<p><strong>ಪರಶುರಾಂಪುರ:</strong> ಚಳ್ಳಕೆರೆ ತಾಲ್ಲೂಕಿನಲ್ಲಿ ಬಹುತೇಕ ಹಳ್ಳಿಗಳಲ್ಲಿ ಶೇಂಗಾ ಕಟಾವು ಮಾಡಿದ್ದು, ಅದನ್ನು ಮನಗೆ ತರಲು ಎತ್ತಿನ ಗಾಡಿಯನ್ನು ಬಳಸುತ್ತಾರೆ. ರಾತ್ರಿ ವೇಳೆ ಎತ್ತಿನಗಾಡಿಗೆ ಬೆಳಕು ಇಲ್ಲದ ಕಾರಣ ಅಪಘಾತಗಳು ನಡೆಯುತ್ತವೆ. ಅವುಗಳನ್ನು ತಪ್ಪಿಸಲು ಪರಶುರಾಂಪುರ ಪೊಲೀಸ್ ಇಲಾಖೆ ವಿನೂತನ ಕಾರ್ಯಕ್ರಮ ಕೈಗೊಂಡಿದೆ.</p>.<p>ಕೃಷಿ ಚಟುವಟಿಕೆ ಮುಗಿಸಿ ರಾತ್ರಿ ಹೊತ್ತು ಹೋಗುವ ಎತ್ತಿನಗಾಡಿಗಳು ಮುಂದೆ ಹಾಗೂ ಹಿಂಬದಿಯಿಂದ ಬರುವ ವಾಹನಗಳಿಗೆ ಸುಲಭವಾಗಿ ಕಾಣುವಂತೆ ಕೆಂಪು ಬಣ್ಣದ ರೇಡಿಯಂ ಸ್ಟಿಕ್ಕರ್ ಅನ್ನು ಪೊಲೀಸರು ತಮ್ಮ ಸ್ವಂತ ಹಣದಲ್ಲಿ ಹಾಕುತ್ತಿದ್ದಾರೆ. ಪೊಲೀಸರ ಈ ಕ್ರಮ ರೈತರ ಮೆಚ್ಚುಗೆಗೆ ಪಾತ್ರವಾಗಿದೆ.</p>.<p>ರಾಜ್ಯದ ಗಡಿಯನ್ನು ಹೊಂದಿಕೊಂಡಿರುವ ಈ ಹೋಬಳಿಯು ಚಿತ್ರದುರ್ಗ, ತುಮಕೂರು, ಬಳ್ಳಾರಿ, ಅಂಧ್ರಪ್ರದೇಶದ ಅನಂತಪುರ, ಹಿಂದೂಪುರಕ್ಕೆ ಹೋಗುವ ವಾಹನಗಳು ಇಲ್ಲಿಂದಲೇ ಹೋಗಬೇಕು. ಹಾಗಾಗಿ ವಾಹನ ದಟ್ಟಣೆ ಹೆಚ್ಚು. ರೈತರು ಎಚ್ಚರಿಕೆಯಿಂದ ಇರಬೇಕು.ರೇಡಿಯಂ ಸ್ಟಿಕ್ಕರ್ ಹಾಕುವುದರಿಂದ ಎದುರಿನ ವಾಹನಗಳಿಗೆ ಎತ್ತಿನಗಾಡಿ ಇರುವುದು ತಿಳಿಯುತ್ತದೆ ಎನ್ನುತ್ತಾರೆ ಪಿಎಸ್ಐಚಂದ್ರಶೇಖರ್.</p>.<p>ಈಚೆಗೆ ಎತ್ತಿನಗಾಡಿ ಮತ್ತು ಲಾರಿ ಮಧ್ಯೆ ಗೌರಿಪುರದ ಬಳಿ ಅಪಘಾತವಾಗಿತ್ತು. ಇದರಿಂದ ಎಚ್ಚೆತ್ತ ಪೊಲೀಸ್ ಇಲಾಖೆ ರೈತರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಮೂಕ<br />ಪ್ರಾಣಿಗಳ ಜೀವ ಉಳಿಸಲು ಮುಂದಾಗಿದೆ. ಇದರಿಂದ ಎಲ್ಲರಿಗೂ ಅನುಕೂಲ ಎನ್ನುತ್ತಾರೆ ಪೊಲೀಸ್ ಸಿಬ್ಬಂದಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪರಶುರಾಂಪುರ:</strong> ಚಳ್ಳಕೆರೆ ತಾಲ್ಲೂಕಿನಲ್ಲಿ ಬಹುತೇಕ ಹಳ್ಳಿಗಳಲ್ಲಿ ಶೇಂಗಾ ಕಟಾವು ಮಾಡಿದ್ದು, ಅದನ್ನು ಮನಗೆ ತರಲು ಎತ್ತಿನ ಗಾಡಿಯನ್ನು ಬಳಸುತ್ತಾರೆ. ರಾತ್ರಿ ವೇಳೆ ಎತ್ತಿನಗಾಡಿಗೆ ಬೆಳಕು ಇಲ್ಲದ ಕಾರಣ ಅಪಘಾತಗಳು ನಡೆಯುತ್ತವೆ. ಅವುಗಳನ್ನು ತಪ್ಪಿಸಲು ಪರಶುರಾಂಪುರ ಪೊಲೀಸ್ ಇಲಾಖೆ ವಿನೂತನ ಕಾರ್ಯಕ್ರಮ ಕೈಗೊಂಡಿದೆ.</p>.<p>ಕೃಷಿ ಚಟುವಟಿಕೆ ಮುಗಿಸಿ ರಾತ್ರಿ ಹೊತ್ತು ಹೋಗುವ ಎತ್ತಿನಗಾಡಿಗಳು ಮುಂದೆ ಹಾಗೂ ಹಿಂಬದಿಯಿಂದ ಬರುವ ವಾಹನಗಳಿಗೆ ಸುಲಭವಾಗಿ ಕಾಣುವಂತೆ ಕೆಂಪು ಬಣ್ಣದ ರೇಡಿಯಂ ಸ್ಟಿಕ್ಕರ್ ಅನ್ನು ಪೊಲೀಸರು ತಮ್ಮ ಸ್ವಂತ ಹಣದಲ್ಲಿ ಹಾಕುತ್ತಿದ್ದಾರೆ. ಪೊಲೀಸರ ಈ ಕ್ರಮ ರೈತರ ಮೆಚ್ಚುಗೆಗೆ ಪಾತ್ರವಾಗಿದೆ.</p>.<p>ರಾಜ್ಯದ ಗಡಿಯನ್ನು ಹೊಂದಿಕೊಂಡಿರುವ ಈ ಹೋಬಳಿಯು ಚಿತ್ರದುರ್ಗ, ತುಮಕೂರು, ಬಳ್ಳಾರಿ, ಅಂಧ್ರಪ್ರದೇಶದ ಅನಂತಪುರ, ಹಿಂದೂಪುರಕ್ಕೆ ಹೋಗುವ ವಾಹನಗಳು ಇಲ್ಲಿಂದಲೇ ಹೋಗಬೇಕು. ಹಾಗಾಗಿ ವಾಹನ ದಟ್ಟಣೆ ಹೆಚ್ಚು. ರೈತರು ಎಚ್ಚರಿಕೆಯಿಂದ ಇರಬೇಕು.ರೇಡಿಯಂ ಸ್ಟಿಕ್ಕರ್ ಹಾಕುವುದರಿಂದ ಎದುರಿನ ವಾಹನಗಳಿಗೆ ಎತ್ತಿನಗಾಡಿ ಇರುವುದು ತಿಳಿಯುತ್ತದೆ ಎನ್ನುತ್ತಾರೆ ಪಿಎಸ್ಐಚಂದ್ರಶೇಖರ್.</p>.<p>ಈಚೆಗೆ ಎತ್ತಿನಗಾಡಿ ಮತ್ತು ಲಾರಿ ಮಧ್ಯೆ ಗೌರಿಪುರದ ಬಳಿ ಅಪಘಾತವಾಗಿತ್ತು. ಇದರಿಂದ ಎಚ್ಚೆತ್ತ ಪೊಲೀಸ್ ಇಲಾಖೆ ರೈತರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಮೂಕ<br />ಪ್ರಾಣಿಗಳ ಜೀವ ಉಳಿಸಲು ಮುಂದಾಗಿದೆ. ಇದರಿಂದ ಎಲ್ಲರಿಗೂ ಅನುಕೂಲ ಎನ್ನುತ್ತಾರೆ ಪೊಲೀಸ್ ಸಿಬ್ಬಂದಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>