ಪತ್ನಿಯಿಂದ ದೂರು: ದಾವಣಗೆರೆಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ 2006ರಲ್ಲಿ ಶ್ರೀನಿಧಿ ಅವರೊಂದಿಗೆ ನನ್ನ ವಿವಾಹವಾಗಿತ್ತು, ನಮಗೆ ಇಬ್ಬರು ಮಕ್ಕಳು ಇದ್ದಾರೆ ಎಂದು ಪತ್ನಿ ತಿಳಿಸಿದ್ದಾರೆ. ಪತಿ ಶ್ರೀನಿಧಿ ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದರಿಂದ ಕಡೂರು ಠಾಣೆಯಲ್ಲಿ ದೂರು ದಾಖಲಿಸಿದ್ದೆ. ಮತ್ತೆ ರಾಜಿ ಮೂಲಕ ಒಂದಾಗಿದ್ದೆವು ಎಂದು ಶ್ರೀನಿಧಿ ಪತ್ನಿ ತಿಳಿಸಿದ್ದಾರೆ. ಶ್ರೀನಿಧಿ ಅವರು ಹಿರಿಯ ಸಿವಿಲ್ ಕೋರ್ಟ್ನಲ್ಲಿ ವಿವಾಹ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.