಾಂತರ ನಿಟ್ಟಿನಲ್ಲಿ ಕೈಂಕರ್ಯಗಳು ಶುರುವಾಗಿವೆ.
ಶಾರದಾ ಪೀಠದ ವಿಧುಶೇಖರಭಾರತೀ ಸ್ವಾಮೀಜಿ ಅವರು ಪಂಚಲೋಹ ಮೂರ್ತಿ ಪೂಜಾಕೈಂಕರ್ಯ ನೇರವೇರಿಸಿದರು.
ಪೂಜಾ ಕೈಂಕರ್ಯ ಬಳಿಕ ಕಾಶ್ಮೀರದ ಸೇವ್ ಶಾರದಾ ಸಮಿತಿಯವರಿಗೆ ಪಂಚಲೋಹ ಮೂರ್ತಿ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ. ಸೇವ್ ಶಾರದಾ ಸಮಿತಿಯ ಮುಖ್ಯಸ್ಥ ರವೀಂದ್ರ ಪಂಡಿತ ಮೊದಲಾದವರು ಇದ್ದಾರೆ.