<p><strong>ಶೃಂಗೇರಿ (ಚಿಕ್ಕಮಗಳೂರು):</strong> ಶಾರದಾ ಪೀಠದ 36ನೇ ಗುರು ಭಾರತೀತೀರ್ಥ ಸ್ವಾಮೀಜಿ ಅವರ ಸನ್ಯಾಸ ಸ್ವೀಕಾರದ 50ನೇ ವರ್ಷಾಚರಣೆಯನ್ನು ‘ಸುವರ್ಣ ಭಾರತೀ’ ಹೆಸರಿನಲ್ಲಿ ಇದೇ 11ರಂದು ಆಚರಿಸಲಾಗುತ್ತಿದ್ದು, ಅದಕ್ಕಾಗಿ ಸ್ತೋತ್ರ ತ್ರಿವೇಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.</p>.<p>ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಸಾಮೂಹಿಕ ಸ್ತೋತ್ರ ಸಮರ್ಪಣೆ ನಂತರ ಗುರುಗಳ ಆಶೀರ್ವಚನ ನಡೆಯಲಿದೆ. ಮಠದ ಕಿರಿಯ ಗುರು ವಿಧುಶೇಖರ ಭಾರತೀ ಸ್ವಾಮೀಜಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.</p>.<p>ಶಾರದಾ ಮಠದ ಗುರು ನಿವಾಸದ ಪಕ್ಕದಲ್ಲಿ ನರಸಿಂಹವನದ ಭಾರತೀತೀರ್ಥ ನಗರದ 20 ಎಕರೆ ಜಾಗದಲ್ಲಿ ಭವ್ಯ ವೇದಿಕೆ ಸಜ್ಜಾಗಿದೆ. 50 ಸಾವಿರ ಭಕ್ತರು ಸೇರಿ ಆದಿ ಶಂಕರಚಾರ್ಯ ವಿರಚಿತ ಮೂರು ಸ್ತೋತ್ರವನ್ನು ಪಠಿಸಿ ಸಮರ್ಪಿಸಲಿದ್ದಾರೆ.</p>.<p>ವಿವಿಧ ಕಡೆಗಳಿಂದ ಭಕ್ತರನ್ನು ಕರೆತರಲು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ 700 ಬಸ್ಗಳನ್ನು ಕಾಯ್ದಿರಿಸಲಾಗಿದೆ. 5 ಸಾವಿರಕ್ಕೂ ಅಧಿಕ ಖಾಸಗಿ ವಾಹನಗಳು ಬರುವ ನಿರೀಕ್ಷೆ ಇದೆ. ವಾಹನ ನಿಲುಗಡೆ ಸ್ಥಳ, ಉಪಾಹಾರ ಮತ್ತು ಭೋಜನ ವ್ಯವಸ್ಥೆಗಾಗಿ 25 ವಿಭಾಗದಲ್ಲಿ 3 ಸಾವಿರಕ್ಕೂ ಅಧಿಕ ಸ್ವಯಂ ಸೇವಕರು ಸಿದ್ಧತೆ ನಡೆಸಿದ್ದಾರೆ.</p>.<p>ರಾಜ್ಯದ ವಿವಿಧ ಭಾಗದ 9 ಮಠದ ಪೀಠಾಧಿಪತಿಗಳು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್ ಚವ್ಹಾಣ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರು, ಅಧಿಕಾರಿಗಳು ಭಾಗವಹಿಸುವರು.</p>.<h2><strong>ಕಲ್ಯಾಣ ವೃಷ್ಠಿ ಸ್ತವ ಮಹಾಭಿಯಾನ:</strong></h2><p> ‘ಶಂಕರಾಚಾರ್ಯರ ಸ್ತೋತ್ರವನ್ನು ಜನ ಸಾಮಾನ್ಯರು ಪಠಿಸುವಂತೆ ಮಾಡುವ ಬೃಹತ್ ಆಂದೋಲನವೇ ‘ಕಲ್ಯಾಣ ವೃಷ್ಠಿ ಸ್ತವ ಮಹಾಭಿಯಾನ. ಈ ಬೃಹತ್ ಆಂದೋಲನವೇ ಸ್ತೋತ್ರ ತ್ರಿವೇಣಿಯ ಮಹಾ ಸಮರ್ಪಣಾ ಕಾರ್ಯಕ್ರಮವಾಗಿದೆ’ ಎಂದು ಶಾರದಾ ಪೀಠದ ಆಡಳಿತಾಧಿಕಾರಿ ಪಿ.ಎ. ಮುರುಳಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶೃಂಗೇರಿ (ಚಿಕ್ಕಮಗಳೂರು):</strong> ಶಾರದಾ ಪೀಠದ 36ನೇ ಗುರು ಭಾರತೀತೀರ್ಥ ಸ್ವಾಮೀಜಿ ಅವರ ಸನ್ಯಾಸ ಸ್ವೀಕಾರದ 50ನೇ ವರ್ಷಾಚರಣೆಯನ್ನು ‘ಸುವರ್ಣ ಭಾರತೀ’ ಹೆಸರಿನಲ್ಲಿ ಇದೇ 11ರಂದು ಆಚರಿಸಲಾಗುತ್ತಿದ್ದು, ಅದಕ್ಕಾಗಿ ಸ್ತೋತ್ರ ತ್ರಿವೇಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.</p>.<p>ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಸಾಮೂಹಿಕ ಸ್ತೋತ್ರ ಸಮರ್ಪಣೆ ನಂತರ ಗುರುಗಳ ಆಶೀರ್ವಚನ ನಡೆಯಲಿದೆ. ಮಠದ ಕಿರಿಯ ಗುರು ವಿಧುಶೇಖರ ಭಾರತೀ ಸ್ವಾಮೀಜಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.</p>.<p>ಶಾರದಾ ಮಠದ ಗುರು ನಿವಾಸದ ಪಕ್ಕದಲ್ಲಿ ನರಸಿಂಹವನದ ಭಾರತೀತೀರ್ಥ ನಗರದ 20 ಎಕರೆ ಜಾಗದಲ್ಲಿ ಭವ್ಯ ವೇದಿಕೆ ಸಜ್ಜಾಗಿದೆ. 50 ಸಾವಿರ ಭಕ್ತರು ಸೇರಿ ಆದಿ ಶಂಕರಚಾರ್ಯ ವಿರಚಿತ ಮೂರು ಸ್ತೋತ್ರವನ್ನು ಪಠಿಸಿ ಸಮರ್ಪಿಸಲಿದ್ದಾರೆ.</p>.<p>ವಿವಿಧ ಕಡೆಗಳಿಂದ ಭಕ್ತರನ್ನು ಕರೆತರಲು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ 700 ಬಸ್ಗಳನ್ನು ಕಾಯ್ದಿರಿಸಲಾಗಿದೆ. 5 ಸಾವಿರಕ್ಕೂ ಅಧಿಕ ಖಾಸಗಿ ವಾಹನಗಳು ಬರುವ ನಿರೀಕ್ಷೆ ಇದೆ. ವಾಹನ ನಿಲುಗಡೆ ಸ್ಥಳ, ಉಪಾಹಾರ ಮತ್ತು ಭೋಜನ ವ್ಯವಸ್ಥೆಗಾಗಿ 25 ವಿಭಾಗದಲ್ಲಿ 3 ಸಾವಿರಕ್ಕೂ ಅಧಿಕ ಸ್ವಯಂ ಸೇವಕರು ಸಿದ್ಧತೆ ನಡೆಸಿದ್ದಾರೆ.</p>.<p>ರಾಜ್ಯದ ವಿವಿಧ ಭಾಗದ 9 ಮಠದ ಪೀಠಾಧಿಪತಿಗಳು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್ ಚವ್ಹಾಣ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರು, ಅಧಿಕಾರಿಗಳು ಭಾಗವಹಿಸುವರು.</p>.<h2><strong>ಕಲ್ಯಾಣ ವೃಷ್ಠಿ ಸ್ತವ ಮಹಾಭಿಯಾನ:</strong></h2><p> ‘ಶಂಕರಾಚಾರ್ಯರ ಸ್ತೋತ್ರವನ್ನು ಜನ ಸಾಮಾನ್ಯರು ಪಠಿಸುವಂತೆ ಮಾಡುವ ಬೃಹತ್ ಆಂದೋಲನವೇ ‘ಕಲ್ಯಾಣ ವೃಷ್ಠಿ ಸ್ತವ ಮಹಾಭಿಯಾನ. ಈ ಬೃಹತ್ ಆಂದೋಲನವೇ ಸ್ತೋತ್ರ ತ್ರಿವೇಣಿಯ ಮಹಾ ಸಮರ್ಪಣಾ ಕಾರ್ಯಕ್ರಮವಾಗಿದೆ’ ಎಂದು ಶಾರದಾ ಪೀಠದ ಆಡಳಿತಾಧಿಕಾರಿ ಪಿ.ಎ. ಮುರುಳಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>