ಚಂದ್ರವಳ್ಳಿ, ಅಗಸನಕಲ್ಲು, ಚೇಳುಗುಡ್ಡ, ಎಪಿಎಂಸಿಯ ಈದ್ಗಾ ಮೈದಾನ ಹಾಗೂ ಮಸೀದಿಗಳಲ್ಲಿ ಧರ್ಮ ಗುರುಗಳು ಕುರಾನ್ ಪಠಿಸಿ, ಸಂದೇಶ ಬೋಧಿಸಿದರು. ಮೈದಾನದಲ್ಲಿ ಸಾವಿರಾರು ಮಂದಿ ಏಕಕಾಲಕ್ಕೆ ಪ್ರಾರ್ಥನೆ ಸಲ್ಲಿಸಿದ್ದು ವಿಶೇಷವಾಗಿತ್ತು. ಬಳಿಕ ಪರಸ್ಪರ ಆಲಂಗಿಸಿಕೊಂಡು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.