ಚಿತ್ರದುರ್ಗ: ತಮಿಳುನಾಡು ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ ಬಂದೋಬಸ್ತ್ಗೆ ಜಿಲ್ಲೆಯ 475 ಗೃಹರಕ್ಷಕದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಅಲ್ಲಿನ ಸರ್ಕಾರಿ ಬಸ್ಗಳಲ್ಲೇ ಶುಕ್ರವಾರ ಚಿತ್ರದುರ್ಗದಿಂದ ತೆರಳಿದರು.
‘ಜಿಲ್ಲೆಯ ಗೃಹರಕ್ಷಕದಳದ ಸಿಬ್ಬಂದಿ ಈ ಹಿಂದೆಯೂ ಹಲವು ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಇದೇ ಕಾರಣಕ್ಕಾಗಿ ಚುನಾವಣಾ ಆಯೋಗ ಹಾಗೂ ತಮಿಳುನಾಡು ಗೃಹ ಇಲಾಖೆ ಆದೇಶದ ಮೇರೆಗೆ ಬಂದೋಬಸ್ತ್ಗೆ ಕಳುಹಿಸಲಾಗಿದೆ’ ಎಂದು ಜಿಲ್ಲಾ ಗೃಹರಕ್ಷಕದಳದ ಕಮಾಂಡೆಂಟ್ ಸಿ.ಕೆ. ಸಂಧ್ಯಾ ತಿಳಿಸಿದ್ದಾರೆ.
ಗೃಹರಕ್ಷಕದಳದ ತಿಪ್ಪೇಸ್ವಾಮಿ, ಸುಧಾ, ವಸಂತ್, ಶಿವಣ್ಣ ಇದ್ದರು.