<p><strong>ಕಳಸ:</strong> ಹೊರನಾಡು- ಬಲಿಗೆ ರಸ್ತೆ ಕಾಮಗಾರಿಗೆ ಕೆಲ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಈ ರಸ್ತೆಯನ್ನು ಬಳಸುವ ಅನೇಕ ಗ್ರಾಮಸ್ಥರು ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕಾರ ಮಾಡುವುದಾಗಿ ತಿಳಿಸಿದ್ದಾರೆ.</p>.<p>‘ಹೊರನಾಡು- ಬಲಿಗೆ ರಸ್ತೆ ಕಾಮಗಾರಿಗೆ ₹ 7 ಕೋಟಿ ಮಂಜೂರಾಗಿದ್ದು, ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಹೊರನಾಡಿನಿಂದ ಆರಂಭಿಸಿ ಮೊದಲ 1 ಕಿ.ಮೀ. ಕಾಮಗಾರಿ ನಡೆಸಲು ಕೆಲ ಸ್ಥಳೀಯರು ಸಹಕಾರ ನೀಡುತ್ತಿಲ್ಲ. ಇದರಿಂದ ನಮಗೆ ಅತ್ಯಗತ್ಯವಾದ ರಸ್ತೆ ಬಳಕೆಗೆ ಸಿಗುತ್ತಿಲ್ಲ’ ಎಂದು ಗ್ರಾಮಸ್ಥರು ಗುರುವಾರ ಸಂಜೆ ಬಲಿಗೆ ಕಡಿವೆಯಲ್ಲಿ ನಡೆದ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.</p>.<p>ಕಪ್ಪಿನಕುಂಬ್ರಿ, ಮೇಲುಮಂಚಿಗೆ, ದಂಟಗ, ತುರ, ಬಳಿಗೋಳು, ಹೊನ್ನೆ ಕಾಡು, ಕೆಸುವಿನ ಕೊಂಡ, ಅಕ್ಕಸಾಲು ಮಕ್ಕಿ, ಹುಲಿಬಿಳಲು, ಚಿಕ್ಕನಕುಡಿಗೆ, ಬಲಿಗೆ ಗ್ರಾಮಸ್ಥರು ಚುನಾವಣಾ ಬಹಿಷ್ಕಾರ ಮಾಡುವ ಬಗ್ಗೆ ಸ್ಪಷ್ಟ ತೀರ್ಮಾನ ತೆಗೆದುಕೊಂಡರು.</p>.<p>ಜ್ವಾಲನಯ್ಯ, ಪ್ರಕಾಶ್, ಅರ್ಕಕೀರ್ತಿ, ಪ್ರವೀಣ್, ಪೃಥ್ವಿರಾಜ್, ವಿಶಾಲ್ ನೋಟದ, ಸವಿಂಜಯ, ಗಿಡ್ಡಯ್ಯ, ಚಂದ್ರು, ರಮೇಶ್, ಚನ್ನಯ್ಯ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಳಸ:</strong> ಹೊರನಾಡು- ಬಲಿಗೆ ರಸ್ತೆ ಕಾಮಗಾರಿಗೆ ಕೆಲ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಈ ರಸ್ತೆಯನ್ನು ಬಳಸುವ ಅನೇಕ ಗ್ರಾಮಸ್ಥರು ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕಾರ ಮಾಡುವುದಾಗಿ ತಿಳಿಸಿದ್ದಾರೆ.</p>.<p>‘ಹೊರನಾಡು- ಬಲಿಗೆ ರಸ್ತೆ ಕಾಮಗಾರಿಗೆ ₹ 7 ಕೋಟಿ ಮಂಜೂರಾಗಿದ್ದು, ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಹೊರನಾಡಿನಿಂದ ಆರಂಭಿಸಿ ಮೊದಲ 1 ಕಿ.ಮೀ. ಕಾಮಗಾರಿ ನಡೆಸಲು ಕೆಲ ಸ್ಥಳೀಯರು ಸಹಕಾರ ನೀಡುತ್ತಿಲ್ಲ. ಇದರಿಂದ ನಮಗೆ ಅತ್ಯಗತ್ಯವಾದ ರಸ್ತೆ ಬಳಕೆಗೆ ಸಿಗುತ್ತಿಲ್ಲ’ ಎಂದು ಗ್ರಾಮಸ್ಥರು ಗುರುವಾರ ಸಂಜೆ ಬಲಿಗೆ ಕಡಿವೆಯಲ್ಲಿ ನಡೆದ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.</p>.<p>ಕಪ್ಪಿನಕುಂಬ್ರಿ, ಮೇಲುಮಂಚಿಗೆ, ದಂಟಗ, ತುರ, ಬಳಿಗೋಳು, ಹೊನ್ನೆ ಕಾಡು, ಕೆಸುವಿನ ಕೊಂಡ, ಅಕ್ಕಸಾಲು ಮಕ್ಕಿ, ಹುಲಿಬಿಳಲು, ಚಿಕ್ಕನಕುಡಿಗೆ, ಬಲಿಗೆ ಗ್ರಾಮಸ್ಥರು ಚುನಾವಣಾ ಬಹಿಷ್ಕಾರ ಮಾಡುವ ಬಗ್ಗೆ ಸ್ಪಷ್ಟ ತೀರ್ಮಾನ ತೆಗೆದುಕೊಂಡರು.</p>.<p>ಜ್ವಾಲನಯ್ಯ, ಪ್ರಕಾಶ್, ಅರ್ಕಕೀರ್ತಿ, ಪ್ರವೀಣ್, ಪೃಥ್ವಿರಾಜ್, ವಿಶಾಲ್ ನೋಟದ, ಸವಿಂಜಯ, ಗಿಡ್ಡಯ್ಯ, ಚಂದ್ರು, ರಮೇಶ್, ಚನ್ನಯ್ಯ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>