<p><strong>ಚಳ್ಳಕೆರೆ</strong>: ‘ಸ್ಥಳೀಯ ಇತಿಹಾಸ ಪರಂಪರೆ ಮತ್ತು ಸ್ಮಾರಕಗಳ ಮಾಹಿತಿಯನ್ನು ಮಕ್ಕಳಿಗೆ ತಪ್ಪದೇ ತಿಳಿಸಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಶಿಕ್ಷಕರಿಗೆ ಸಲಹೆ ನೀಡಿದರು.</p>.<p>ನಗರದ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಚಿತ್ರದುರ್ಗ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶುಕ್ರವಾರ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರಾಚ್ಯಪ್ರಜ್ಞೆ ಮತ್ತು ವಿವಿಧ ಸ್ಪರ್ಧೆಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ನಾಡಿನ ನೈಜ ಚರಿತ್ರೆ ನಿರೂಪಿಸುವ ಆಯಾ ಗ್ರಾಮದ ಐತಿಹಾಸಿಕ ದೇವಸ್ಥಾನದ ಮೂರ್ತಿ ಶಿಲ್ಪಗಳು, ಶಾಸನ, ವೀರಗಲ್ಲು, ಮಾಸ್ತಿಕಲ್ಲು, ಕೋಟೆ-ಕೊತ್ತಲು ದುರಸ್ತಿ ಜತೆಗೆ ಅವುಗಳ ಸುರಕ್ಷತೆಗೆ ಗ್ರಾಮ ಆಡಳಿತ ಮುಂದಾಗಬೇಕು. ಪ್ರಾಚ್ಯವಸ್ತು ಸಂಗ್ರಹದ ಬಗ್ಗೆ ಪ್ರತಿಯೊಬ್ಬ ಮಕ್ಕಳಲ್ಲಿಯೂ ಅರಿವು ಮೂಡಿಸಬೇಕು’ ಎಂದು ಹೇಳಿದರು.</p>.<p>‘ಸರ್ಕಾರದ ಯೋಜನೆಗಳ ಅನುದಾನದಲ್ಲಿ ಇಂತಿಷ್ಟು ಹಣ ಸ್ಮಾರಕ ರಕ್ಷಣೆಗೆ ಮೀಸಲಿರಿಸಬೇಕು. ರಾಜರ ಸಾಧನೆ ಮತ್ತು ಯುದ್ಧದ ಬಗೆಗಿನ ಮಾಹಿತಿಗಿಂತ ಜನಸಾಮಾನ್ಯರ ಬದುಕಿನ ಚರಿತ್ರೆ ಕಡೆಗೆ ಹೆಚ್ಚಿನ ಗಮನಹರಿಸಬೇಕು’ ಎಂದು ಸಹ ಶಿಕ್ಷಕಿ ರೂಪಾ ಹೇಳಿದರು.</p>.<p>ಶಿಕ್ಷಕರಾದ ಶಿವಮೂರ್ತಿ, ಪಾವನಾ ಮಾತನಾಡಿದರು.</p>.<p>ಚಿತ್ರಕಲೆ, ರಸಪ್ರಶ್ನೆ, ಪ್ರಬಂಧ ಹಾಗೂ ಭಾಷಣ ಸ್ಪರ್ಧೆ ನಡೆಸಲಾಯಿತು.</p>.<p>ಮುಖ್ಯಶಿಕ್ಷಕ ಡಿ.ಎಸ್.ಪಾಲಯ್ಯ, ಶಿಕ್ಷಣ ಸಂಯೋಜಕ ರವಿಶಂಕರ್, ಮಾರುತಿ ಭಂಡಾರಿ, ದಾಪಪೀರ್, ಶಿವಣ್ಣ, ಈಶ್ವರಪ್ಪ, ಜಗದೀಶ್, ಸವಿತಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಳ್ಳಕೆರೆ</strong>: ‘ಸ್ಥಳೀಯ ಇತಿಹಾಸ ಪರಂಪರೆ ಮತ್ತು ಸ್ಮಾರಕಗಳ ಮಾಹಿತಿಯನ್ನು ಮಕ್ಕಳಿಗೆ ತಪ್ಪದೇ ತಿಳಿಸಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಶಿಕ್ಷಕರಿಗೆ ಸಲಹೆ ನೀಡಿದರು.</p>.<p>ನಗರದ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಚಿತ್ರದುರ್ಗ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶುಕ್ರವಾರ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರಾಚ್ಯಪ್ರಜ್ಞೆ ಮತ್ತು ವಿವಿಧ ಸ್ಪರ್ಧೆಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ನಾಡಿನ ನೈಜ ಚರಿತ್ರೆ ನಿರೂಪಿಸುವ ಆಯಾ ಗ್ರಾಮದ ಐತಿಹಾಸಿಕ ದೇವಸ್ಥಾನದ ಮೂರ್ತಿ ಶಿಲ್ಪಗಳು, ಶಾಸನ, ವೀರಗಲ್ಲು, ಮಾಸ್ತಿಕಲ್ಲು, ಕೋಟೆ-ಕೊತ್ತಲು ದುರಸ್ತಿ ಜತೆಗೆ ಅವುಗಳ ಸುರಕ್ಷತೆಗೆ ಗ್ರಾಮ ಆಡಳಿತ ಮುಂದಾಗಬೇಕು. ಪ್ರಾಚ್ಯವಸ್ತು ಸಂಗ್ರಹದ ಬಗ್ಗೆ ಪ್ರತಿಯೊಬ್ಬ ಮಕ್ಕಳಲ್ಲಿಯೂ ಅರಿವು ಮೂಡಿಸಬೇಕು’ ಎಂದು ಹೇಳಿದರು.</p>.<p>‘ಸರ್ಕಾರದ ಯೋಜನೆಗಳ ಅನುದಾನದಲ್ಲಿ ಇಂತಿಷ್ಟು ಹಣ ಸ್ಮಾರಕ ರಕ್ಷಣೆಗೆ ಮೀಸಲಿರಿಸಬೇಕು. ರಾಜರ ಸಾಧನೆ ಮತ್ತು ಯುದ್ಧದ ಬಗೆಗಿನ ಮಾಹಿತಿಗಿಂತ ಜನಸಾಮಾನ್ಯರ ಬದುಕಿನ ಚರಿತ್ರೆ ಕಡೆಗೆ ಹೆಚ್ಚಿನ ಗಮನಹರಿಸಬೇಕು’ ಎಂದು ಸಹ ಶಿಕ್ಷಕಿ ರೂಪಾ ಹೇಳಿದರು.</p>.<p>ಶಿಕ್ಷಕರಾದ ಶಿವಮೂರ್ತಿ, ಪಾವನಾ ಮಾತನಾಡಿದರು.</p>.<p>ಚಿತ್ರಕಲೆ, ರಸಪ್ರಶ್ನೆ, ಪ್ರಬಂಧ ಹಾಗೂ ಭಾಷಣ ಸ್ಪರ್ಧೆ ನಡೆಸಲಾಯಿತು.</p>.<p>ಮುಖ್ಯಶಿಕ್ಷಕ ಡಿ.ಎಸ್.ಪಾಲಯ್ಯ, ಶಿಕ್ಷಣ ಸಂಯೋಜಕ ರವಿಶಂಕರ್, ಮಾರುತಿ ಭಂಡಾರಿ, ದಾಪಪೀರ್, ಶಿವಣ್ಣ, ಈಶ್ವರಪ್ಪ, ಜಗದೀಶ್, ಸವಿತಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>