ಹದಗೆಟ್ಟ ರಸ್ತೆಯಿಂದಾಗಿ ಅಜ್ಜಂಪುರ ತಲುಪಲು ತೊಂದರೆ ಆಗಿದೆ. ಕೇವಲ 5-6 ಕಿ.ಮೀ. ಅಂತರಕ್ಕೆ 10-15 ಕಿ.ಮೀ. ಸುತ್ತಿ ಬಳಸಿದ ರಸ್ತೆಯಲ್ಲಿ ಸಾಗುವಂತಾಗಿದೆ. ಕೂಡಲೇ ಸಂಬಂಧಪಟ್ಟವರು ಬದಲಿ ರಸ್ತೆಯನ್ನಾದರೂ ಸಂಚಾರಕ್ಕೆ ಯೋಗ್ಯ
ವಾಗಿಸಲು ಕ್ರಮ ವಹಿಸಬೇಕು ಎಂದು ಮಾರ್ಗದ ನಾರಣಾಪುರ, ಬಂಕನಗಟ್ಟೆ, ಅನುವನಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.