ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಚಿತ್ರದುರ್ಗ: ಗೋಶಾಲೆ ತೆರೆಯಲು ಜಿಲ್ಲಾಡಳಿತ ಸಜ್ಜು

Published : 11 ಡಿಸೆಂಬರ್ 2023, 7:40 IST
Last Updated : 11 ಡಿಸೆಂಬರ್ 2023, 7:40 IST
ಫಾಲೋ ಮಾಡಿ
Comments
ಮೇವು ಅರಸಿ ಚಿತ್ರದುರ್ಗ ನಗರದ ಮೂಲಕ ಜೋಗಿಮಟ್ಟಿ ಬೆಟ್ಟಕ್ಕೆ ಹೊರಟಿರುವ ಜಾನುವಾರುಗಳು –ಪ್ರಜಾವಾಣಿ ಚಿತ್ರ/ವಿ.ಚಂದ್ರಪ್ಪ 
ಮೇವು ಅರಸಿ ಚಿತ್ರದುರ್ಗ ನಗರದ ಮೂಲಕ ಜೋಗಿಮಟ್ಟಿ ಬೆಟ್ಟಕ್ಕೆ ಹೊರಟಿರುವ ಜಾನುವಾರುಗಳು –ಪ್ರಜಾವಾಣಿ ಚಿತ್ರ/ವಿ.ಚಂದ್ರಪ್ಪ 
ಮೊಳಕಾಲ್ಮುರು ತಾಲ್ಲೂಕಿನ ಕುರಿಗಾಹಿಗಳು ಮೇವು ಅರಸಿ ದಾವಣಗೆರೆ ಜಿಲ್ಲೆಯ ಊರೊಂದರಲ್ಲಿ ಬೀಡುಬಿಟ್ಟಿರುವುದು
ಮೊಳಕಾಲ್ಮುರು ತಾಲ್ಲೂಕಿನ ಕುರಿಗಾಹಿಗಳು ಮೇವು ಅರಸಿ ದಾವಣಗೆರೆ ಜಿಲ್ಲೆಯ ಊರೊಂದರಲ್ಲಿ ಬೀಡುಬಿಟ್ಟಿರುವುದು
ದಿವ್ಯ ಪ್ರಭು
ದಿವ್ಯ ಪ್ರಭು
ತಾಲ್ಲೂಕು ಮಟ್ಟದ ಕಾರ್ಯಪಡೆಯ ಕೋರಿಕೆಯ ಮೇರೆಗೆ ಗೋಶಾಲೆ ತೆರೆಯಲಾಗುವುದು. ಅಗತ್ಯ ಸಿದ್ಧತೆ ಕೈಗೊಳ್ಳಲಾಗುತ್ತಿದ್ದು ಬರ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಂಪೂರ್ಣ ಸಜ್ಜಾಗಿದೆ
–ದಿವ್ಯ ಪ್ರಭು ಜಿ.ಆರ್‌.ಜೆ ಜಿಲ್ಲಾಧಿಕಾರಿ
ಎ.ಬಾಬುರತ್ನ
ಎ.ಬಾಬುರತ್ನ
ಮೇವು ಬೀಜದ ಕಿಟ್‌ಗೆ ರೈತರಿಂದ ಬೇಡಿಕೆ ಹೆಚ್ಚಾಗಿದೆ. ಇನ್ನೂ 30 ಸಾವಿರ ಬೀಜದ ಕಿಟ್‌ಗಳನ್ನು ಪೂರೈಸುವಂತೆ ಪ್ರಸ್ತಾವ ಸಲ್ಲಿಸಲಾಗಿದೆ. ಮೇವು ಕೊರತೆಯಾಗದಂತೆ ಎಚ್ಚರವಹಿಸಲಾಗಿದೆ–
ಎ.ಬಾಬುರತ್ನ ಉಪನಿರ್ದೇಶಕ ಪಶುಪಾಲನಾ ಇಲಾಖೆ
ಸರ್ಕಾರ ಕುರಿ ಮೇಕೆ ಸಾಕಣೆದಾರರನ್ನು ನಿರ್ಲಕ್ಷ್ಯ ಮಾಡುತ್ತಿದೆ. ಇವುಗಳಿಗೂ ನೀರು ಮೇವಿನ ವ್ಯವಸ್ಥೆ ಮಾಡಿದಾಗ ಮಾತ್ರ ಬರಪರಿಹಾರಕ್ಕೆ ನಿಜವಾದ ಅರ್ಥ ಸಿಗಲಿದೆ
–ವಿಶ್ವ ಕುರಿಗಾಹಿ ಮೊಳಕಾಲ್ಮುರು
ದೇವರೆತ್ತು ಮೇವಿಗೆ ₹ 10 ಲಕ್ಷ
ಮ್ಯಾಸಬೇಡ ಬುಡಕಟ್ಟು ಸಮುದಾಯದ ದೇವರೆತ್ತುಗಳ ಮೇವಿಗೆ ರಾಜ್ಯ ಸರ್ಕಾರ ₹ 10 ಲಕ್ಷ ಅನುದಾನ ಒದಗಿಸಿದ್ದು ಅಗತ್ಯಕ್ಕೆ ಅನುಗುಣವಾಗಿ ಮೇವು ಪೂರೈಸಲು ಪಶು ಸಂಗೋಪನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಜ್ಜಾಗಿದೆ. ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಹೆಚ್ಚು ದೇವರೆತ್ತುಗಳು ಇರುವುದರಿಂದ ₹ 5 ಲಕ್ಷವನ್ನು ಒದಗಿಸಲಾಗಿದೆ. ಮೊಳಕಾಲ್ಮುರು ತಾಲ್ಲೂಕಿಗೆ ₹ 3.5 ಲಕ್ಷ ಹಾಗೂ ಚಿತ್ರದುರ್ಗ ತಾಲ್ಲೂಕಿಗೆ ₹ 1.5 ಲಕ್ಷ ಅನುದಾನ ಹಂಚಿಕೆ ಮಾಡಲಾಗಿದೆ. ದೇವರೆತ್ತುಗಳಿಗೆ ಮೇವಿನ ಅಗತ್ಯ ಇದ್ದಾಗ ಈ ಅನುದಾನದಲ್ಲಿ ಖರೀದಿ ಮಾಡುವಂತೆ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ದೇವರೆತ್ತುಗಳ ಮೇವು ಪೂರೈಕೆಗೆ ಅನುದಾನ ಒದಗಿಸುವಂತೆ ಹಾಗೂ ಗೋಶಾಲೆ ಸೌಲಭ್ಯ ಕಲ್ಪಿಸುವಂತೆ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಒತ್ತಾಯಿಸಿದ್ದರು. ಮೊಳಕಾಲ್ಮುರು ಶಾಸಕ ಎನ್‌.ವೈ.ಗೋಪಾಲಕೃಷ್ಣ ಅವರು ಇದನ್ನು ಬೆಂಬಲಿಸಿದ್ದರು. ಇದು ಸರ್ಕಾರದ ಮೇಲೆ ಒತ್ತಡ ಸೃಷ್ಟಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT