ತಾಲ್ಲೂಕಿನ ಲಕ್ಕಿಹಳ್ಳಿ ಗ್ರಾಮದ ನಿವಾಸಿ ಮುದ್ದಪ್ಪ ಅವರು ತಮ್ಮ ಮಾವ ರುದ್ರಪ್ಪ ಅವರ ಜಮೀನಿಗೆ ಬಂದಿದ್ದ ₹ 19.97 ಲಕ್ಷದಲ್ಲಿ ₹ 10 ಲಕ್ಷವನ್ನು ಕರ್ನಾಟಕ ಬ್ಯಾಂಕಿನಿಂದ ಬಿಡಿಸಿಕೊಂಡು ಕಾರಿನಲ್ಲಿ ಇಟ್ಟು ಕಾರು ಲಾಕ್ ಮಾಡಿಕೊಂಡು ವಿಜಯ ಬ್ಯಾಂಕ್ ಒಳಗಡೆ ಹೋಗಿದ್ದರು. 15 ನಿಮಿಷದ ಬಳಿಕ ಬಂದು ನೋಡಿದಾಗ ಯಾರೋ ಕಳ್ಳರು ಕಾರಿನ ಗಾಜನ್ನು ಒಡೆದು ಅದರಲ್ಲಿದ್ದ ₹ 10 ಲಕ್ಷವನ್ನು ಬ್ಯಾಗ್ ಸಮೇತ ಕದ್ದಿರುವುದು ಗೊತ್ತಾಗಿದೆ.