‘ಕೂನಿಕೆರೆ ಗ್ರಾಮದ ಸಮೀಪ ನಮ್ಮ ತಂದೆಯವರ ಐದು ಎಕರೆ ಜಮೀನಿದ್ದು, ಅಲ್ಲಿಯೇ ವಾಸವಾಗಿದ್ದೇವೆ. ಹೊಲದಲ್ಲಿ ಒಂದು ಎಕರೆ ಈರುಳ್ಳಿ, ಒಂದು ಎಕರೆ ಶೇಂಗಾ, ಮೂರು ಎಕರೆ ತೊಗರಿ ಹಾಕಿದ್ದೇವೆ. ಆಸ್ಪತ್ರೆಗೆ ದಾಖಲಾಗುವ ಮೊದಲು ಎರಡು ಬಾರಿ ಈರುಳ್ಳಿ ಕಳೆ ಕೀಳಿಸಿದ್ದೆ. ಈಗ ಮೂರನೇ ಬಾರಿ ಕಳೆ ತೆಗೆಸಬೇಕು. ನಮ್ಮ ಹೊಲದ ಪಕ್ಕದ ರೈತರ ಜಮೀನಿಗೆ ಕೂಲಿಯವರು ಬರುತ್ತಿದ್ದಾರೆ. ಆದರೆ, ನನ್ನ ಅಪ್ಪ–ಅಮ್ಮ ಕರೆದರೆ ಬರುತ್ತಿಲ್ಲ. ಊರಿನಲ್ಲಿ ನಮ್ಮನ್ನು ಅಸ್ಪೃಶ್ಯರಂತೆ ನೋಡುತ್ತಿದ್ದಾರೆ. ಕೊರೊನಾ ನನಗೆ ಹೇಗೆ ಬಂತು ಎಂಬುದು ತಿಳಿದಿಲ್ಲ. ನಾನು ಜಮೀನು–ಮನೆ ಬಿಟ್ಟು ಎಲ್ಲಿಯೂ ಹೋಗಿಲ್ಲ. ನನ್ನದಲ್ಲದ ತಪ್ಪಿಗೆ ಇಡೀ ಮನೆಯವರು ಶಿಕ್ಷೆ ಅನುಭವಿಸುವಂತಾಗಿದೆ’
ಎಂದು ಜಾಕೀರ್ ಅಲವತ್ತುಕೊಂಡರು.