<p><strong>ಚಿತ್ರದುರ್ಗ: </strong>ತಾಲ್ಲೂಕು ವ್ಯಾಪ್ತಿಯಲ್ಲಿ ಅನೇಕ ರೈತರು ಬೆಳೆದಿದ್ದ ಹೂವುಗಳು ಒಣಗಿ ಹೋಗುವ ಸಾಧ್ಯತೆ ದಟ್ಟವಾಗಿದೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸಂತೆ, ಮಾರುಕಟ್ಟೆ ರದ್ದಾಗಿರುವ ಕಾರಣ ಪುಷ್ಪೋದ್ಯಮವೂ ತಲ್ಲಣಗೊಂಡಿದ್ದು, ಈ ಬಾರಿ ಹೂ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ.</p>.<p>ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಜಾತ್ರೆಗಳು ಹೆಚ್ಚು. ಈ ವೇಳೆ ಹೂವಿನ ದರವೂ ಅಧಿಕ. ಲಾಭದ ದೃಷ್ಟಿಯಿಂದ ಪುಷ್ಪೋದ್ಯಮ ಚಟುವಟಿಕೆಯಲ್ಲಿ ಪ್ರತಿ ವರ್ಷ ನಿರತರಾದ ಅನೇಕ ಹೂ ಬೆಳೆಗಾರರು ಮುಂಚಿತವಾಗಿಯೇ ಹೂವುಗಳನ್ನು ಬೆಳೆಯಲು ಮುಂದಾದರು. ಜಾತ್ರೆಗಳೆಲ್ಲವೂ ಕೊರೊನಾದಿಂದಾಗಿ ರದ್ದಾಗಿರುವ ಕಾರಣ ದಿಕ್ಕೇ ತೋಚದ ಪರಿಸ್ಥಿತಿಯಲ್ಲಿದ್ದಾರೆ.</p>.<p>ಮದುವೆ, ಗೃಹ ಪ್ರವೇಶ ಸರಳವಾಗಿ ಆಚರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೂಚನೆ ನೀಡಿದ ಕಾರಣ ಕೆಲ ದಿನಗಳಿಂದ ಹೂವಿನ ಅಲಂಕಾರಕ್ಕಾಗಿ ದುಂದು ವೆಚ್ಚ ಮಾಡುವುದು ಬೇಡ ಎಂಬುದಾಗಿ ಕೆಲವರು ನಿರ್ಧರಿಸುತ್ತಿದ್ದಾರೆ. ಇದರಿಂದಾಗಿ ಪುಷ್ಪಗಳಿಗೂ ಬೇಡಿಕೆ ಕಡಿಮೆಯಾಗಿದೆ.</p>.<p>ಸದಾ ಅಲಂಕಾರದಿಂದಲೇ ಕಂಗೊಳಿಸುತ್ತಿದ್ದ ದೇವರ ವಿಗ್ರಹಗಳಿಗೂ ಸರಳವಾಗಿ ಅಲಂಕರಿಸಿ ಅರ್ಚಕರು ಪೂಜೆ ಸಲ್ಲಿಸುತ್ತಿದ್ದಾರೆ. ಜತೆಗೆ ಭಕ್ತರಿಗೆ ದೇಗುಲ ಪ್ರವೇಶಾತಿ ಸಂಪೂರ್ಣ ನಿರ್ಬಂಧಿಸಲಾಗಿದೆ. ಇದೇ ಕಾರಣಕ್ಕಾಗಿ ಬಹುತೇಕ ದೇಗುಲಗಳು ಕೂಡ ಮುಚ್ಚಲ್ಪಟ್ಟಿರುವ ಕಾರಣ ಎಲ್ಲಿಯೂ ವಿಶೇಷ ಅಲಂಕಾರ ಕೂಡ ನಡೆಯುತ್ತಿಲ್ಲ.</p>.<p>ಇನ್ನೂ ಮನೆಗಳಲ್ಲಿ ಪೂಜೆ ನೆರವೇರಿಸಲು ಅನೇಕರು ಪುಷ್ಪ ಖರೀದಿಗೆ ಮೊದಲಿನಂತೆ ಉತ್ಸಾಹ ತೋರುತ್ತಿಲ್ಲ. ಮನೆಗಳ ಮುಂಭಾಗದಲ್ಲಿಯೇ ಸಿಗುವ ಹೂಗಳನ್ನೇ ಸಮರ್ಪಿಸುತ್ತಿದ್ದಾರೆ. ಮನೆ ಮನೆಗೆ ಹೋಗಿ ಹೂ ಮಾರುವವರ ಸಂಖ್ಯೆಯೂ ಎರಡು ದಿನದಿಂದ ಕಡಿಮೆಯಾಗಿದೆ.</p>.<p>ಕೊರೊನಾ ವೈರಸ್ ಭೀತಿಯಿಂದಾಗಿ ತಾಲ್ಲೂಕಿನ ಕೆಲ ಹೂ ಬೆಳೆಗಾರರು ಪುಷ್ಪಗಳನ್ನು ಕೀಳಿಸದೇ ತೋಟದಲ್ಲಿ ಹಾಗೆಯೇ ಬಿಟ್ಟಿದ್ದಾರೆ. ಇದು ಪುಷ್ಪೋದ್ಯಮದ ಮೇಲೂ ಪೆಟ್ಟು ಕೊಡುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ: </strong>ತಾಲ್ಲೂಕು ವ್ಯಾಪ್ತಿಯಲ್ಲಿ ಅನೇಕ ರೈತರು ಬೆಳೆದಿದ್ದ ಹೂವುಗಳು ಒಣಗಿ ಹೋಗುವ ಸಾಧ್ಯತೆ ದಟ್ಟವಾಗಿದೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸಂತೆ, ಮಾರುಕಟ್ಟೆ ರದ್ದಾಗಿರುವ ಕಾರಣ ಪುಷ್ಪೋದ್ಯಮವೂ ತಲ್ಲಣಗೊಂಡಿದ್ದು, ಈ ಬಾರಿ ಹೂ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ.</p>.<p>ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಜಾತ್ರೆಗಳು ಹೆಚ್ಚು. ಈ ವೇಳೆ ಹೂವಿನ ದರವೂ ಅಧಿಕ. ಲಾಭದ ದೃಷ್ಟಿಯಿಂದ ಪುಷ್ಪೋದ್ಯಮ ಚಟುವಟಿಕೆಯಲ್ಲಿ ಪ್ರತಿ ವರ್ಷ ನಿರತರಾದ ಅನೇಕ ಹೂ ಬೆಳೆಗಾರರು ಮುಂಚಿತವಾಗಿಯೇ ಹೂವುಗಳನ್ನು ಬೆಳೆಯಲು ಮುಂದಾದರು. ಜಾತ್ರೆಗಳೆಲ್ಲವೂ ಕೊರೊನಾದಿಂದಾಗಿ ರದ್ದಾಗಿರುವ ಕಾರಣ ದಿಕ್ಕೇ ತೋಚದ ಪರಿಸ್ಥಿತಿಯಲ್ಲಿದ್ದಾರೆ.</p>.<p>ಮದುವೆ, ಗೃಹ ಪ್ರವೇಶ ಸರಳವಾಗಿ ಆಚರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೂಚನೆ ನೀಡಿದ ಕಾರಣ ಕೆಲ ದಿನಗಳಿಂದ ಹೂವಿನ ಅಲಂಕಾರಕ್ಕಾಗಿ ದುಂದು ವೆಚ್ಚ ಮಾಡುವುದು ಬೇಡ ಎಂಬುದಾಗಿ ಕೆಲವರು ನಿರ್ಧರಿಸುತ್ತಿದ್ದಾರೆ. ಇದರಿಂದಾಗಿ ಪುಷ್ಪಗಳಿಗೂ ಬೇಡಿಕೆ ಕಡಿಮೆಯಾಗಿದೆ.</p>.<p>ಸದಾ ಅಲಂಕಾರದಿಂದಲೇ ಕಂಗೊಳಿಸುತ್ತಿದ್ದ ದೇವರ ವಿಗ್ರಹಗಳಿಗೂ ಸರಳವಾಗಿ ಅಲಂಕರಿಸಿ ಅರ್ಚಕರು ಪೂಜೆ ಸಲ್ಲಿಸುತ್ತಿದ್ದಾರೆ. ಜತೆಗೆ ಭಕ್ತರಿಗೆ ದೇಗುಲ ಪ್ರವೇಶಾತಿ ಸಂಪೂರ್ಣ ನಿರ್ಬಂಧಿಸಲಾಗಿದೆ. ಇದೇ ಕಾರಣಕ್ಕಾಗಿ ಬಹುತೇಕ ದೇಗುಲಗಳು ಕೂಡ ಮುಚ್ಚಲ್ಪಟ್ಟಿರುವ ಕಾರಣ ಎಲ್ಲಿಯೂ ವಿಶೇಷ ಅಲಂಕಾರ ಕೂಡ ನಡೆಯುತ್ತಿಲ್ಲ.</p>.<p>ಇನ್ನೂ ಮನೆಗಳಲ್ಲಿ ಪೂಜೆ ನೆರವೇರಿಸಲು ಅನೇಕರು ಪುಷ್ಪ ಖರೀದಿಗೆ ಮೊದಲಿನಂತೆ ಉತ್ಸಾಹ ತೋರುತ್ತಿಲ್ಲ. ಮನೆಗಳ ಮುಂಭಾಗದಲ್ಲಿಯೇ ಸಿಗುವ ಹೂಗಳನ್ನೇ ಸಮರ್ಪಿಸುತ್ತಿದ್ದಾರೆ. ಮನೆ ಮನೆಗೆ ಹೋಗಿ ಹೂ ಮಾರುವವರ ಸಂಖ್ಯೆಯೂ ಎರಡು ದಿನದಿಂದ ಕಡಿಮೆಯಾಗಿದೆ.</p>.<p>ಕೊರೊನಾ ವೈರಸ್ ಭೀತಿಯಿಂದಾಗಿ ತಾಲ್ಲೂಕಿನ ಕೆಲ ಹೂ ಬೆಳೆಗಾರರು ಪುಷ್ಪಗಳನ್ನು ಕೀಳಿಸದೇ ತೋಟದಲ್ಲಿ ಹಾಗೆಯೇ ಬಿಟ್ಟಿದ್ದಾರೆ. ಇದು ಪುಷ್ಪೋದ್ಯಮದ ಮೇಲೂ ಪೆಟ್ಟು ಕೊಡುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>