<p><strong>ಚಳ್ಳಕೆರೆ:</strong> ಮಲ್ಚಿಂಗ್ ಪೇಪರ್ ಹೊದಿಕೆ ವಿಧಾನದ ಮೂಲಕ ಬಯಲು ಸೀಮೆ ಪ್ರದೇಶದಲ್ಲಿ ಬೆಳೆಯುವ ಕಲ್ಲಂಗಡಿ ಹಣ್ಣಿಗೆದೆಹಲಿ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ.</p>.<p>ಗಾತ್ರ, ಬಣ್ಣ ಮತ್ತು ಗುಣಮಟ್ಟದ ಜತೆಗೆ ಉತ್ತಮ ರುಚಿ ನೀಡುವ ಕಾರಣ ಇಲ್ಲಿನ ಹಣ್ಣಿಗೆ ಹೊರರಾಜ್ಯಗಳಲ್ಲಿ<br />ಬೇಡಿಕೆ ಹೆಚ್ಚು. ಕಲ್ಲಂಗಡಿ ಸದ್ಯ ಹೊರರಾಜ್ಯಗಳಿಗೆ ಹೋಗುತ್ತಿದ್ದು, ರೈತರು ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾರೆ.</p>.<p>ಕೋವಿಡ್ ಸಂದರ್ಭದಲ್ಲಿ ಭಾರಿ ನಷ್ಟ ಅನುಭವಿಸಿದ್ದ ಕುಂಬಳ, ಕರಬೂಜ, ದಾಳಿಂಬೆ, ಮೋಸುಂಬಿ ಹಣ್ಣಿನ ಬೆಳೆಗಾರರು ಈ ಬಾರಿ ಕಿರಣ್ ತಳಿಯ ಕಲ್ಲಂಗಡಿಯನ್ನು ಬೆಳೆದಿದ್ದಾರೆ.ಕೊಳವೆಬಾವಿಯಲ್ಲಿ ಲಭ್ಯವಾದ ನೀರಿಗೆ ಡ್ರಿಪ್ ಅಳವಡಿಸಿಕೊಂಡು ಮಲ್ಚಿಂಗ್ ಪೇಪರ್ ಹೊದಿಕೆ ವಿಧಾನದ ಮೂಲಕ ಬೆಳೆದ ಕಿರಣ್ ತಳಿಯ ಕಲ್ಲಂಗಡಿ ಬೆಳೆ ಉತ್ತಮ ಇಳುವರಿ ಬಂದಿದೆ. ಒಂದು ಹಣ್ಣು 7ರಿಂದ 8 ಕೆ.ಜಿ. ತೂಕ ಬರುತ್ತದೆ.</p>.<p>ತಾಲ್ಲೂಕಿನ ಪುರ್ಲೆಹಳ್ಳಿ, ತಳುಕು, ಚನಗಾನಹಳ್ಳಿ, ಜಾಜೂರು, ಚನ್ನಮ್ಮನಾಗತಿಹಳ್ಳಿ, ಘಟಪರ್ತಿ, ವಲಸೆ, ಗೋಸಿಕೆರೆ, ಆಂಧ್ರ ಗಡಿ ಭಾಗದ ಕೆ.ಡಿ.ಕೋಟೆ, ಬೋಗನಹಳ್ಳಿ, ಬಸಾಪುರ, ತಿಪ್ಪಾರೆಡ್ಡಿಹಳ್ಳಿ ಮುಂತಾದ ಗ್ರಾಮ ಸೇರಿ ತಾಲ್ಲೂಕಿನಲ್ಲಿ ಒಟ್ಟು 400 ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಯಲಾಗಿದೆ.</p>.<p>ಈಗಾಗಲೇ ಕೆಲ ಗ್ರಾಮಗಳಲ್ಲಿ ಒಂದೊಂದು ಬಾರಿ ಬೆಳೆ ಕಟಾವು ಮಾಡಿ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮೂಲಕ ಬೆಳೆಗಾರರು ಉತ್ತಮ ಆದಾಯ ಪಡೆದಿದ್ದಾರೆ.</p>.<p>‘5-6 ವರ್ಷಗಳಿಂದ ಮಲ್ಚಿಂಗ್ ಹೊದಿಕೆ ವಿಧಾನ ಬಳಕೆಯಿಂದ 3 ಎಕರೆಯಲ್ಲಿ ಕಲ್ಲಂಗಡಿ ಬೆಳೆ ಬೆಳೆಯುತ್ತಿದ್ದೇನೆ. ಈ ಬಾರಿ ಬೆಳೆದ ಕಲ್ಲಂಗಡಿ ಉತ್ತಮ ಇಳುವರಿ<br />ಬಂದಿದೆ. ಫಲ ನೀಡಲು ಪ್ರಾರಂಭವಾಗಿದೆ. ಇನ್ನು 20 ದಿನಗಳಲ್ಲಿ ಪ್ರತಿ ಹಣ್ಣು 7ರಿಂದ 8 ಕೆ.ಜಿ ತೂಕ ಬರುತ್ತದೆ. ಎಕರೆಗೆ 20 ಟನ್ ಹಣ್ಣು ಬರುತ್ತದೆ. ಮಾರುಕಟ್ಟೆಯಲ್ಲಿ</p>.<p>ಒಂದು ಕೆ.ಜಿ ಗೆ ₹ 12 ಸಿಕ್ಕರೂ ಈ ಬೆಳೆಯಿಂದ ₹ 10 ಲಕ್ಷ ಆದಾಯ ಪಡೆಯುವ ನಿರೀಕ್ಷೆ ಇದೆ’ ಎನ್ನುತ್ತಾರೆ ಬೆಳೆಗಾರ ಪುರ್ಲೆಹಳ್ಳಿ ಹೊನ್ನೇಶಪ್ಪ.</p>.<p>‘ಮಲ್ಚಿಂಗ್ ಪೇಪರ್ ಹೊದಿಕೆ, ಬೀಜ, ಗೊಬ್ಬರ, ಬೇಸಾಯ ಮತ್ತು ಕೂಲಿ ಸೇರಿ ಎಕರೆಗೆ ಕನಿಷ್ಠ ₹ 1.30 ಲಕ್ಷ ವೆಚ್ಚವಾಗುತ್ತದೆ. ಹಣ್ಣನ್ನು ಚಿತ್ರದುರ್ಗ ಮಾರುಕಟ್ಟೆಗೆ ಹಾಕುತ್ತೇವೆ. ಆಂಧ್ರದಿಂದ ಬಂದ ವರ್ತಕರು ಖರೀದಿ ಮಾಡಿದ ಹಣ್ಣನ್ನು ಹೊರ ರಾಜ್ಯಗಳಿಗೆ ಕಳುಹಿಸುತ್ತಾರೆ’ ಎಂದು ಅವರು ಹೇಳಿದರು.</p>.<p>‘ಮಲ್ಚಿಂಗ್ ಪೇಪರ್ ಅಳವಡಿಕೆ ಮಾಡಿಕೊಂಡು ಕಲ್ಲಂಗಡಿ ಬೆಳೆಯುವುದರಿಂದ ಗಾತ್ರ, ಉತ್ತಮ ಗುಣಮಟ್ಟದ ಹಣ್ಣು ದೊರೆಯುತ್ತವೆ. ಗುಣಮಟ್ಟದ ಹಣ್ಣಿಗೆ ಮಾರುಕಟ್ಟೆಯಲ್ಲಿ ಯಾವಾಗಲೂ ಬೇಡಿಕೆ ಇರುತ್ತದೆ’ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಾ.ವಿರೂಪಾಕ್ಷಪ್ಪ ಹೇಳಿದರು.</p>.<p>‘ಪ್ರತಿ ಹೆಕ್ಟೆರ್ಗೆ ₹ 16 ಸಾವಿರದಂತೆ ಇಲಾಖೆಯಿಂದ 15 ಹೆಕ್ಟೆರ್ಗೆ ₹ 2.50 ಲಕ್ಷ ಸಹಾಯ ಧನ ನೀಡಲಾಗಿದೆ. ಎಲ್ಲ ತರಕಾರಿ ಬೆಳೆಗೆ ಮಲ್ಚಿಂಗ್ ಪೇಪರ್ ವಿಧಾನ ಬಳಕೆ ಮಾಡಿದರೆ ಅನುಕೂಲ. ಮಲ್ಚಿಂಗ್ ವಿಧಾನದಿಂದ ನೀರಿನ ಮಿತ ಬಳಕೆಯ ಜತೆಗೆ ಕಳೆ ಮತ್ತು ಕೀಟಬಾಧೆ ನಿವಾರಣೆ ಸುಲಭವಾಗುತ್ತದೆ’ ಎಂದು ಮಾಹಿತಿ ನೀಡಿದರು.</p>.<p>***</p>.<p>ಬೇಸಿಗೆಗಿಂತ ಚಳಿಗಾಲದಲ್ಲೇ ಹಣ್ಣಿಗೆ ಜಾಸ್ತಿ ಬೇಡಿಕೆ. ಮಲ್ಚಿಂಗ್ ಹೊದಿಕೆ ವಿಧಾನ ಬಳಕೆಯಿಂದ ಉತ್ತಮ ಗುಣಮಟ್ಟದ ಹಣ್ಣು ಬರುವುದಲ್ಲದೆ ಇಳುವರಿಯೂ ಹೆಚ್ಚುತ್ತದೆ.</p>.<p><strong>ಹೊನ್ನೇಶಪ್ಪ ಪುರ್ಲೆಹಳ್ಳಿ, ಬೆಳೆಗಾರ</strong></p>.<p>***</p>.<p>ಈರುಳ್ಳಿಯನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ತರಕಾರಿ ಬೆಳೆಗಳಿಗೆ ಮಲ್ಚಿಂಗ್ ಪೇಪರ್ ವಿಧಾನ ಬಳಕೆ ಮಾಡಿದರೆ ರೈತರು ಉತ್ತಮ ಇಳುವರಿ ಪಡೆಯಬಹುದು.</p>.<p><strong>ಡಾ.ವಿರೂಪಾಕ್ಷಪ್ಪ, ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಳ್ಳಕೆರೆ:</strong> ಮಲ್ಚಿಂಗ್ ಪೇಪರ್ ಹೊದಿಕೆ ವಿಧಾನದ ಮೂಲಕ ಬಯಲು ಸೀಮೆ ಪ್ರದೇಶದಲ್ಲಿ ಬೆಳೆಯುವ ಕಲ್ಲಂಗಡಿ ಹಣ್ಣಿಗೆದೆಹಲಿ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ.</p>.<p>ಗಾತ್ರ, ಬಣ್ಣ ಮತ್ತು ಗುಣಮಟ್ಟದ ಜತೆಗೆ ಉತ್ತಮ ರುಚಿ ನೀಡುವ ಕಾರಣ ಇಲ್ಲಿನ ಹಣ್ಣಿಗೆ ಹೊರರಾಜ್ಯಗಳಲ್ಲಿ<br />ಬೇಡಿಕೆ ಹೆಚ್ಚು. ಕಲ್ಲಂಗಡಿ ಸದ್ಯ ಹೊರರಾಜ್ಯಗಳಿಗೆ ಹೋಗುತ್ತಿದ್ದು, ರೈತರು ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾರೆ.</p>.<p>ಕೋವಿಡ್ ಸಂದರ್ಭದಲ್ಲಿ ಭಾರಿ ನಷ್ಟ ಅನುಭವಿಸಿದ್ದ ಕುಂಬಳ, ಕರಬೂಜ, ದಾಳಿಂಬೆ, ಮೋಸುಂಬಿ ಹಣ್ಣಿನ ಬೆಳೆಗಾರರು ಈ ಬಾರಿ ಕಿರಣ್ ತಳಿಯ ಕಲ್ಲಂಗಡಿಯನ್ನು ಬೆಳೆದಿದ್ದಾರೆ.ಕೊಳವೆಬಾವಿಯಲ್ಲಿ ಲಭ್ಯವಾದ ನೀರಿಗೆ ಡ್ರಿಪ್ ಅಳವಡಿಸಿಕೊಂಡು ಮಲ್ಚಿಂಗ್ ಪೇಪರ್ ಹೊದಿಕೆ ವಿಧಾನದ ಮೂಲಕ ಬೆಳೆದ ಕಿರಣ್ ತಳಿಯ ಕಲ್ಲಂಗಡಿ ಬೆಳೆ ಉತ್ತಮ ಇಳುವರಿ ಬಂದಿದೆ. ಒಂದು ಹಣ್ಣು 7ರಿಂದ 8 ಕೆ.ಜಿ. ತೂಕ ಬರುತ್ತದೆ.</p>.<p>ತಾಲ್ಲೂಕಿನ ಪುರ್ಲೆಹಳ್ಳಿ, ತಳುಕು, ಚನಗಾನಹಳ್ಳಿ, ಜಾಜೂರು, ಚನ್ನಮ್ಮನಾಗತಿಹಳ್ಳಿ, ಘಟಪರ್ತಿ, ವಲಸೆ, ಗೋಸಿಕೆರೆ, ಆಂಧ್ರ ಗಡಿ ಭಾಗದ ಕೆ.ಡಿ.ಕೋಟೆ, ಬೋಗನಹಳ್ಳಿ, ಬಸಾಪುರ, ತಿಪ್ಪಾರೆಡ್ಡಿಹಳ್ಳಿ ಮುಂತಾದ ಗ್ರಾಮ ಸೇರಿ ತಾಲ್ಲೂಕಿನಲ್ಲಿ ಒಟ್ಟು 400 ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಯಲಾಗಿದೆ.</p>.<p>ಈಗಾಗಲೇ ಕೆಲ ಗ್ರಾಮಗಳಲ್ಲಿ ಒಂದೊಂದು ಬಾರಿ ಬೆಳೆ ಕಟಾವು ಮಾಡಿ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮೂಲಕ ಬೆಳೆಗಾರರು ಉತ್ತಮ ಆದಾಯ ಪಡೆದಿದ್ದಾರೆ.</p>.<p>‘5-6 ವರ್ಷಗಳಿಂದ ಮಲ್ಚಿಂಗ್ ಹೊದಿಕೆ ವಿಧಾನ ಬಳಕೆಯಿಂದ 3 ಎಕರೆಯಲ್ಲಿ ಕಲ್ಲಂಗಡಿ ಬೆಳೆ ಬೆಳೆಯುತ್ತಿದ್ದೇನೆ. ಈ ಬಾರಿ ಬೆಳೆದ ಕಲ್ಲಂಗಡಿ ಉತ್ತಮ ಇಳುವರಿ<br />ಬಂದಿದೆ. ಫಲ ನೀಡಲು ಪ್ರಾರಂಭವಾಗಿದೆ. ಇನ್ನು 20 ದಿನಗಳಲ್ಲಿ ಪ್ರತಿ ಹಣ್ಣು 7ರಿಂದ 8 ಕೆ.ಜಿ ತೂಕ ಬರುತ್ತದೆ. ಎಕರೆಗೆ 20 ಟನ್ ಹಣ್ಣು ಬರುತ್ತದೆ. ಮಾರುಕಟ್ಟೆಯಲ್ಲಿ</p>.<p>ಒಂದು ಕೆ.ಜಿ ಗೆ ₹ 12 ಸಿಕ್ಕರೂ ಈ ಬೆಳೆಯಿಂದ ₹ 10 ಲಕ್ಷ ಆದಾಯ ಪಡೆಯುವ ನಿರೀಕ್ಷೆ ಇದೆ’ ಎನ್ನುತ್ತಾರೆ ಬೆಳೆಗಾರ ಪುರ್ಲೆಹಳ್ಳಿ ಹೊನ್ನೇಶಪ್ಪ.</p>.<p>‘ಮಲ್ಚಿಂಗ್ ಪೇಪರ್ ಹೊದಿಕೆ, ಬೀಜ, ಗೊಬ್ಬರ, ಬೇಸಾಯ ಮತ್ತು ಕೂಲಿ ಸೇರಿ ಎಕರೆಗೆ ಕನಿಷ್ಠ ₹ 1.30 ಲಕ್ಷ ವೆಚ್ಚವಾಗುತ್ತದೆ. ಹಣ್ಣನ್ನು ಚಿತ್ರದುರ್ಗ ಮಾರುಕಟ್ಟೆಗೆ ಹಾಕುತ್ತೇವೆ. ಆಂಧ್ರದಿಂದ ಬಂದ ವರ್ತಕರು ಖರೀದಿ ಮಾಡಿದ ಹಣ್ಣನ್ನು ಹೊರ ರಾಜ್ಯಗಳಿಗೆ ಕಳುಹಿಸುತ್ತಾರೆ’ ಎಂದು ಅವರು ಹೇಳಿದರು.</p>.<p>‘ಮಲ್ಚಿಂಗ್ ಪೇಪರ್ ಅಳವಡಿಕೆ ಮಾಡಿಕೊಂಡು ಕಲ್ಲಂಗಡಿ ಬೆಳೆಯುವುದರಿಂದ ಗಾತ್ರ, ಉತ್ತಮ ಗುಣಮಟ್ಟದ ಹಣ್ಣು ದೊರೆಯುತ್ತವೆ. ಗುಣಮಟ್ಟದ ಹಣ್ಣಿಗೆ ಮಾರುಕಟ್ಟೆಯಲ್ಲಿ ಯಾವಾಗಲೂ ಬೇಡಿಕೆ ಇರುತ್ತದೆ’ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಾ.ವಿರೂಪಾಕ್ಷಪ್ಪ ಹೇಳಿದರು.</p>.<p>‘ಪ್ರತಿ ಹೆಕ್ಟೆರ್ಗೆ ₹ 16 ಸಾವಿರದಂತೆ ಇಲಾಖೆಯಿಂದ 15 ಹೆಕ್ಟೆರ್ಗೆ ₹ 2.50 ಲಕ್ಷ ಸಹಾಯ ಧನ ನೀಡಲಾಗಿದೆ. ಎಲ್ಲ ತರಕಾರಿ ಬೆಳೆಗೆ ಮಲ್ಚಿಂಗ್ ಪೇಪರ್ ವಿಧಾನ ಬಳಕೆ ಮಾಡಿದರೆ ಅನುಕೂಲ. ಮಲ್ಚಿಂಗ್ ವಿಧಾನದಿಂದ ನೀರಿನ ಮಿತ ಬಳಕೆಯ ಜತೆಗೆ ಕಳೆ ಮತ್ತು ಕೀಟಬಾಧೆ ನಿವಾರಣೆ ಸುಲಭವಾಗುತ್ತದೆ’ ಎಂದು ಮಾಹಿತಿ ನೀಡಿದರು.</p>.<p>***</p>.<p>ಬೇಸಿಗೆಗಿಂತ ಚಳಿಗಾಲದಲ್ಲೇ ಹಣ್ಣಿಗೆ ಜಾಸ್ತಿ ಬೇಡಿಕೆ. ಮಲ್ಚಿಂಗ್ ಹೊದಿಕೆ ವಿಧಾನ ಬಳಕೆಯಿಂದ ಉತ್ತಮ ಗುಣಮಟ್ಟದ ಹಣ್ಣು ಬರುವುದಲ್ಲದೆ ಇಳುವರಿಯೂ ಹೆಚ್ಚುತ್ತದೆ.</p>.<p><strong>ಹೊನ್ನೇಶಪ್ಪ ಪುರ್ಲೆಹಳ್ಳಿ, ಬೆಳೆಗಾರ</strong></p>.<p>***</p>.<p>ಈರುಳ್ಳಿಯನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ತರಕಾರಿ ಬೆಳೆಗಳಿಗೆ ಮಲ್ಚಿಂಗ್ ಪೇಪರ್ ವಿಧಾನ ಬಳಕೆ ಮಾಡಿದರೆ ರೈತರು ಉತ್ತಮ ಇಳುವರಿ ಪಡೆಯಬಹುದು.</p>.<p><strong>ಡಾ.ವಿರೂಪಾಕ್ಷಪ್ಪ, ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>