ಚಳ್ಳಕೆರೆ: ಇಲ್ಲಿನ ಬಳ್ಳಾರಿ ರಸ್ತೆ ಬಳಿಯ ಕರೆಕಲ್ಕೆರೆಯಲ್ಲಿ ಶನಿವಾರ ಈಜಲು ಹೋದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಬಾಲಕ ಭವಾನಿ ಶಂಕರ್ (13) ಮೃತಪಟ್ಟ ಬಾಲಕ.ತಾತ ಹಾಗೂ ತಮ್ಮನ ಜತೆಯಲ್ಲಿ ಈಜಾಡಲು ಕೆರೆಗೆ ತೆರಳಿದ್ದ ಭವಾನಿ ಶಂಕರ್, ಕಾಲು ಜಾರಿ ಕೆರೆಗೆ ಬಿದ್ದಿದ್ದಾನೆ.
ಶಾಸಕ ಟಿ. ರಘುಮೂರ್ತಿ, ತಹಶೀಲ್ದಾರ್ ಎಂ. ಮಲ್ಲಿಕಾರ್ಜುನ, ಬಿಇಒ ಕೆ.ಎಸ್. ಸುರೇಶ್ ಆಸ್ಪತ್ರೆಗೆ ತೆರಳಿ ಬಾಲಕನ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಮಕ್ಕಳ ಮತ್ತು ಶಿಕ್ಷಕರ ಕಲ್ಯಾಣ ನಿಧಿಯಿಂದ ₹ 50 ಸಾವಿರ ಪರಿಹಾರ ಕೊಡಿಸುದಾಗಿ ಬಿಇಒ ಕೆ.ಎ. ಸುರೇಶ್ ಭರವಸೆ ನೀಡಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ವೀರೇಶ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶಗೌಡ ಇದ್ದರು.