ಮೊದಲೇ ಮೊಳಕಾಲ್ಮುರು ಬಿರುಬಿಸಿಲಿಗೆ ಹೆಸರು ವಾಸಿಯಾಗಿದೆ. ನೆರಳಿನ ವ್ಯವಸ್ಥೆ ಇಲ್ಲದ ಕಾರಣ ತಂದಿರುವ ತರಕಾರಿ, ಸೊಪ್ಪು, ಹಣ್ಣುಗಳು ಗ್ರಾಹಕರು ಬರುವ ಮುನ್ನವೇ ಬಾಡಿಹೋಗುತ್ತಿದೆ. ಇದರಿಂದ ಗ್ರಾಹಕರು ಕೊಳ್ಳದೇ ವಾಪಸ್ ಹೋಗುತ್ತಾರೆ. ನೂತನ ಸಂತೆ ಮೈದಾನ ಪಟ್ಟಣದಿಂದ ದೂರ ಇರುವುದರಿಂದ, ಮೊದಲಿಗೆ ಹೋಲಿಕೆ ಮಾಡಿದರೆ ಗ್ರಾಹಕರು ಬರುವುದೂ ತಡವಾಗುತ್ತಿದೆ. ತಂದಿರುವ ತರಕಾರಿ ಒಣಗಿ, ಖರ್ಚಾಗದೇ ಉಳಿದು ನಷ್ಟವಾಗುತ್ತಿದೆ ಎಂದು ವ್ಯಾಪಾರಿಗಳಾದ ಕೊಟ್ರಮ್ಮ, ಮಹಮದ್ ಆಲಿ ದೂರಿದರು.