<p><strong>ಚಿಕ್ಕಜಾಜೂರು</strong>: ಆಗಾಗ ಬೀಳುತ್ತಿರುವ ಮಳೆಯಿಂದಾಗಿ ರಾಗಿ ಪೈರಿಗೆ ಜೀವ ಕಳೆ ಬಂದಂತಾಗಿದೆ. </p>.<p>ವಾರಕ್ಕೊಮ್ಮೆ ಹದ ಮಳೆಯಾಗುತ್ತಿದ್ದು, ಬಾಡುತ್ತಿದ್ದ ರಾಗಿ ಪೈರುಗಳಿಗೆ ಜೀವ ಬಂದಂತಾಗಿದೆ. ಶನಿವಾರ ಹಾಗೂ ಭಾನುವಾರ ರಾತ್ರಿ ಮತ್ತೆ ಮಳೆಯಾಗಿರುವುದು ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. </p>.<p>ಚಿಕ್ಕಜಾಜೂರು ಸೇರಿದಂತೆ ಸಮೀಪದ ಚಿಕ್ಕಂದವಾಡಿ, ಅರಸನಘಟ್ಟ, ಹನುಮನಕಟ್ಟೆ ಮೊದಲಾದ ಕಡೆಗಳಲ್ಲಿ ಮಳೆಯಾಗಿದ್ದು, ಜಮೀನು ಹಾಗೂ ರಸ್ತೆಗಳಲ್ಲಿ ನೀರು ನಿಂತಿದೆ.</p>.<p>ಹೋಬಳಿಯ ಕೆಲವು ರೈತರು ಮೇ ತಿಂಗಳಿನಲ್ಲಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳವನ್ನು ಕೊಯ್ಲು ಮಾಡಿದ್ದರು. ಕಳೆದ ಬುಧವಾರ ಹದ ಮಳೆಯಾಗಿದ್ದರಿಂದ ಕೆಲವು ಕಡೆಗಳಲ್ಲಿ ಕೆರೆಗಳಿಗೆ ನೀರು ಹರಿದು ಬಂದಿತ್ತು.</p>
<p><strong>ಚಿಕ್ಕಜಾಜೂರು</strong>: ಆಗಾಗ ಬೀಳುತ್ತಿರುವ ಮಳೆಯಿಂದಾಗಿ ರಾಗಿ ಪೈರಿಗೆ ಜೀವ ಕಳೆ ಬಂದಂತಾಗಿದೆ. </p>.<p>ವಾರಕ್ಕೊಮ್ಮೆ ಹದ ಮಳೆಯಾಗುತ್ತಿದ್ದು, ಬಾಡುತ್ತಿದ್ದ ರಾಗಿ ಪೈರುಗಳಿಗೆ ಜೀವ ಬಂದಂತಾಗಿದೆ. ಶನಿವಾರ ಹಾಗೂ ಭಾನುವಾರ ರಾತ್ರಿ ಮತ್ತೆ ಮಳೆಯಾಗಿರುವುದು ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. </p>.<p>ಚಿಕ್ಕಜಾಜೂರು ಸೇರಿದಂತೆ ಸಮೀಪದ ಚಿಕ್ಕಂದವಾಡಿ, ಅರಸನಘಟ್ಟ, ಹನುಮನಕಟ್ಟೆ ಮೊದಲಾದ ಕಡೆಗಳಲ್ಲಿ ಮಳೆಯಾಗಿದ್ದು, ಜಮೀನು ಹಾಗೂ ರಸ್ತೆಗಳಲ್ಲಿ ನೀರು ನಿಂತಿದೆ.</p>.<p>ಹೋಬಳಿಯ ಕೆಲವು ರೈತರು ಮೇ ತಿಂಗಳಿನಲ್ಲಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳವನ್ನು ಕೊಯ್ಲು ಮಾಡಿದ್ದರು. ಕಳೆದ ಬುಧವಾರ ಹದ ಮಳೆಯಾಗಿದ್ದರಿಂದ ಕೆಲವು ಕಡೆಗಳಲ್ಲಿ ಕೆರೆಗಳಿಗೆ ನೀರು ಹರಿದು ಬಂದಿತ್ತು.</p>