<p><strong>ಬೀರೂರು(ಕಡೂರು):</strong> ಕನ್ನಡ ಭಾಷೆಯ ಮೇಲಿನ ಪ್ರೇಮ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದೆ ನಿರಂತರವಾಗಿದ್ದರೆ ಭಾಷೆ ತನ್ನ ಮಹತ್ವ ಉಳಿಸಿಕೊಳ್ಳುತ್ತದೆ ಎಂದು ಶಾಂತಾ ಬೀರೂರು ತಿಳಿಸಿದರು.</p>.<p>ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ಗಣಪತಿ ಪೆಂಡಾಲ್ ಆವರಣದಲ್ಲಿ ಶನಿವಾರ ಆಟೊ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ 70ನೇ ಕನ್ನಡ ರಾಜ್ಯೋತ್ಸವದಲ್ಲಿ ದ್ವಜಾರೋಹಣ ನೆರವೇರಿಸಿ ಮಾತನಾಡಿದರು.</p>.<p>ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ಇತರೆ ಭಾಷೆಗಳಿಗೆ ಹೋಲಿಸಿದರೆ ಸಾಹಿತ್ಯ, ಕಲೆ, ಜನಪದ ಮತ್ತು ಸಂಸ್ಕೃತಿಯ ವಿಷಯಗಳಲ್ಲಿಯೂ ಕನ್ನಡ ಉತ್ಕಷ್ಟತೆಯನ್ನು ಪಡೆದಿದೆ. ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರಾಗಿದ್ದು, ಕನ್ನಡ ನಾಡು- ನುಡಿಯನ್ನು ಉಳಿಸಿ ಬೆಳೆಸುವಲ್ಲಿ ಆಟೊ ಚಾಲಕರು ಹೆಚ್ಚಿನ ಒತ್ತು ನೀಡುತ್ತಿರುವುದು ಮೆಚ್ಚುವಂತಹದ್ದು. ಸ್ವಯಂ ಪ್ರೇರಣೆಯಿಂದ ಕನ್ನಡ ಹಬ್ಬ ಆಚರಿಸುವ ಆಟೊಚಾಲಕರ ಕನ್ನಡ ಪ್ರೇಮ ಶ್ಲಾಘನೀಯ ಎಂದು ಕಿವಿಮಾತು ಹೇಳಿದರು.</p>.<p>ಕಾರ್ಯಕ್ರಮ ಉದ್ಘಾಟಿಸಿದ ಪುರಸಭೆ ಮಾಜಿ ಅಧ್ಯಕ್ಷ ಎಂ.ಪಿ.ಸುದರ್ಶನ್, ಪರಸ್ಥಳಗಳಿಂದ ಬರುವ ಯಾತ್ರಿಗಳು ತಲುಪಬೇಕಾದ ಸ್ಥಳಗಳಿಗೆ ಸುರಕ್ಷಿತವಾಗಿ ಸೇರಿಸುವ ಆಟೊ ಚಾಲಕರು ತಮ್ಮ ವೃತ್ತಿ ಬದುಕಿನಲ್ಲಿ ಭಾಷಾಭಿಮಾನವನ್ನು ಮೆರೆಯುವುದರ ಜತೆಗೆ ತಮ್ಮ ಮನೆಯ ಹಬ್ಬದಂತೆ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿರುವ ಎಲ್ಲರಿಗೂ ಮಾದರಿ ಎಂದರು.</p>.<p>ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಸವಿತಾ ರಮೇಶ್ ಮಾತನಾಡಿ, ಇಂಗ್ಲೀಷ್ ವ್ಯಾಮೋಹ ಎಲ್ಲರಲ್ಲೂ ಹೆಚ್ಚಾಗಿ ಮಾತೃಭಾಷೆಯನ್ನು ಕಡೆಗಣಿಸುವ ವಾತಾವರಣದಲ್ಲಿ ನಾವಿದ್ದೇವೆ. ಆದರೆ ಇಂದಿಗೂ ನಾಡು, ನುಡಿ, ನೆಲ, ಜಲ ಸಂರಕ್ಷಣೆಯಲ್ಲಿ, ಕನ್ನಡ ಪರ ಹೋರಾಟಗಳಲ್ಲಿ ಆಟೊ ಚಾಲಕರು ಮುಂಚೂಣಿಯಲ್ಲಿದ್ದಾರೆ ಎಂದರು.</p>.<p>ಬೀರೂರು ಪಿಎಸ್ಐ ತಿಪ್ಪೇಶ್ ಮಾತನಾಡಿ, ಆಟೊ ಚಾಲಕರು ಪಟ್ಟಣಗಳ ನರನಾಡಿ ಇದ್ದಂತೆ. ಪರಸ್ಥಳಗಳಿಂದ ಬರುವ ಅಥವಾ ಹೋಗುವವರಿಗೆ ಸರಿಯಾದ ದಾರಿ ತೋರಿಸುವ ಆಟೋ ಚಾಲಕರು ಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮವನ್ನು ಪಾಲಿಸಬೇಕು. ವಾಹನಗಳ ವಿಮೆ, ಹೊಗೆ ತಪಾಸಣೆ, ಪರವಾನಗಿಗಳನ್ನು ಹೊಂದಬೇಕು ಹಾಗೂ ಸಮವಸ್ತ್ರ ಧರಿಸುವುದನ್ನು ಮರೆಯಬೇಡಿ ಎಂದು ಸಲಹೆ ನೀಡಿದರು.</p>.<p>ಕಾರ್ಯಕ್ರಮದಲ್ಲಿ ಆಟೊ ಚಾಲಕರು ಮತ್ತು ಮಾಲೀಕರ ಸಂಘದ ಗೌರವಾಧ್ಯಕ್ಷ ಬಿ.ಕೆ.ಶಶಿಧರ್, ಅಧ್ಯಕ್ಷ ಬಿ.ಎಲ್.ರವಿಕುಮಾರ್, ಕೆ.ಎಂ.ಜಯಪ್ರಕಾಶ್, ಮಾರ್ಗದ ಮಧು, ಅಪರಾಧ ವಿಭಾಗದ ಪಿಎಸ್ಐ ಗಣಪತಿ ಶೇರುಗಾರ್, ಹಾಗೂ ಆಟೋ ಸಂಘದ ಸಲಹೆಗಾರರಾದ ಮಾಲತೇಶ್, ಸೋಮಣ್ಣ ಮತ್ತು ಮಂಜುನಾಥ್, ಭರತ್, ವಿಲ್ಸನ್ ಹಾಜರಿದ್ದರು.</p>.<p>ಕಾರ್ಯಕ್ರಮದ ಬಳಿಕ ಆಟೊಗಳಿಗೆ ಕನ್ನಡದ ಬಾವುಟಗಳಿಂದ ಅಲಂಕರಿಸಿ, ಭುವನೇಶ್ವರಿ ಭಾವಚಿತ್ರ, ಬಸವಣ್ಣ, ಸಂಗೊಳ್ಳಿರಾಯಣ್ಣ, ಶಂಕರ್ ನಾಗ್, ಇಮ್ಮಡಿ ಪುಲಿಕೇಶಿ ಸೇರಿದಂತೆ ಕನ್ನಡ ಕವಿಗಳ ಭಾವಚಿತ್ರದೊಂದಿಗೆ ಪಟ್ಟಣದ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀರೂರು(ಕಡೂರು):</strong> ಕನ್ನಡ ಭಾಷೆಯ ಮೇಲಿನ ಪ್ರೇಮ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದೆ ನಿರಂತರವಾಗಿದ್ದರೆ ಭಾಷೆ ತನ್ನ ಮಹತ್ವ ಉಳಿಸಿಕೊಳ್ಳುತ್ತದೆ ಎಂದು ಶಾಂತಾ ಬೀರೂರು ತಿಳಿಸಿದರು.</p>.<p>ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ಗಣಪತಿ ಪೆಂಡಾಲ್ ಆವರಣದಲ್ಲಿ ಶನಿವಾರ ಆಟೊ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ 70ನೇ ಕನ್ನಡ ರಾಜ್ಯೋತ್ಸವದಲ್ಲಿ ದ್ವಜಾರೋಹಣ ನೆರವೇರಿಸಿ ಮಾತನಾಡಿದರು.</p>.<p>ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ಇತರೆ ಭಾಷೆಗಳಿಗೆ ಹೋಲಿಸಿದರೆ ಸಾಹಿತ್ಯ, ಕಲೆ, ಜನಪದ ಮತ್ತು ಸಂಸ್ಕೃತಿಯ ವಿಷಯಗಳಲ್ಲಿಯೂ ಕನ್ನಡ ಉತ್ಕಷ್ಟತೆಯನ್ನು ಪಡೆದಿದೆ. ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರಾಗಿದ್ದು, ಕನ್ನಡ ನಾಡು- ನುಡಿಯನ್ನು ಉಳಿಸಿ ಬೆಳೆಸುವಲ್ಲಿ ಆಟೊ ಚಾಲಕರು ಹೆಚ್ಚಿನ ಒತ್ತು ನೀಡುತ್ತಿರುವುದು ಮೆಚ್ಚುವಂತಹದ್ದು. ಸ್ವಯಂ ಪ್ರೇರಣೆಯಿಂದ ಕನ್ನಡ ಹಬ್ಬ ಆಚರಿಸುವ ಆಟೊಚಾಲಕರ ಕನ್ನಡ ಪ್ರೇಮ ಶ್ಲಾಘನೀಯ ಎಂದು ಕಿವಿಮಾತು ಹೇಳಿದರು.</p>.<p>ಕಾರ್ಯಕ್ರಮ ಉದ್ಘಾಟಿಸಿದ ಪುರಸಭೆ ಮಾಜಿ ಅಧ್ಯಕ್ಷ ಎಂ.ಪಿ.ಸುದರ್ಶನ್, ಪರಸ್ಥಳಗಳಿಂದ ಬರುವ ಯಾತ್ರಿಗಳು ತಲುಪಬೇಕಾದ ಸ್ಥಳಗಳಿಗೆ ಸುರಕ್ಷಿತವಾಗಿ ಸೇರಿಸುವ ಆಟೊ ಚಾಲಕರು ತಮ್ಮ ವೃತ್ತಿ ಬದುಕಿನಲ್ಲಿ ಭಾಷಾಭಿಮಾನವನ್ನು ಮೆರೆಯುವುದರ ಜತೆಗೆ ತಮ್ಮ ಮನೆಯ ಹಬ್ಬದಂತೆ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿರುವ ಎಲ್ಲರಿಗೂ ಮಾದರಿ ಎಂದರು.</p>.<p>ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಸವಿತಾ ರಮೇಶ್ ಮಾತನಾಡಿ, ಇಂಗ್ಲೀಷ್ ವ್ಯಾಮೋಹ ಎಲ್ಲರಲ್ಲೂ ಹೆಚ್ಚಾಗಿ ಮಾತೃಭಾಷೆಯನ್ನು ಕಡೆಗಣಿಸುವ ವಾತಾವರಣದಲ್ಲಿ ನಾವಿದ್ದೇವೆ. ಆದರೆ ಇಂದಿಗೂ ನಾಡು, ನುಡಿ, ನೆಲ, ಜಲ ಸಂರಕ್ಷಣೆಯಲ್ಲಿ, ಕನ್ನಡ ಪರ ಹೋರಾಟಗಳಲ್ಲಿ ಆಟೊ ಚಾಲಕರು ಮುಂಚೂಣಿಯಲ್ಲಿದ್ದಾರೆ ಎಂದರು.</p>.<p>ಬೀರೂರು ಪಿಎಸ್ಐ ತಿಪ್ಪೇಶ್ ಮಾತನಾಡಿ, ಆಟೊ ಚಾಲಕರು ಪಟ್ಟಣಗಳ ನರನಾಡಿ ಇದ್ದಂತೆ. ಪರಸ್ಥಳಗಳಿಂದ ಬರುವ ಅಥವಾ ಹೋಗುವವರಿಗೆ ಸರಿಯಾದ ದಾರಿ ತೋರಿಸುವ ಆಟೋ ಚಾಲಕರು ಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮವನ್ನು ಪಾಲಿಸಬೇಕು. ವಾಹನಗಳ ವಿಮೆ, ಹೊಗೆ ತಪಾಸಣೆ, ಪರವಾನಗಿಗಳನ್ನು ಹೊಂದಬೇಕು ಹಾಗೂ ಸಮವಸ್ತ್ರ ಧರಿಸುವುದನ್ನು ಮರೆಯಬೇಡಿ ಎಂದು ಸಲಹೆ ನೀಡಿದರು.</p>.<p>ಕಾರ್ಯಕ್ರಮದಲ್ಲಿ ಆಟೊ ಚಾಲಕರು ಮತ್ತು ಮಾಲೀಕರ ಸಂಘದ ಗೌರವಾಧ್ಯಕ್ಷ ಬಿ.ಕೆ.ಶಶಿಧರ್, ಅಧ್ಯಕ್ಷ ಬಿ.ಎಲ್.ರವಿಕುಮಾರ್, ಕೆ.ಎಂ.ಜಯಪ್ರಕಾಶ್, ಮಾರ್ಗದ ಮಧು, ಅಪರಾಧ ವಿಭಾಗದ ಪಿಎಸ್ಐ ಗಣಪತಿ ಶೇರುಗಾರ್, ಹಾಗೂ ಆಟೋ ಸಂಘದ ಸಲಹೆಗಾರರಾದ ಮಾಲತೇಶ್, ಸೋಮಣ್ಣ ಮತ್ತು ಮಂಜುನಾಥ್, ಭರತ್, ವಿಲ್ಸನ್ ಹಾಜರಿದ್ದರು.</p>.<p>ಕಾರ್ಯಕ್ರಮದ ಬಳಿಕ ಆಟೊಗಳಿಗೆ ಕನ್ನಡದ ಬಾವುಟಗಳಿಂದ ಅಲಂಕರಿಸಿ, ಭುವನೇಶ್ವರಿ ಭಾವಚಿತ್ರ, ಬಸವಣ್ಣ, ಸಂಗೊಳ್ಳಿರಾಯಣ್ಣ, ಶಂಕರ್ ನಾಗ್, ಇಮ್ಮಡಿ ಪುಲಿಕೇಶಿ ಸೇರಿದಂತೆ ಕನ್ನಡ ಕವಿಗಳ ಭಾವಚಿತ್ರದೊಂದಿಗೆ ಪಟ್ಟಣದ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>