ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೇಗದ್ದೆ | 302 ಎಕರೆ ಪ್ರದೇಶ ಮೀಸಲು ಅರಣ್ಯವೆಂದು ಘೋಷಿಸಿದ ಸರ್ಕಾರ

Published 10 ಆಗಸ್ಟ್ 2023, 13:51 IST
Last Updated 10 ಆಗಸ್ಟ್ 2023, 13:51 IST
ಅಕ್ಷರ ಗಾತ್ರ

ಬಾಳೆಹೊನ್ನೂರು: ಕೊಪ್ಪ ತಾಲ್ಲೂಕು ಮೇಗುಂದಾ ಹೋಬಳಿಯ ಹಿರೇಗದ್ದೆ ಗ್ರಾಮದ 302 ಎಕರೆ ಪ್ರದೇಶವನ್ನು ಸರ್ಕಾರ ‘ಮೀಸಲು ಅರಣ್ಯ’ ಎಂದು ಘೋಷಿಸಿದೆ.

ನವೆಂಬರ್‌ 23, 2011ರಲ್ಲಿ ಹಿರೇಗದ್ದೆ ಗ್ರಾಮದ ಒಂದರಿಂದ ಐದರವರೆಗಿನ ಬ್ಲಾಕ್ ಒಳಗೊಂಡ 302 ಎಕರೆ ಪ್ರದೇಶವನ್ನು ಮೀಸಲು ಅರಣ್ಯ ಎಂದು ಘೋಷಿಸಲು ಉದ್ದೇಶಿಸಿದ್ದು, ಜನವರಿ 10, 2013ರಂದು ಕರ್ನಾಟಕ ರಾಜ್ಯ ಪತ್ರದಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು.

ಇದೀಗ ಚಿಕ್ಕಮಗಳೂರು ಜಿಲ್ಲಾಧಿಕಾರಿ, ಕಡೂರಿನ ಅರಣ್ಯ ವ್ಯವಸ್ಥಾಪನಾಧಿಕಾರಿ, ಕೊಪ್ಪ ಉಪ ಸಂರಕ್ಷಣಾಧಿಕಾರಿ ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಪರಿಶೀಲಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವ ಹಿನ್ನಲೆಯಲ್ಲಿ ಕರ್ನಾಟಕ ಅರಣ್ಯ ಕಾಯ್ದೆ 1963ರ ಕಲಂ -17ರ ಅಡಿಯಲ್ಲಿನ ಹಿರೇಗದ್ದೆ ಬ್ಲಾಕ್ ಒಂದರಿಂದ ಐದರವರೆಗಿನ ಒಟ್ಟು 302 ಎಕರೆ ಪ್ರದೇಶವನ್ನು ಜು.5, 2023ರಿಂದ ಜಾರಿಗೆ ಬರುವಂತೆ ಮೀಸಲು ಅರಣ್ಯ ಎಂದು ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ.

ಇದೇ ರೀತಿ ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿ ಮಧುಗುಂಡಿ ಬ್ಲಾಕ್ ಒಂದರಿಂದ ಐದರವರೆಗಿನ 640 ಎಕರೆ 35 ಗುಂಟೆ, ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆ ಬ್ಲಾಕ್ ನ 36 ಎಕರೆ 21 ಗುಂಟೆ ಪ್ರದೇಶವನ್ನೂ ಸರ್ಕಾರ ಮೀಸಲು ಅರಣ್ಯ ಎಂದು ಘೋಷಿಸಿ ಆದೇಶ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT