<p class="rtecenter"><strong>ಕೋವಿಡ್ ಸಂಕಷ್ಟದ ಕಾಲದಲ್ಲಿ ರೈತರ ಕೈಹಿಡಿದ ಸಂಘ–ಸಂಸ್ಥೆಗಳ ಹಲವು. ರೈತನಿಗೆ ಸಾಲ ಕೊಡುವುದರಿಂದ ಹಿಡಿದು ಕೂಲಿ ಕಾರ್ಮಿಕರನ್ನು ಒದಗಿಸಿ, ಯಂತ್ರಗಳನ್ನು ನೀಡಿ, ಮಾರುಕಟ್ಟೆ ವ್ಯವಸ್ಥೆ ಮಾಡಿದ ಹೆಗ್ಗಳಿಕೆ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯದ್ದು. ಈ ಯೋಜನೆಯ ಕಾರ್ಯವಿಧಾನವೇ ಈ ಭಾನುವಾರದ ‘ಪ್ರಜಾವಾಣಿ’ ವಿಶೇಷ.</strong></p>.<p><strong>ಚಿಕ್ಕಮಗಳೂರು</strong>: ಸಣ್ಣ, ಮಧ್ಯಮ ಹಿಡುವಳಿದಾರರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ (ಎಸ್ಕೆಡಿಆರ್ಡಿಪಿ) ಪ್ರಗತಿಬಂಧು ತಂಡಗಳಲ್ಲಿ ಒಳಗೊಳ್ಳುವ ಮೂಲಕ ಪರಸ್ಪರ ಕೈಜೋಡಿಸಿ ಕೃಷಿ ಚಟುವಟಿಕೆ ನಿರ್ವಹಿಸುವುದಕ್ಕೆ, ಉಳಿತಾಯ ಮಾಡುವುದಕ್ಕೆ ಮೊದಲಾದವುಗಳಿಗೆ ಅನುಕೂಲವಾಗಿದೆ.</p>.<p>ಎಸ್ಕೆಡಿಆರ್ಡಿಪಿಯಲ್ಲಿ ಪ್ರಗತಿ ಬಂಧು, ಮಹಿಳಾ, ಯುವ ಜಂಟಿ ಬಾಧ್ಯತಾ, ವಾತ್ಸಲ್ಯ ಗುಂಪುಗಳು ಇವೆ. ಒಟ್ಟ 15,665 ಗುಂಪುಗಳಿದ್ದು, 1.10 ಲಕ್ಷ ಸದಸ್ಯರು (ಪಾಲುದಾರರು) ಇದ್ದಾರೆ. ಪ್ರಗತಿ ಬಂಧು ಗುಂಪುಗಳು 6,620 ಇವೆ. ಒಂದು ಗುಂಪಿನಲ್ಲಿ 10 ಸದಸ್ಯರು ಇದ್ದಾರೆ.</p>.<p>ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವ ಪ್ರಮುಖ ಉದ್ದೇಶದಿಂದ ಪ್ರಗತಿಬಂಧು ಗುಂಪು ರಚಿಸಲಾಗಿದೆ. ಈ ಗುಂಪುಗಳಲ್ಲಿ ಸಣ್ಣ, ಮಧ್ಯಮ ಹಿಡುವಳಿದಾರರು ಇದ್ದಾರೆ. ಕಸುಬು ನಿರ್ವಹಣೆಗೆ ಹಣಕಾಸು ನೆರವು, ಉಳಿತಾಯಕ್ಕೆ ಪ್ರೆರೇಪಣೆ, ಶ್ರಮ ವಿನಿಮಯದಡಿ ಪರಸ್ಪರ ಸಾಥ್ ಸಹಿತ ರೈತ ಸ್ನೇಹಿ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗಿದೆ.</p>.<p>ವಿವಿಧ ಗ್ರಾಮಗಳಲ್ಲಿ ಗ್ರಾಹಕ ಸೇವಾ ಕೇಂದ್ರಗಳನ್ನು ತೆರೆಯಲಾಗಿದೆ. ರೈತರಿಗೆ ಬ್ಯಾಂಕ್ನಲ್ಲಿ ಖಾತೆ ತೆರೆಸಲಾಗಿದೆ. ‘ಸ್ಮಾರ್ಟ್ ಕಾರ್ಡ್’ ನೀಡಲಾಗಿದೆ. ಪ್ರಗತಿ ರಕ್ಷಾ ಕವಚ ವಿಮೆ, ಆರೋಗ್ಯ ಸುರಕ್ಷಾ, ಸಂಪೂರ್ಣ ಸುರಕ್ಷಾ ಮೊದಲಾದವನ್ನು ಕಲ್ಪಿಸಲಾಗಿದೆ. ಯೋಜನೆ ‘ನೆಟ್ವರ್ಕ್’ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ಇದೆ.</p>.<p>ಕೋವಿಡ್ ಬಿಕ್ಕಟ್ಟಿನ ಸವಾಲು; ನಿರ್ವಹಣೆ: ಕೋವಿಡ್ ಬಿಕ್ಕಟ್ಟಿನ ಕಾಲಘಟ್ಟದಲ್ಲಿ ಗುಂಪುಗಳ ನಿರ್ವಹಣೆಯಲ್ಲಿ ಬಹಳಷ್ಟು ಸವಾಲು, ಸಮಸ್ಯೆಗಳು ಎದುರಾಗಿವೆ. ಅವುಗಳನ್ನು ನಿಭಾಯಿಸಿಕೊಂಡು ಚಟುವಟಿಕೆಗಳನ್ನು ಮುಂದುವರಿಸಲಾಗಿದೆ.</p>.<p>‘ಕೋವಿಡ್ ತಲ್ಲಣದಿಂದಾಗಿ ಗುಂಪುಗಳ ಸಭೆಗಳನ್ನು ನಡೆಸುವುದು ಕಷ್ಟವಾಯಿತು. ಮನೆಬಳಿಗೆ ಬರಬೇಡಿ ಎಂದು ಹೇಳುತ್ತಿದ್ದರು. ಹಣ ಸಂಗ್ರಹಕ್ಕೂ ಕಷ್ಟವಾಯಿತು. 6 ವಾರ ಸಂಗ್ರಹಣೆ ಸ್ಥಗಿತವಾಗಿತ್ತು’ ಎಂದು ಯೋಜನೆ ಜಿಲ್ಲಾ ನಿರ್ದೇಶಕ ಪ್ರಕಾಶ್ ರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಆರೋಗ್ಯ ಇಲಾಖೆಯ ಸಹಕಾರ ಪಡೆದು ಯೋಜನೆಯ ಎಲ್ಲ ನೌಕರರಿಗೆ ತರಬೇತಿ ನೀಡಿದೆವು. ಮಾಸ್ಕ್ ಧಾರಣೆ, ಅಂತರ ಪಾಲನೆ, ಸ್ಯಾನಿಟೈಸೆಷನ್ ಎಲ್ಲದಕ್ಕೂ ಒತ್ತು ನೀಡಿದೆವು. ಕೋವಿಡ್ ಮಾರ್ಗಸೂಚಿ ಪಾಲಿಸಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದೇವೆ. ಜಿಲ್ಲೆಯಲ್ಲಿ ಪ್ರಗತಿ ಬಂಧು ಗುಂಪುಗಳಲ್ಲಿ ₹ 70 ಕೋಟಿ ಉಳಿತಾಯ ಮಾಡಿದ್ದಾರೆ. ₹ 401 ಕೋಟಿ ಹೊರ ಬಾಕಿ ಇದೆ’ ಎಂದು ಅವರು ತಿಳಿಸಿದರು.</p>.<p>ಶ್ರಮ ವಿನಿಮಯ: ಕೃಷಿ ಕ್ಷೇತ್ರವನ್ನು ಕಾಡುತ್ತಿರುವ ಕಾರ್ಮಿಕರ ಕೊರತೆ ನಿವಾರಣೆಗೆ ಪ್ರಗತಿ ಬಂಧು ತಂಡ ಶ್ರಮ ವಿನಿಮಯ ‘ಸೂತ್ರ’ ಪರಿಹಾರೋಪಾಯವಾಗಿದೆ. ಗುಂಪಿನ ಎಲ್ಲರೂ ಎಲ್ಲರ ಹೊಲ, ಗದ್ದೆ, ತೋಟಗಳಲ್ಲಿ ಒಗ್ಗೂಡಿ ಒಂದೊಂದು ದಿನ ಕೆಲಸ ಮಾಡುವುದನ್ನು ರೂಢಿಸಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="rtecenter"><strong>ಕೋವಿಡ್ ಸಂಕಷ್ಟದ ಕಾಲದಲ್ಲಿ ರೈತರ ಕೈಹಿಡಿದ ಸಂಘ–ಸಂಸ್ಥೆಗಳ ಹಲವು. ರೈತನಿಗೆ ಸಾಲ ಕೊಡುವುದರಿಂದ ಹಿಡಿದು ಕೂಲಿ ಕಾರ್ಮಿಕರನ್ನು ಒದಗಿಸಿ, ಯಂತ್ರಗಳನ್ನು ನೀಡಿ, ಮಾರುಕಟ್ಟೆ ವ್ಯವಸ್ಥೆ ಮಾಡಿದ ಹೆಗ್ಗಳಿಕೆ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯದ್ದು. ಈ ಯೋಜನೆಯ ಕಾರ್ಯವಿಧಾನವೇ ಈ ಭಾನುವಾರದ ‘ಪ್ರಜಾವಾಣಿ’ ವಿಶೇಷ.</strong></p>.<p><strong>ಚಿಕ್ಕಮಗಳೂರು</strong>: ಸಣ್ಣ, ಮಧ್ಯಮ ಹಿಡುವಳಿದಾರರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ (ಎಸ್ಕೆಡಿಆರ್ಡಿಪಿ) ಪ್ರಗತಿಬಂಧು ತಂಡಗಳಲ್ಲಿ ಒಳಗೊಳ್ಳುವ ಮೂಲಕ ಪರಸ್ಪರ ಕೈಜೋಡಿಸಿ ಕೃಷಿ ಚಟುವಟಿಕೆ ನಿರ್ವಹಿಸುವುದಕ್ಕೆ, ಉಳಿತಾಯ ಮಾಡುವುದಕ್ಕೆ ಮೊದಲಾದವುಗಳಿಗೆ ಅನುಕೂಲವಾಗಿದೆ.</p>.<p>ಎಸ್ಕೆಡಿಆರ್ಡಿಪಿಯಲ್ಲಿ ಪ್ರಗತಿ ಬಂಧು, ಮಹಿಳಾ, ಯುವ ಜಂಟಿ ಬಾಧ್ಯತಾ, ವಾತ್ಸಲ್ಯ ಗುಂಪುಗಳು ಇವೆ. ಒಟ್ಟ 15,665 ಗುಂಪುಗಳಿದ್ದು, 1.10 ಲಕ್ಷ ಸದಸ್ಯರು (ಪಾಲುದಾರರು) ಇದ್ದಾರೆ. ಪ್ರಗತಿ ಬಂಧು ಗುಂಪುಗಳು 6,620 ಇವೆ. ಒಂದು ಗುಂಪಿನಲ್ಲಿ 10 ಸದಸ್ಯರು ಇದ್ದಾರೆ.</p>.<p>ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವ ಪ್ರಮುಖ ಉದ್ದೇಶದಿಂದ ಪ್ರಗತಿಬಂಧು ಗುಂಪು ರಚಿಸಲಾಗಿದೆ. ಈ ಗುಂಪುಗಳಲ್ಲಿ ಸಣ್ಣ, ಮಧ್ಯಮ ಹಿಡುವಳಿದಾರರು ಇದ್ದಾರೆ. ಕಸುಬು ನಿರ್ವಹಣೆಗೆ ಹಣಕಾಸು ನೆರವು, ಉಳಿತಾಯಕ್ಕೆ ಪ್ರೆರೇಪಣೆ, ಶ್ರಮ ವಿನಿಮಯದಡಿ ಪರಸ್ಪರ ಸಾಥ್ ಸಹಿತ ರೈತ ಸ್ನೇಹಿ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗಿದೆ.</p>.<p>ವಿವಿಧ ಗ್ರಾಮಗಳಲ್ಲಿ ಗ್ರಾಹಕ ಸೇವಾ ಕೇಂದ್ರಗಳನ್ನು ತೆರೆಯಲಾಗಿದೆ. ರೈತರಿಗೆ ಬ್ಯಾಂಕ್ನಲ್ಲಿ ಖಾತೆ ತೆರೆಸಲಾಗಿದೆ. ‘ಸ್ಮಾರ್ಟ್ ಕಾರ್ಡ್’ ನೀಡಲಾಗಿದೆ. ಪ್ರಗತಿ ರಕ್ಷಾ ಕವಚ ವಿಮೆ, ಆರೋಗ್ಯ ಸುರಕ್ಷಾ, ಸಂಪೂರ್ಣ ಸುರಕ್ಷಾ ಮೊದಲಾದವನ್ನು ಕಲ್ಪಿಸಲಾಗಿದೆ. ಯೋಜನೆ ‘ನೆಟ್ವರ್ಕ್’ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ಇದೆ.</p>.<p>ಕೋವಿಡ್ ಬಿಕ್ಕಟ್ಟಿನ ಸವಾಲು; ನಿರ್ವಹಣೆ: ಕೋವಿಡ್ ಬಿಕ್ಕಟ್ಟಿನ ಕಾಲಘಟ್ಟದಲ್ಲಿ ಗುಂಪುಗಳ ನಿರ್ವಹಣೆಯಲ್ಲಿ ಬಹಳಷ್ಟು ಸವಾಲು, ಸಮಸ್ಯೆಗಳು ಎದುರಾಗಿವೆ. ಅವುಗಳನ್ನು ನಿಭಾಯಿಸಿಕೊಂಡು ಚಟುವಟಿಕೆಗಳನ್ನು ಮುಂದುವರಿಸಲಾಗಿದೆ.</p>.<p>‘ಕೋವಿಡ್ ತಲ್ಲಣದಿಂದಾಗಿ ಗುಂಪುಗಳ ಸಭೆಗಳನ್ನು ನಡೆಸುವುದು ಕಷ್ಟವಾಯಿತು. ಮನೆಬಳಿಗೆ ಬರಬೇಡಿ ಎಂದು ಹೇಳುತ್ತಿದ್ದರು. ಹಣ ಸಂಗ್ರಹಕ್ಕೂ ಕಷ್ಟವಾಯಿತು. 6 ವಾರ ಸಂಗ್ರಹಣೆ ಸ್ಥಗಿತವಾಗಿತ್ತು’ ಎಂದು ಯೋಜನೆ ಜಿಲ್ಲಾ ನಿರ್ದೇಶಕ ಪ್ರಕಾಶ್ ರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಆರೋಗ್ಯ ಇಲಾಖೆಯ ಸಹಕಾರ ಪಡೆದು ಯೋಜನೆಯ ಎಲ್ಲ ನೌಕರರಿಗೆ ತರಬೇತಿ ನೀಡಿದೆವು. ಮಾಸ್ಕ್ ಧಾರಣೆ, ಅಂತರ ಪಾಲನೆ, ಸ್ಯಾನಿಟೈಸೆಷನ್ ಎಲ್ಲದಕ್ಕೂ ಒತ್ತು ನೀಡಿದೆವು. ಕೋವಿಡ್ ಮಾರ್ಗಸೂಚಿ ಪಾಲಿಸಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದೇವೆ. ಜಿಲ್ಲೆಯಲ್ಲಿ ಪ್ರಗತಿ ಬಂಧು ಗುಂಪುಗಳಲ್ಲಿ ₹ 70 ಕೋಟಿ ಉಳಿತಾಯ ಮಾಡಿದ್ದಾರೆ. ₹ 401 ಕೋಟಿ ಹೊರ ಬಾಕಿ ಇದೆ’ ಎಂದು ಅವರು ತಿಳಿಸಿದರು.</p>.<p>ಶ್ರಮ ವಿನಿಮಯ: ಕೃಷಿ ಕ್ಷೇತ್ರವನ್ನು ಕಾಡುತ್ತಿರುವ ಕಾರ್ಮಿಕರ ಕೊರತೆ ನಿವಾರಣೆಗೆ ಪ್ರಗತಿ ಬಂಧು ತಂಡ ಶ್ರಮ ವಿನಿಮಯ ‘ಸೂತ್ರ’ ಪರಿಹಾರೋಪಾಯವಾಗಿದೆ. ಗುಂಪಿನ ಎಲ್ಲರೂ ಎಲ್ಲರ ಹೊಲ, ಗದ್ದೆ, ತೋಟಗಳಲ್ಲಿ ಒಗ್ಗೂಡಿ ಒಂದೊಂದು ದಿನ ಕೆಲಸ ಮಾಡುವುದನ್ನು ರೂಢಿಸಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>