ಹಿರಿಯೂರು: ಕಂಪನಿಯೊಂದರ ಬಿಡಿಭಾಗಗಳನ್ನು ಅಂಗಡಿಗಳಿಗೆ ನೀಡಲು ರಸ್ತೆ ಬದಿ ನಿಂತಿದ್ದ ಕಂಪನಿ ವ್ಯವಸ್ಥಾಪಕನಿಗೆ ಲಾರಿ ಡಿಕ್ಕಿ ಹೊಡೆದು ಮೃತಪಟ್ಟಿರುವ ಘಟನೆ ಬುಧವಾರ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸ್ವಾಮಿಯಪ್ಪ ಹೋಟೆಲ್ ಸಮೀಪ ನಡೆದಿದೆ.
ಶಿವಮೊಗ್ಗ ತಾಲ್ಲೂಕಿನ ಹಾರೋಬೆನವಳ್ಳಿಯ ಮೇಘರಾಜ (29) ಮೃತ ವ್ಯಕ್ತಿ. ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಹಿರಿಯೂರಿನ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು, ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.