‘ಘಟನೆ ಬೆಳಕಿಗೆ ಬಂದಾಗ ದೇಹ ಸಂಪೂರ್ಣ ಕೊಳೆತು ಅಸ್ಥಿಪಂಜರಗಳು ಮಾತ್ರ ಲಭ್ಯವಾಗಿದ್ದವು. ಲೋಕೋಪಯೋಗಿ ಇಲಾಖೆಯ ನಿವೃತ್ತ ಎಂಜಿನಿಯರ್ ಎನ್.ಕೆ. ಜಗನ್ನಾಥ ರೆಡ್ಡಿ, ಪತ್ನಿ ಪ್ರೇಮಲೀಲಾ, ಪುತ್ರಿ ಎನ್.ಜೆ.ತ್ರಿವೇಣಿ, ಪುತ್ರರಾದ ಎನ್.ಜೆ.ಕೃಷ್ಣ, ಎನ್.ಜೆ.ನರೇಂದ್ರ ಅವರು 2019ರ ಫೆಬ್ರುವರಿ ಕೊನೆ ಇಲ್ಲವೇ ಮಾರ್ಚ್ ಆರಂಭದಲ್ಲಿ ಮೃತಪಟ್ಟಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ’ ಎಂದು ವಿವರಿಸಿದರು.