ಶನಿವಾರ, 18 ಅಕ್ಟೋಬರ್ 2025
×
ADVERTISEMENT
ADVERTISEMENT

ಶೃಂಗೇರಿ | ತುಂಗಾ ನದಿ ಪಾತ್ರದ ಗಾಂಧಿ ಮೈದಾನ: 26 ಅಂಗಡಿಗಳ ತೆರವು

ವಿರೋಧ, ಪ್ರತಿಭಟನೆ ನಡುವೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು
Published : 17 ಅಕ್ಟೋಬರ್ 2025, 4:50 IST
Last Updated : 17 ಅಕ್ಟೋಬರ್ 2025, 4:50 IST
ಫಾಲೋ ಮಾಡಿ
Comments
ವಿಶ್ವ ಹಿಂದೂ ಪರಿಷತ್ ಮುಖಂಡ ಸುರೇಶ್ ಬಿಜೆಪಿ ಮುಖಂಡರು ಮತ್ತು ಅಂಗಡಿ ಮಾಲೀಕರು ಧರಣಿ ನಡೆಸಿದರು
ವಿಶ್ವ ಹಿಂದೂ ಪರಿಷತ್ ಮುಖಂಡ ಸುರೇಶ್ ಬಿಜೆಪಿ ಮುಖಂಡರು ಮತ್ತು ಅಂಗಡಿ ಮಾಲೀಕರು ಧರಣಿ ನಡೆಸಿದರು
ಬಿಜೆಪಿ ನೇತೃತ್ವದ ಸರ್ಕಾರ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಅಧಿಕಾರದಲ್ಲಿ ಇರುವಾಗಲೇ ಈ ಪ್ರಕರಣ ದಾಖಲಾಗಿತ್ತು. ಈಗ ಹೈಕೋರ್ಟ್ ಆದೇಶ ನೀಡಿದೆ. ನ್ಯಾಯಾಲಯದ ಆದೇಶಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನ್ಯಾಯಾಲಯ ಆದೇಶಕ್ಕೆ ಎಲ್ಲರೂ ತಲೆಬಾಗಬೇಕು.
ಟಿ.ಡಿ.ರಾಜೇಗೌಡ ಶಾಸಕ
ಅಂಗಡಿ ಮಾಲೀಕರ ಕಣ್ಣೀರು
‘ಜೀವನೋಪಯಕ್ಕಾಗಿ ಸಣ್ಣ ಅಂಗಡಿ ನಡೆಸುತ್ತಿದ್ದೆವು. ಪಟ್ಟಣ ಪಂಚಾಯಿತಿಗೆ ದಿನಕ್ಕೆ ₹50 ಪಾವತಿಸುತ್ತಿದ್ದೇನೆ. ಈಗ ತೆರವುಗೊಳಿಸಿದ್ದು ಮುಂದೆ ಏನು ಮಾಡಬೇಕು ಎಂಬ ದಿಕ್ಕು ತೋಚುತ್ತಿಲ್ಲ. ದ್ವೇಷ ರಾಜಕಾರಣದಿಂದ ನಮಗೆ ಈ ಸ್ಥಿತಿ ಬಂದಿದೆ’ ಎಂದು ಕಲ್ಕಟ್ಟೆ ಮಹೇಶ್ ಕಣ್ಣೀರಿಟ್ಟರು. ‘ಯೋಗ್ಯತೆ ಇಲ್ಲದವರಿಗೆ ಅಧಿಕಾರದ ಯೋಗ ಬಂದರೆ ಬಡವರನ್ನು ಈ ರೀತಿ ಕಣ್ಣಿರು ಹಾಕಿಸುತ್ತಾರೆ. ಚಿಕ್ಕ–ಪುಟ್ಟ ವ್ಯಾಪಾರ ಮಾಡಿಕೊಂಡು ಬಂದ ಜನರನ್ನು ಗೋಳಾಡಿಸಿದರೆ ಅವರನ್ನು ದೇವರು ಸುಮ್ಮನೆ ಬೀಡುವುದಿಲ್ಲ. 26 ಅಂಗಡಿಗಳನ್ನು ತೆರವುಗೊಳಿಸಿದ್ದರಿಂದ ಶಾಸಕರು ಸಂತೃಪ್ತರಾಗಿರಬಹುದು’ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ವೇಣುಗೋಪಾಲ್ ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡರ ಬಂಧನ; ಪ್ರಕರಣ ದಾಖಲು
ಬೆಳಿಗ್ಗೆ 10 ಗಂಟೆಯಿಂದ ಅಂಗಡಿಯವರು ಸ್ವಯಂ ಪ್ರೇರಿತವಾಗಿ ತೆರವುಗೊಳಿಸಲು ಮುಂದಾದರು. ವಿಶ್ವ ಹಿಂದೂ ಪರಿಷತ್ ಮುಖಂಡರಾದ ಸುರೇಶ್ ಮತ್ತು ಆರ್.ಡಿ ಮಹೇಂದ್ರ ಅವರು ತೆರವಿಗೆ ವಿರೋಧ ವ್ಯಕ್ತಪಡಿಸಿದಾಗ ಅಂಗಡಿ ಮಾಲೀಕರು ಧರಣಿ ಮಾಡಲು ಮುಂದಾದರು. ಸುರೇಶ್ ಮತ್ತು ಆರ್.ಡಿ ಮಹೇಂದ್ರ ಸೇರಿದಂತೆ 11 ಜನರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT