<p><strong>ಬಾಳೆಹೊನ್ನೂರು</strong>: ದೇಹವನ್ನು ದುಡಿಮೆಗೆ ಮನಸ್ಸನ್ನು ಭಗವಂತನಿಗೆ ಅರ್ಪಿಸಿಕೊಂಡಾಗ ಬದುಕು ಸಾರ್ಥಕ ಎಂದು ರಂಭಾಪುರಿ ಪೀಠದ ರೇಣುಕ ಪ್ರಸನ್ನ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.</p>.<p>ರಂಭಾಪುರಿ ಪೀಠದಲ್ಲಿ ಪೌರ್ಣಿಮೆ ಅಂಗವಾಗಿ ನೆಗಳೂರು ಸ್ವಾಮೀಜಿ ನೇತೃತ್ವದಲ್ಲಿ ಕೈಗೊಂಡ ‘ಪ್ರಕೃತಿ ಸಮತೋಲನ ಪಾದಯಾತ್ರಾ’ಯ ಮಂಗಲ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.</p>.<p>ವಿದ್ಯೆ ವಿನಯಕ್ಕೆ ಕಾರಣವಾಗಬೇಕಲ್ಲದೇ ದುರಹಂಕಾರಕ್ಕಲ್ಲ. ಭೂಮಿ ಸಮತೋಲನ ಕಳೆದುಕೊಳ್ಳುತ್ತಿದೆ. ಹೀಗಾಗಿ ಅಕಾಲಿಕ ಸಂದರ್ಭದಲ್ಲಿ ಮಳೆ ಬಂದು ಜೀವ ಸಂಕುಲಕ್ಕೆ ಅಪಾರ ಸಮಸ್ಯೆ ಉಂಟಾಗುತ್ತಿದೆ. ಪ್ರಕೃತಿ ಕೊಟ್ಟ ಅಮೂಲ್ಯ ಕೊಡುಗೆಯನ್ನು ಜೀವ ಸಂಕುಲ ನಿರ್ಲಕ್ಷ್ಯ ಮಾಡಬಾರದು ಎಂದರು.</p>.<p>ಪಾದಯಾತ್ರೆಯ ರೂವಾರಿ ಗುರುಶಾಂತೇಶ್ವರ ಸ್ವಾಮೀಜಿ ಮಾತನಾಡಿ, ಪರಿಸರ ಸಂರಕ್ಷಣೆಯಿಂದ ಜೀವ ಜಗತ್ತು ಸಮೃದ್ಧಗೊಳ್ಳಲು ಸಾಧ್ಯವಾಗುತ್ತದೆ ಎಂದರು.</p>.<p>ಶ್ರೀನಿವಾಸ ಸರಡಗಿಯ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿ, ಆಲಮೇಲ, ತಡವಲಗ, ಮಮದಾಪುರ, ಯಂಕಂಚಿ, ಗುಂಡಕನಾಳ, ಹನುಮಾಪುರ, ಅಗರಖೇಡ, ಕುಮಸಿ, ರಾಣೆಬೆನ್ನೂರು, ಕೊಡಿಯಾಲ ಹೊಸಪೇಟೆ ಸ್ವಾಮೀಜಿ ಇದ್ದರು.ಆಡಳಿತಾಧಿಕಾರಿ ಎಸ್.ಬಿ.ಹಿರೇಮಠ, ರುದ್ರಯ್ಯ ಆಸಂದಿ, ಹುಲ್ಲಳ್ಳಿ ಸುರೇಶ, ಚಂದ್ರಕಲಾ ಅನುಘಟ್ಟ, ವಿಕ್ರಮ್. ಶಿವಪ್ರಸಾದ. ವೀರೇಶ ಕುಲಕರ್ಣಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಳೆಹೊನ್ನೂರು</strong>: ದೇಹವನ್ನು ದುಡಿಮೆಗೆ ಮನಸ್ಸನ್ನು ಭಗವಂತನಿಗೆ ಅರ್ಪಿಸಿಕೊಂಡಾಗ ಬದುಕು ಸಾರ್ಥಕ ಎಂದು ರಂಭಾಪುರಿ ಪೀಠದ ರೇಣುಕ ಪ್ರಸನ್ನ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.</p>.<p>ರಂಭಾಪುರಿ ಪೀಠದಲ್ಲಿ ಪೌರ್ಣಿಮೆ ಅಂಗವಾಗಿ ನೆಗಳೂರು ಸ್ವಾಮೀಜಿ ನೇತೃತ್ವದಲ್ಲಿ ಕೈಗೊಂಡ ‘ಪ್ರಕೃತಿ ಸಮತೋಲನ ಪಾದಯಾತ್ರಾ’ಯ ಮಂಗಲ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.</p>.<p>ವಿದ್ಯೆ ವಿನಯಕ್ಕೆ ಕಾರಣವಾಗಬೇಕಲ್ಲದೇ ದುರಹಂಕಾರಕ್ಕಲ್ಲ. ಭೂಮಿ ಸಮತೋಲನ ಕಳೆದುಕೊಳ್ಳುತ್ತಿದೆ. ಹೀಗಾಗಿ ಅಕಾಲಿಕ ಸಂದರ್ಭದಲ್ಲಿ ಮಳೆ ಬಂದು ಜೀವ ಸಂಕುಲಕ್ಕೆ ಅಪಾರ ಸಮಸ್ಯೆ ಉಂಟಾಗುತ್ತಿದೆ. ಪ್ರಕೃತಿ ಕೊಟ್ಟ ಅಮೂಲ್ಯ ಕೊಡುಗೆಯನ್ನು ಜೀವ ಸಂಕುಲ ನಿರ್ಲಕ್ಷ್ಯ ಮಾಡಬಾರದು ಎಂದರು.</p>.<p>ಪಾದಯಾತ್ರೆಯ ರೂವಾರಿ ಗುರುಶಾಂತೇಶ್ವರ ಸ್ವಾಮೀಜಿ ಮಾತನಾಡಿ, ಪರಿಸರ ಸಂರಕ್ಷಣೆಯಿಂದ ಜೀವ ಜಗತ್ತು ಸಮೃದ್ಧಗೊಳ್ಳಲು ಸಾಧ್ಯವಾಗುತ್ತದೆ ಎಂದರು.</p>.<p>ಶ್ರೀನಿವಾಸ ಸರಡಗಿಯ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿ, ಆಲಮೇಲ, ತಡವಲಗ, ಮಮದಾಪುರ, ಯಂಕಂಚಿ, ಗುಂಡಕನಾಳ, ಹನುಮಾಪುರ, ಅಗರಖೇಡ, ಕುಮಸಿ, ರಾಣೆಬೆನ್ನೂರು, ಕೊಡಿಯಾಲ ಹೊಸಪೇಟೆ ಸ್ವಾಮೀಜಿ ಇದ್ದರು.ಆಡಳಿತಾಧಿಕಾರಿ ಎಸ್.ಬಿ.ಹಿರೇಮಠ, ರುದ್ರಯ್ಯ ಆಸಂದಿ, ಹುಲ್ಲಳ್ಳಿ ಸುರೇಶ, ಚಂದ್ರಕಲಾ ಅನುಘಟ್ಟ, ವಿಕ್ರಮ್. ಶಿವಪ್ರಸಾದ. ವೀರೇಶ ಕುಲಕರ್ಣಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>