‘ತಾಲ್ಲೂಕಿನ ಪಟ್ರೆಹಳ್ಳಿ, ಪಿಟ್ಲಾಲಿ, ನಂದಿಹಳ್ಳಿ, ರಂಗನಾಥಪುರ, ಆರನಕಟ್ಟೆ, ದೊಡ್ಡಕಟ್ಟೆ, ಕಸವನಹಳ್ಳಿ, ಆಲೂರು, ಹೊಸಯಳನಾಡು ಸೇರಿ ಅಚ್ಚುಕಟ್ಟು ಪ್ರದೇಶದಲ್ಲಿನ ಬಹುತೇಕ ತೋಟಗಳು ಒಣಗಿ ಹೋಗಿದ್ದವು. ನಮ್ಮ ತೋಟದಲ್ಲಿ ನೀರಿಲ್ಲದೆ ಒಣಗಿ ನಿಂತಿರುವ ತೆಂಗಿನ ಮರಗಳನ್ನು ನಿತ್ಯ ಕಂಡಾಗ ಕಣ್ಣುಗಳು ತೇವಗೊಳ್ಳುತ್ತಿದ್ದವು. ಮರಗಳನ್ನು ಕತ್ತರಿಸಿ ಸಾಗಿಸುವಷ್ಟು ಆರ್ಥಿಕ ಶಕ್ತಿ ಬಹಳಷ್ಟು ರೈತರಲ್ಲಿಲ್ಲ. ಹೀಗಾಗಿ ತಮಿಳುನಾಡು ಕಡೆಯವರು ಲಾರಿಯಲ್ಲಿ ಬಂದು ಅವರೇ ಕತ್ತರಿಸಿ ಒಯ್ಯುತ್ತಿದ್ದಾರೆ’ ಎನ್ನುತ್ತಾರೆ ಪಿಟ್ಲಾಲಿ ಗ್ರಾಮದ ರೈತ ರವಿ.