‘ಚಿತ್ರದುರ್ಗ, ಗದಗ, ಮೈಸೂರು ಸೇರಿ ರಾಜ್ಯದ ಹಲವೆಡೆ ಕಳಪೆ ಗುಣಮಟ್ಟದ ರಸಗೊಬ್ಬರ ಮಾರಾಟವಾಗಿರುವುದು ಗಮನಕ್ಕೆ ಬಂದಿದೆ. ತಮಿಳುನಾಡಿನ ಸೇಲಂ ಜಿಲ್ಲೆಯ ‘ವೆಂಕಟೇಶ್ವರ ಫರ್ಟಿಲೈಜರ್ಸ್’ನಿಂದ ಈ ಗೊಬ್ಬರ ಪೂರೈಕೆ ಆಗಿರುವುದು ಗೊತ್ತಾಗಿದೆ. ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅಂತರರಾಜ್ಯ ಪೊಲೀಸರ ನೆರವು ಪಡೆಯುವ ಅಗತ್ಯ ಇರುವುದರಿಂದ ತನಿಖೆಯ ಹೊಣೆಯನ್ನು ಸಿಐಡಿ ನೀಡುವುದು ಸೂಕ್ತ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.