ತುಮಕೂರಿನ ಶಾಲೆಯೊಂದರಲ್ಲಿ ವಿಶ್ವನಾಥ್ ಕಾಟವ ಅವರ ಪುತ್ರ ದಿವ್ಯತ್ವ ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯಲ್ಲಿ ಗುರುವಾರ ಪಾಲಕರ ಸಭೆ ಕರೆದಿದ್ದ ಕಾರಣ ಸಹೋದರಿಯರಾದ ಪ್ರಿಯಾಂಕಾ, ಗಾಯತ್ರಿ ಜತೆ ಎಲ್ಲರೂ ತುಮಕೂರಿಗೆ ತೆರಳುತ್ತಿದ್ದರು. ಈ ವೇಳೆ ಚಿತ್ರದುರ್ಗದ ಗೋನೂರು ಸಮೀಪದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಇವರ ಕಾರಿಗೆ ಮತ್ತೊಂದು ಕಾರು ಡಿಕ್ಕಿಯಾಗಿದೆ.