ಮಲ್ಲಂದೂರು ರಸ್ತೆ, ಬೇಲೂರು ರಸ್ತೆ, ವಿಜಯಪುರದ ಗಣಪತಿ ಪೆಂಡಾಲ್ ಜಾಗ ಸಹಿತ ವಿವಿಧೆಡೆಗಳಲ್ಲಿ ತಳ್ಳುಗಾಡಿಗಳಲ್ಲಿ ಪಾನಿಪೂರಿ, ಗೂಬಿ ಮಂಚೂರಿ, ಎಗ್ ರೈಸ್, ವಡೆ ಇತ್ಯಾದಿ ವ್ಯಾಪಾರ ನಡೆಯುತ್ತದೆ. ನೂರಾರು ಮಂದಿಗೆ ತಳ್ಳುಗಾಡಿ ವ್ಯಾಪಾರವೇ ದುಡಿಮೆ ದಾರಿ. ನೆಲಬಾಡಿಗೆ ಕಟ್ಟದಿದ್ದರೆ ‘ಸಂಕಷ್ಟ’ ತಪ್ಪಿದ್ದಲ್ಲ. ವ್ಯಾಪಾರಕ್ಕೇ ಕತ್ತರಿ ಬೀಳುವ ಸಾಧ್ಯತೆ ಇರುತ್ತದೆ.