ಮಾರ್ಗ ಮಧ್ಯದಲ್ಲಿ ವಾಸ್ತವ್ಯ ಹೂಡಲು ಸಕಲ ವ್ಯವಸ್ಥೆಯೂ ಜೋಡೆತ್ತಿನ ಬಂಡಿಯಲ್ಲಿದ್ದವು. ಸಜ್ಜೆ ರೊಟ್ಟಿ, ಗೂರೆಳ್ಳು ಚಟ್ನಿಪುಡಿ, ಮೊಸರು ಬುತ್ತಿಯ ಊಟ ಸವಿಯುತ್ತಿದ್ದರು. ಮಾರ್ಗ ಮಧ್ಯದ ಗ್ರಾಮಗಳ ಜನರು ಇವರಿಗೆ ನೆರವಾದರು. ದೇವರ ಮೂರ್ತಿಗಳನ್ನು ತಲೆಯ ಮೇಲೆ ಹೊತ್ತಿದ್ದ ಭಕ್ತರು ಜೋಡೆತ್ತಿನ ಬಂಡಿಗಳೊಂದಿಗೆ ಹೆಜ್ಜೆಹಾಕಿದರು. ಭಾನುವಾರ ಸಂಜೆ ನೊಣವಿನಹಳ್ಳ ತಲುಪಿ ಚಿಲುಮೆಯ ನೀರಿನಲ್ಲಿ ಗಂಗಾಪೂಜೆ ನೆರವೇರಿಸಿದರು. ಸೋಮವಾರ ಮತ್ತೆ ಇದೇ ಮಾರ್ಗವಾಗಿ ಊರುಗಳಿಗೆ ಮರಳಿದರು.